ಬಹುದೊಡ್ಡ ಬೆಂಕಿ ಅನಾಹುತವನ್ನು ತಪ್ಪಿಸಿದ : ಕೆ.ಎಸ್.ಆರ್.ಟಿ.ಸಿ ನಿವಾರ್ಹಕಿ ಶರಣಮ್ಮ ಗೌಡರ.
ಹುನಗುಂದ ಆಗಷ್ಟ.4

ಲಾರಿಯ ಮುಂಭಾಗದಲ್ಲಿ ಶಾಟ್ ಸರ್ಕ್ಯೂಟನಿಂದ ಬೆಂಕಿ ಕಾಣಿಸಿಕೊಂಡು ಇನ್ನೇನು ಲಾರಿಯ ಡೀಸಲ್ ಟ್ಯಾಂಕ್ಗೆ ಬೆಂಕಿ ತಗುಲಿ ಬಹುದೊಡ್ಡ ಅನಾಹುತ ಸಂಭವಿಸುವ ಮುಂಚೆ ಇಳಕಲ್ಲ ಡೀಪೋದ ಕೆ.ಎಸ್ ಆರ್.ಟಿ.ಸಿ ಬಸ್ ನಿರ್ವಾಹಕಿ ಶರಣಮ್ಮ ಗೌಡರ ಅವರ ಸಮಯ ಪ್ರಜ್ಞೆಯಿಂದ ಭಾರೀ ಬೆಂಕಿ ಅವಘಡ ತಪ್ಪಿದಂತಾಗಿದೆ. ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೫೦ ಹತ್ತಿಕೊಂಡಿರುವ ಸಾಯಿಬಾಬಾ ದೇವಸ್ಥಾನ ಎದುರಿಗೆ ಶುಕ್ರವಾರ ಸಾಯಂಕಾಲ ಕೆಎ.೨೯ ಎ.೯೨೭೬ ನಂಬರಿನ ಲಾರಿಯು ಬಾಗಲಕೋಟೆ ಸಿಮೆಂಟ್ ಫ್ಯಾಕ್ಟರಿಯಿಂದ ತೋರಣಗಲ್ಲಿಗೆ ಜಲ್ಲಿಯನ್ನು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿಗೆ ಶಾರ್ಟ್ ಸರ್ಕ್ಯೂಟ್ನಿಂದ ಏಕಾಏಕಿ ಲಾರಿಯೊಳಗೆ ಬೆಂಕಿ ಕಾಣಿಸಿಕೊಂಡಾಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಹಾಪೂರ-ಇಲಕಲ್ಲ ಬಸ್ಸಿನ ನಿರ್ವಾಹಕಿ ಶರಣಮ್ಮ ಗೌಡರ ತಕ್ಷಣ ಜಾಗೃತರಾಗಿ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿದ್ದರಿಂದ ಸರಿಯಾದ ಸಮಯಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗಲುವುದ್ದನ್ನು ತಪ್ಪಿಸಲಾಗಿದೆ.ಸಧ್ಯ ಲಾರಿ ಕ್ಯಾಬಿನ್ ಸಂಪೂರ್ಣವಾಗಿ ಸುಟ್ಟು ಕರಕಲಾದರೇ ಡೀಸೆಲ್ ಟ್ಯಾಂಕನಿಂದ ಆಗಬಹುದಾದ ದೊಡ್ಡ ಅನಾಹುತವನ್ನು ತಡೆಗಟ್ಟವಲ್ಲಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ ನೇತೃತ್ವದ ತಂಡದ ಯಶಸ್ವಿಯಾಗಿದೆ.ಈ ವೇಳೆ ಅಗ್ನಿಶ್ಯಾಮಕ ದಳದ ಸಿಬ್ಬಂದಿಗಳಾದ ಭೀಮಪ್ಪ ವನಕಿಹಾಳ,ರಫೀಕ್ ವಾಲಿಕಾರ್.ರವಿ ಲಮಾಣಿ ಯಮನಪ್ಪ ಪೂಜಾರಿ.ಪ್ರಭುದೇವ್ ಬೆಳ್ಳಿಹಾಳ.ಸತೀಶ್ ರಾಥೋಡ್ ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ