ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿಗಳು ಶ್ರೀ ಹೆಚ್.ಎನ್ ನಾಗಮೋಹನ್ ದಾಸ್ ರವರು ಏಕಸದಸ್ಯ ವಿಚಾರಣಾ ಆಯೋಗಕ್ಕೆ – ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಮಾಜ ಒಳ ಮೀಸಲಾತಿ ಹೋರಾಟ ಸಮಿತಿ ಯಿಂದ ಮನವಿ ಸಲ್ಲಿಸಿದರು.
ಬೆಂಗಳೂರು ಫೆ.02

ಕರ್ನಾಟಕ ರಾಜ್ಯ ಸಮಗಾರ, (ಚಮ್ಮಾರ) ಹರಳಯ್ಯ ಸಮಾಜ ಒಳ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ-ಸಮಗಾರ-ಮಚಗಾರ-ಡೋಹರ-ಡಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ, ಬಹುಜನ ಸಮಾಜ ಪಾರ್ಟಿ, ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ, ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟರ ಒಳ ಮೀಸಲಾತಿ ಒಕ್ಕೂಟ, ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ), ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಈ ರೀತಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾವು 3 ದಶಕದಿಂದಲೂ ಒಳ ಮಿಸಲಾತಿಗಾಗಿ ಹೋರಾಡುತ್ತಲೇ ಬಂದಿದ್ದೇವೆ.ಕಳೆದ ಹಿಂದಿನ ಎಲ್ಲಾ ಸರ್ಕಾರದ ಮುಂದೆ ಒಳ ಮೀಸಲಾತಿಗಾಗಿ ಮನವಿ ಸಲ್ಲಿಸುವ ಸಂದರ್ಭದಲ್ಲಿ ಭಾಗಿಯಾಗಿದ್ದೇವೆ. ಕರ್ನಾಟಕದ 101 ಪರಿಶಿಷ್ಟ ಜಾತಿಗಳ ವರ್ಗಿಕರಣವು ಮಾನ್ಯ ನ್ಯಾಯಮೂರ್ತಿ ಎ.ಜೆ ಸದಾಶಿವ ರವರ ಆಯೋಗದ ಶಿಫಾರಸ್ಸಿನಲ್ಲಿ ಸರಿಯಾದ ದತ್ತಾಂಶಗಳ ಆಧಾರದ ಮೇಲೆ ವಿವರಣೆಯನ್ನು ಮಾಡಲಾಗಿದೆ. ಈ ಹಿಂದೆಯೇ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕರ್ನಾಟಕದಲ್ಲಿ ಚರ್ಮಕಾರರು ಯಾರು ಎಂಬುವ ಶಿಫಾರಸ್ಸಿನಂತೆ ವರದಿಯಲ್ಲಿ “ಬಾಂಬಿ” ಎಂಬ ಕಾಲಂ ನಲ್ಲಿ ಪುಟ ಸಂಖ್ಯೆ 119 ರಲ್ಲಿ ಬಾಂಬಿ, ಅಸಾದರು. ಅಸಾದಿ, ಚಮಾಡಿಯಾ, ಚಮಾರ್, ಚಾಂಬಾರ್, ಚಮಗಾರ, ಹರಳಯ್ಯ, ಹರಳಿ, ಕಲ್ಪಾ, ಮಚಿಗಾರ, ಮೋಚಿಗಾರ, ಮಾದರ, ಮಾದಿಗ. ಮೋಚಿ, ಮಚಿ, ತೆಲಗು ಮೋಚಿ, ಕಾಮಾಟಿ ಮೋಚಿ, ರಾಣೆಗಾರ್, ರೋಹಿದಾಸ್, ರೋಹಿತ್, ಸಮಗಾರ್ ಎಂದು ಚರ್ಮ ವೃತ್ತಿ ಆಧಾರಿತ ಜಾತಿಗಳು ಎಂದು ಒಂದೇ ಗುಂಪಿನಲ್ಲಿ ಗುರ್ತಿಸಿರುವುದು ಸರಿ ಇರುತ್ತದೆ.ಈ ಸಂದರ್ಭದಲ್ಲಿ ಆಯಾ ಜಾತಿ ಉಪ ಜಾತಿಗಳ ಸಂಖ್ಯೆಯನ್ನು ಪ್ರತ್ಯೇಕವಾಗಿ ಗುರ್ತಿಸುವುದು ಕಷ್ಟ ಸಾಧ್ಯವಾಗುತ್ತದೆ. ಸಮಗಾರರಲ್ಲಿ ಆಯೋಗದ ವರದಿ ಪ್ರಕಾರ ಸಮಗಾರ, ಬಾಂಬಿ, ಚಮಾಡಿಯಾ, ಚಮಾರ್, ಚಾಂಬಾರ್, ಚಮಗಾರ, ಹರಳಯ್ಯ, ಹರಳಿ, ಕಲ್ಲಾ, ರೋಹಿದಾಸ್, ರೋಹಿತ್ ಒಟ್ಟು 11 ಉಪನಾಮಗಳಿವೆ. ಇವಲ್ಲದೇ ಅಂಗವಂತ ಸಮಗಾರ. ಆರ್ಯ ಸಮಗಾರ ಇನ್ನೂ ಹಲವು ಉಪ ನಾಮಗಳನ್ನು ಹೊಂದಿದ್ದಾರೆ ಮತ್ತು ಮಾದಿಗ-ಸಮಗಾರ-ಮಚಗಾರ-ಡೋಹರ ಜಾತಿಗಳು ಮೂಲ ಅಸ್ಪೃಶ್ಯ ಜಾತಿಗಳು ಒಂದನ್ನೊಂದು ಅವಲಂಬಿಸಿ ತಮ್ಮ ಬದುಕು ಕಂಡು ಕೊಂಡಿದ್ದಾರೆ.

ಕರ್ನಾಟಕ ರಾಜ್ಯದ ಮೂಲ ಅಸ್ಪೃಶ್ಯರು ಎಂದರೆ ಪಂಚಮರು 1) ಹೊಲೆಯ 2) ಮಾದಿಗ 3) ಸಮಗಾರ 4) ಮಚಗಾರ 5) ಡೋಹರ ರಾಗಿದ್ದಾರೆ. ಆದರೆ ಈಗ ಬೇರೆ ಬೇರೆ ಸ್ಪೃಶ್ಯ ಜಾತಿಗಳು ಸೇರಿ 101 ಜಾತಿಗಳಾಗಿವೆ. ಈ ಮೇಲಿನ 5 ಜಾತಿಗಳಿಗೆ ಅವರದೇ ಆದ ಉಪ ನಾಮಗಳು ಅಥವಾ ಉಪ ಜಾತಿಗಳನ್ನು ಹೊಂದಿದ ಜಾತಿಗಳು ಸಹ ಪಟ್ಟಿಯಲ್ಲಿ ಸೇರಿಸಿ ಕೊಂಡಿರುವುದರಿಂದ ಇದನ್ನೇ ಗೊಂದಲ ಮಯವಾಗಿ ಕೆಲವರು ಬಿಂಬಿಸುತ್ತಿದ್ದಾರೆ. ಸದಾಶಿವ ಆಯೋಗದ ಶಿಪಾರಸ್ಸಿನಂತೆ 49 ಜಾತಿಗಳನ್ನು “ಎ” ಗುಂಪಿಗೆ ಸೇರಿಸಿದ್ದು, ಅದರಲ್ಲಿ ಮಾದಿಗ ಜಾತಿಗೆ ಸೇರಿದ ಉಪ ನಾಮಗಳು ಎಂದರೆ 1) ಆದಿ ಅಂಧ್ರ 2) ಆದಿ ದ್ರಾವಿಡ 3) ಆದಿ ಕನಾಟಕ 4) ಮಾದಿಗ 5) ಮಾದರ್ 6) ಮಾತಂಗ 7) ಮಾದರಿ 8) ಮಾಂಗ್ 9) ತೋಟಿ 10) ಎಡಗೈ 11) ಜಾಂಬುವುಲು 12) ಅರುಂದತಿಯಾರ್ 13) ದಕ್ಕಲಿಗ 14) ಚಾಂಡಾಲ 15) ដល់ 16) 17) ໖ 18) 08 19) ตอกกรอง (20) ದೊಕ್ತಲವಾರ್ 21) ಜಗ್ಗಲಿ 22) ಕಡಿಯಾರ್ 23) ಮಾಚಾಲ 24) ಮಿನಿಮಾದಿಗ 25) ಮಾಂಗ್ ಗಾರುಡಿ 26) ಮನ್ನೆ 27) ಪಂಚಮ 28) ಸಂಬನ್ 29) ಸಿಂದೊಳ್ಳು ಒಟ್ಟು 29 ಹಾಗೂ ಸಮಗಾರ ಜಾತಿಗೆ ಸೇರಿದ ಉಪ ನಾಮಗಳು 1) ಸಮಗಾರ 2) ಬಾಂಬಿ 3) ಚಮಾಡಿಯ 4) ಚಮಾರ್ 5) ಚಂಬಾರ್ 6) ಚಮಗಾರ್ 7) ಹರಳಯ್ಯ 8) ಹರಳಿ 9) ಕಲ್ಪಾ 10) ರೋಹಿದಾಸ್ 11) ರೋಹಿತ್ ಒಟ್ಟು 11 ಉಪ ನಾಮಗಳು. ಮಚಗಾರರಲ್ಲಿ 1) ಮಚಿಗಾರ 2) ಮೋಚಿಗಾರ್. 3) ಮೋಚಿ 4) ಮಚಿ 5) ತೆಲಗು ಮೋಚಿ 6) ಕಾಮಾಟಿ ಮೋಚಿ ಎಂದು 6 ಉಪ ನಾಮಗಳು ಮತ್ತು ಡೋಹರರಲ್ಲಿ 1) ಡೋರ್ 2) ಕಕ್ಕಯ್ಯ 3) ಕಂಕಯ್ಯ ಎಂದು 3 ಉಪ ನಾಮಗಳನ್ನು ಹೊಂದಿದೆ. ಈ ರೀತಿ ಒಟ್ಟು 49 ಉಪ ಪಂಗಡಗಳ ಹೆಸರಿನಲ್ಲಿ ಕರೆಯಲ್ಪಡುತ್ತಾರೆ.ಈ ರೀತಿ ಚರ್ಮಗಾರಿಕೆ ಕುಲವೃತ್ತಿ ಆಧಾರದ ಮೇಲೆ ಹಾಗೂ ಡಾ. ಬಾಬು ಜಗಜೀವನ್ರಾಮ್ ರವರನ್ನು ನಮ್ಮ ನಾಯಕರೆಂದು ಒಪ್ಪಿ ಕೊಳ್ಳುವ ಇವರೆಲ್ಲರನ್ನೂ ಒಂದೇ ಗುಂಪಿಗೆ ಸೇರಿಸಿದ್ದು, ಇದನ್ನು ಮುಂದುವರಿಸಲು ನಮ್ಮ ಒತ್ತಾಯವಿದೆ. ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗವು ಬಾಗಲಕೋಟೆಗೆ ದಿನಾಂಕ: 17.10.2006 ರಂದು ಭೇಟಿ ನೀಡಿದ ಸಮಯದಲ್ಲಿ ಸಮಗಾರ ಸಮಾಜದಿಂದ ಅಂದು ದ.ಸಂ.ಸ ಜಿಲ್ಲಾ ಸಂಚಾಲಕರಾಗಿದ್ದ ವೈ.ಸಿ.ಕಾಂಬಳಿ ಹಾಗೂ ಸಮಾಜದ ಮುಖಂಡರಾದ ಯಲ್ಲಪ್ಪ ಬೆಂಡಿಗೇರಿ, ಅಶೋಕ್ ಕಲಾದಗಿ ಮುಂತಾದವರು ಭಾಗವಹಿಸಿದ್ದು.

ಅಂತೆಯೇ ಗದಗ ಜಿಲ್ಲೆಗೆ ದಿನಾಂಕ: 27.07.2006 ರಂದು ಭೇಟಿ ನೀಡಿದಾಗ ಸಮಗಾರ ಸಮಾಜದ ಎಲ್.ಡಿ.ಚಂದಾವರಿ, ರಮೇಶ್ ತೇರದಾಳ್, ಶಿವಮೂರ್ತೆಪ್ಪ ಅಗಸಿಮನಿ, ವೆಂಕಟೇಶ್ ಎಂ ನರಗುಂದ, ಪರಶುರಾಮ್ ಅಗಸಿಮನಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಚಪ್ಪ ಜೋಗಳೇಕರ್ ಭಾಗವಹಿಸಿದ್ದಲ್ಲದೆ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯಪುರ, ಧಾರವಾಡ, ಬೆಳಗಾವಿ, ಹಾವೇರಿ, ಗುಲ್ಬರ್ಗ, ಬೀದರ್, ಕೊಪ್ಪಳ ಮುಂತಾದ ಜಿಲ್ಲೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿ ಒಳ ಮೀಸಲಾತಿ ವರ್ಗೀಕರಣವನ್ನು ಬೆಂಬಲಿಸಿದ್ದರು.ms ಸಮಗಾರರನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಆದರೆ ರಾಷ್ಟ್ರ ಮಟ್ಟದಲ್ಲಿ ಚಮ್ಮಾರರು ಎಂದು ಇವರನ್ನು ಕರೆಯುತ್ತಾರೆ. ಸಂತ ರವಿದಾಸ, ಸಂತ ಘಾಸಿದಾಸ್, ಶರಣ ಹರಳಯ್ಯ- ಕಲ್ಯಾಣಮ್ಮ, ಶೀಲವಂತ ಹಾಗೆಯೇ ರಾಷ್ಟ್ರೀಯ ನಾಯಕರಾದ ಡಾ. ಬಾಬು ಜಗಜೀವನರಾಮ್, ಕಾಶ್ಮೀರಾಮ್, ಅಕ್ಕ ಮಾಯಾವತಿ, ಮೀರಾಕುಮಾರಿ ಇದೇ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ.ಆದರೆ, ಕರ್ನಾಟಕ ರಾಜ್ಯದಲ್ಲಿರುವ ಸಮಗಾರ ಸಮಾಜ ಬಹು ಹಿಂದಿನಿಂದಲೂ ಅಸ್ಪೃಶ್ಯತೆ, ಜಾತೀಯತೆಯಿಂದ ನಲುಗಿ ಹೋಗಿದೆ. ಇವರು ಕಾಯಕ ಜೀವಿಗಳಾಗಿ ರುವುದರಿಂದ ಪಾದರಕ್ಷೆಯ ತಯಾರಿಕೆ. ರಿಪೇರಿ ಮತ್ತು ಮಾರಾಟವನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ಆಧುನಿಕ ವ್ಯವಸ್ಥೆಯಲ್ಲಿ ಕುಲ ಕಸುಬು ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿರುವುದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಅಲ್ಪ ಸ್ವಲ್ಪ ವಿದ್ಯೆ ಕಲಿತರೂ ಸರಿಯಾದ ಕೆಲಸವಿಲ್ಲದೆ ನಿರುದ್ಯೋಗ, ಬಡತನ ದಿಂದ ಸಮಾಜವು ಬಳಲುತ್ತಿದೆ.ಇವರಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಔದ್ಯೋಗಿಕವಾಗಿ ಬಲಾಡ್ಯ ಜಾತಿಗಳೊಂದಿಗೆ ಸ್ಪರ್ಧೆಗೆ ಇಳಿಯಲು ಆಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಇಂತಹ ಸ್ಥಿತಿಯಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಜಾರಿಯು ತೀರ ವಿಳಂಬ ವಾಗಿರುವುದರಿಂದ ಈ ಜನಾಂಗವು ಇನ್ನಷ್ಟು ಸಂಕಷ್ಟದಲ್ಲಿದೆ. ಪರಿಶಿಷ್ಟ ಜಾತಿಯ ಶೇ. 15 ರಿಂದ ಶೇ 17 ಕ್ಕೆ ಮೀಸಲಾತಿಯನ್ನು ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಶ್ರೀ. ಹೆಚ್.ಎನ್ ನಾಗಮೋಹನ್ ದಾಸ್ ರವರ ಶಿಫಾರಸ್ಸಿನ ಕೃಪೆಯಿಂದ ಹೆಚ್ಚಳವಾಗಿರುತ್ತದೆ. ಈಗ ಹೆಚ್ಚಳವಾದ ಶೇ. 2 ಪ್ರತಿಶತ ಮೀಸಲಾತಿಯಲ್ಲಿ ತೀರಾ ಹಿಂದುಳಿದಿರುವ, ಅಸ್ಪೃಶ್ಯತೆಗೆ ಗುರಿಯಾಗಿರುವ ಎಡಗೈ ಗುಂಪಿಗೆ ಶೇ. 5 ರಿಂದ ಶೇ 7 ಕ್ಕೆ ಹೆಚ್ಚಳ ಗೊಳಿಸಿ ಶಿಪಾರಸ್ಸು ಮಾಡಲು ವಿನಂತಿ. ಈಗ ಸದರಿ ಎಡಗೈ ಗುಂಪಿಗೆ ಸಂಬಂಧಿಸಿದಂತೆ ವಿನಾಃ ಕಾರಣ ಶ್ರೀಗುರು ರವಿದಾಸ್ ಪರಿಷತ್ ಹಾಗೂ ಅಖಿಲ ಕರ್ನಾಟಕ ಚರ್ಮಕಾರ ಮಹಾಸಭಾ ಸಂಘದವರು ತ್ರಿಮಸ್ಥ ಎಂದು ಸಮಗಾರ-ಮಚಗಾರ ಮತ್ತು ಡೋಹರ ಜಾತಿಗಳ ಕುರಿತು ಗೊಂದಲವನ್ನು ಸೃಷ್ಟಿಸುತ್ತಿರುವುದು ಕಂಡುಬಂದಿದೆ. ಇವರಪ್ರಮುಖ ಬೇಡಿಕೆಯೇ ರಾಜಕೀಯ ವಾಗಿರುವುದರಿಂದ ಈಗ ಸದ್ಯದಲ್ಲಿ ಜಾರಿಗೆ ಬರುತ್ತಿರುವ ಒಳ ಮೀಸಲಾತಿಯು ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತವಾಗಿರುವುದ ರಿಂದ ಅವರ ಪ್ರಶ್ನೆಗಳು ಈಗ ಅಪ್ರಸ್ತುತವಾಗಿವೆ. ಆದಾಗ್ಯೂ ಕೂಡ ಮಾದಿಗ-ಸಮಗಾರ-ಮಚಗಾರ-ಡೋಹರ ಜಾತಿಗಳ ಪ್ರಮುಖ ನಾಯಕರು ಸೇರಿಕೊಂಡು ಶಿಕ್ಷಣ-ಉದ್ಯೋಗ ಹೊರತು ಪಡಿಸಿ ರಾಜಕೀಯವಾಗಿ ಸೀಟು ಹಂಚಿಕೆ ಮತ್ತು ನಿಗಮ ಮಂಡಳಿ ನೇಮಕಾತಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಪರಸ್ಪರ ಜಾತಿಗಳಲ್ಲಿ ಸಮನ್ವಯ ತೆಯನ್ನು ಮುಂದುವರಿಸಿ ಕೊಂಡು ಹೋಗುವುದಕ್ಕಾಗಿ ಈಗ ನಮ್ಮಲ್ಲಿಯೇ ಒಂದು ಸ್ವಾಮೀಜಿಗಳ ನೇತೃತ್ವದಲ್ಲಿ ಈ 4 ಜಾತಿಗಳ ನಾಯಕರ ಸಮನ್ವಯ ಸಮಿತಿಯು ಅಸ್ತಿತ್ವಕ್ಕೆ ಬಂದಿರುತ್ತದೆ. ಹೀಗಾಗಿ ಇನ್ನೂ ಮುಂದೆ ಈ ಜಾತಿಗಳಲ್ಲಿ ಯಾವುದೇ ರೀತಿ ಯಾದಂತಹ ಗೊಂದಲಗಳು ಮುಂದುವರಿಯುವ ಸಾಧ್ಯತೆಗಳು ಕ್ಷೀಣವಾಗಲಿವೆ. ಆದಕಾರಣ ಎಡಗೈಯಲ್ಲಿಯೇ ಪ್ರತ್ಯೇಕ ಗೊಳಿಸುವ ಅವರ ಬೇಡಿಕೆಯನ್ನು ಮಾನ್ಯ ಆಯೋಗವು ತಿರಸ್ಕರಿಸ ಬೇಕೆಂದು ಹಾಗೂ ಸರ್ಕಾರವು ಒಳ ಮಿಸಲಾತಿ ವರ್ಗಿಕರಣವನ್ನು ಆದಷ್ಟು ಶೀಘ್ರದಲ್ಲಿ ಜಾರಿಗೆ ತರಬೇಕೆಂದು ಪತ್ರಿಕಾ ಮಾಧ್ಯಮದ ಮೂಲಕ ಆಗ್ರಹಿಸಿತ್ತಿರುವ ವೈ.ಸಿ ಕಾಂಬಳಿರಾಜ್ಯ ಸಂಚಾಲಕರು, ಪರಮಾನಂದ ಹಳ್ಳೂರ, ವಸಂತ ಮನಗೂಳಿ, ಆನಂದ ಬೋರ್ಕರ್, ರಾವುತ್ ಜಕ್ಕಪ್ಪ ಸೌದಾಗರ ಮುಂತಾದವರು ಹಾಜರಿದ್ದರು.