ಬಾಗಲಕೋಟೆಯಲ್ಲಿ ಬಸ್ – ಲಾರಿ ನಡುವೆ ಅಪಘಾತ ಓರ್ವ ವಿದ್ಯಾರ್ಥಿ ಸಾವು…!

ಬಾಗಲಕೋಟೆ :

ಬಸ್ ಮತ್ತು ಗೂಡ್ಸ್‌ ಲಾರಿ ನಡುವಿನ ಅಪಘಾತದಲ್ಲಿ ವಿದ್ಯಾರ್ಥಿಯೊರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟ ತಾಲೂಕಿನ ವಿದ್ಯಾಗಿರಿ – ಗದ್ದನಕೇರಿ ರಸ್ತೆಯಲ್ಲಿರುವ ಇಟಗಿ ಭೀಮಾಂಬಿಕಾ ದೇವಿ ದೇವಾಲಯ ಹತ್ತಿರ ಇಂದು ಬೆಳಗ್ಗೆ ಸುಮಾರು 10: 45 ರ ವೇಳೆಗೆ ನಡೆದಿದೆ. ಅಮಲಝರಿ ಮತ್ತು ಬಾಗಲಕೋಟೆ ನಡುವೆ ಸಂಚರಿಸುವ  ಬಸ್  ಮತ್ತು ಗೂಡ್ಸ್ ಲಾರಿ ನಡುವೆ ಈ ಅಪಘಾತವಾಗಿದೆ, 

ಇದನ್ನು ಕಂಡ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದು, ಆಂಬುಲೆನ್ಸ್ ಸ್ಥಳಕ್ಕೆ ಬರುವ ಹೊತ್ತಿಗಾಗಲೇ ಓರ್ವ   ವಿದ್ಯಾರ್ಥಿ ಯೊಬ್ಬ ಸಾವನ್ನಪ್ಪಿದ್ದು  ಅನೇಕರಿಗೆ ಗಾಯಗಳಾಗಿವೆ. ಮೃತ ವಿದ್ಯಾರ್ಥಿಯ ಮುಖ ನಜ್ಜು ಗುಜ್ಜಾಗಿದ್ದು , ಮುಖದ ತುಂಡುಗಳು ರಸ್ತೆ ಬದಿಯಲ್ಲಿ ತುಂಡಾಗಿ ಬಿದ್ದಿವೆ, ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯನ್ನು ಅರಕೇರಿ ಗ್ರಾಮದ ರಾಹುಲ್ ಜಗದೀಶ್ ಪಾಟೀಲ ಎಂದು ಹೇಳಲಾಗುತ್ತಿದೆ.ಈತ ಸಕ್ರಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾನೆಂದು ಸದ್ಯ ಮಾಹಿತಿ ಲಭ್ಯವಾಗಿದೆ. ಸ್ನೇಹಿತರ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button