ಐತಿಹಾಸಿಕ ದಾಖಲೆ ಬರೆದ ಸೊರಬ ತಾಲೂಕು ಕಚೇರಿಯ ತಹಶೀಲ್ದಾರರ ವರ್ಗಾವಣೆ….!

ಶಿವಮೊಗ್ಗ ,ಸೊರಬ (ಜ.23):

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಲ್ಲಿ ಕಳೆದ 4 ವರ್ಷ 9 ತಿಂಗಳಲ್ಲಿ ಒಟ್ಟು 14 ತಹಶೀಲ್ದಾರ್ ಗಳು ವರ್ಗಾವಣೆಗೊಂಡಿದ್ದು ಇದೀಗ 15ನೇ ತಹಶೀಲ್ದಾರ್ ಆಗಮನಕ್ಕೆ ಸೊರಬ ತಾಲೂಕು ಕಚೇರಿ ಕಾಯುತ್ತಲಿದೆ.

ಕುಮಾರ್ ಬಂಗಾರಪ್ಪ ಅವರು ಸೊರಬ ಕ್ಷೇತ್ರದ ಶಾಸಕರಾಗಿ ಬಿಜೆಪಿ ಪಕ್ಷದಿಂದ ಗೆಲವು ಸಾಧಿಸಿದ್ದಾರೆ.ಅಲ್ಲದೆ ವಿರೋಧ ಪಕ್ಷದಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಮಧು ಬಂಗಾರಪ್ಪ ಇದ್ದಾರೆ. ಬಿಜೆಪಿಯ ಶಾಸಕ ಕುಮಾರ್ ಬಂಗಾರಪ್ಪ ಮತ್ತು ತಹಶೀಲ್ದಾರ್ ಗಳ ನಡುವಿನ ಸಮನ್ವಯತೆಯ ಕಾರಣದಿಂದಲೇ ಹೆಚ್ಚೆಂದರೆ ನಾಲ್ಕು ತಿಂಗಳಗಳ ಕಾಲ ಸೊರಬದಲ್ಲಿ ತಹಶೀಲ್ದಾರರು ಕಾರ್ಯ ನಿರ್ವಹಿಸಿದ್ದಾರೆ. ಸೊರಬದಲ್ಲಿ ಕೇವಲ 2 – 3 – 4 ತಿಂಗಳುಗಳಿಗೆ ಒಬ್ಬರಂತೆ ಒಬ್ಬರು ತಹಶೀಲ್ದಾರ್ ಗಳ ವರ್ಗಾವಣೆ ನಡೆಯುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ತಹಶೀಲ್ದಾರ್ ಗಳ ವರ್ಗಾವಣೆಯಲ್ಲೂ ರಾಜಕೀಯ ಇದೆಯಾ..?! ಮೊದಲಾದ ಅನುಮಾನಗಳು ಮೂಡುತ್ತಿವೆ.

ಶಾಸಕ ಕುಮಾರ ಬಂಗಾರಪ್ಪ ಅಧಿಕಾರಾವಧಿಯಲ್ಲಿ ಬದಲಾವಣೆಯಾದ ತಹಸೀಲ್ದಾರ್ ಗಳ ವಿವರ

1. ಸಿ ಪಿ ನಂದಕುಮಾರ್ 19/3/2018 ರಿಂದ 2/7/2018

2. ಎಲ್ ಜಿ ಚಂದ್ರಶೇಖರ್ 2/7/2018 ರಿಂದ 14/8/2018
3. ಹೂ ಕೈಕಸನ್14/8/ 2018 ರಿಂದ 31/10/2018

4. ಜೆ ಬಿ ಶ್ರೀಧರ ಮೂರ್ತಿ31/10/2018 ರಿಂದ 9/11/2018

5. ಮಮತಾ ಹೊಸಗೌಡರ್13/11/2018 ರಿಂದ 30/11/2018

6. ಗೋವಿಂದರಾಜ್ ಬಿ ಎಂ1/12/2018 ರಿಂದ 21/01/2019

7. ಎಂ ಪಿ ಕವಿರಾಜ್
23/01/2019 ರಿಂದ 28/01/2019

8. ಜೆ ಬಿ ಶ್ರೀಧರ ಮೂರ್ತಿ
28/01/2019 ರಿಂದ 03/07/2019

9. ಪಟ್ಟರಾಜಗೌಡ
03//07/2019 ರಿಂದ 19/05/2020

10. ನಫೀಸಾ ಬೇಗಂ
19/05/2020 ರಿಂದ 7/9/2020

11. ಶಿವಾನಂದ ಪಿ ರಾಣೆ 

12. ಮಂಜುಳಾ ಬಿ ಹಗದಾಳ್

13. ಶೋಭಾ ಲಕ್ಷ್ಮಿ

14. ಡಾ ಮೋಹನ್ ಭಸ್ಮೆ
15.  ——————-

ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಪ್ರತಿನಿಧಿಸುವ ಸೊರಬ ಕ್ಷೇತ್ರದಲ್ಲಿ ತಹಸಿಲ್ದಾರಗಳು ವರ್ಗಾವಣೆ ಎಂಬುವುದು ಐತಿಹಾಸಿಕ ದಾಖಲೆ ನಿರ್ಮಾಣ ಮಾಡಲಾಗಿದೆ. ಹಾಲಿ ತಹಸೀಲ್ದಾರ್ ಡಾ. ಮೋಹನ್ ಭಸ್ಮ ಅವರನ್ನು ಇದೆ ಶನಿವಾರ ಸರ್ಕಾರ ಹೊರಡಿಸಿದ ಆದೇಶದಲ್ಲಿ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ. ಇದು ಈ ಅವಧಿಯ 14ನೇ ತಹಸೀಲ್ದಾರ್ ವರ್ಗಾವಣೆ ಆಗಿದ್ದು ಇದೀಗ 15ನೇ ತಹಶೀಲ್ದಾರ್ ಸೊರಬ ತಾಲೂಕ್ ಕಚೇರಿಗೆ ಕಾಯುತ್ತಿದೆ.

ಆದಾಯ ಪ್ರಮಾಣ ಪತ್ರ,ಜಾತಿ ಪ್ರಮಾಣ ಪತ್ರ,ಖಾತೆ ಬದಲಾವಣೆ, ಬಗರ್ ಹುಕುಂ ಮಂಜೂರಾತಿ, ಆಶ್ರಯ ನಿವೇಶನಗಳ ಹಂಚಿಕೆ, ಭೂಸುಧಾರಣಿ ಅರ್ಜಿ ವಿಲೇವಾರಿ, ಸಕಾಲ ದೃಢೀಕರಣ, ಭೂವ್ಯಾಜ್ಯಗಳ ಇತ್ಯರ್ಥ, ದಾರಿ ಸಮಸ್ಯೆ ವ್ಯಾಜ್ಯ, ದೇವಾಲಯಗಳ ಆಸ್ತಿ ಸಂರಕ್ಷಣೆ, ಪಡಿತರ ಚೀಟಿ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣಿ, ತತ್ಕಾಲ ಪೋಡಿ, ಹದ್ದುಬಸ್ತು, ಇ – ನಕ್ಷೆ, ನೆರೆಹಾನಿ, ಅನೇಕ ದೃಢೀಕರಣ ಸೇರಿದಂತೆ ಹಲವು ಕೆಲಸಗಳು ಹಾಗೆ ಬಿದ್ದಿವೆ.‌ ಹೀಗೆ ಸೊರಬ ಕ್ಷೇತ್ರಗಳಲ್ಲಿ ತಹಸೀಲ್ದಾರ್ಗಳ ವರ್ಗಾವಣೆ ಎಂಬುದು ನಾನಾ ರಾಜಕೀಯ ಹಾಗೂ ಅನುಮಾನಗಳಿಗೆ ಎಡೆಮಾಡಿದೆ.

ಪದೇ ಪದೇ ಸೊರಬ ತಾಲೂಕು ಕಚೇರಿಯಲ್ಲಿ ತಹಸಿಲ್ದಾರಗಳ ವರ್ಗಾವಣೆಯಿಂದಾಗಿ ತಾಲೂಕು ಕಚೇರಿಯ ಆಡಳಿತ ವ್ಯವಸ್ಥೆ ಹಾಗೂ ಕಡತಗಳು ಯಾರು ನೋಡದೆ ಹಾಗೆ ಬಿದ್ದಿವೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button