ಜಮ್ಮು ಕಾಶ್ಮೀರ ಭಾರತದ ಸಿಂಧೂರ ಆಪರೇಷನ್ ಗೆ – ಅಭಿನಂದನೆಗಳು ಮಿಲ್ಟ್ರಿ ಶ್ರೀನಿವಾಸ್.

ತರೀಕೆರೆ ಮೇ.10

ಪಾಕಿಸ್ತಾನದ ಉಗ್ರರು ಭಾರತೀಯ ಪ್ರವಾಸಿಗರ ಮೇಲೆ ಪಹಲ್ಗಾಮ್ ದಲ್ಲಿ ಮಾಡಿದ ಗುಂಡಿನ ದಾಳಿಯಿಂದ 26 ಜನ ಭಾರತೀಯರ ಹತ್ಯೆಯನ್ನು ಗುರಿಯಾಗಿ ಇಟ್ಟುಕೊಂಡು ಸಿಂಧೂರ ಆಪರೇಷನ್ ಮಾಡಲಾಯಿತು. ಉಗ್ರವಾದಿಗಳ ನೆಲೆಗಳನ್ನು ಯಶಸ್ವಿಯಾಗಿ ನಮ್ಮ ಸೈನಿಕರು ಧ್ವಂಸ ಮಾಡಿದ್ದಾರೆ. ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್ ಹೇಳಿದರು. ಅವರು ಶನಿವಾರ ಪಟ್ಟಣದ ಸಾಲುಮರದಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ. ಬಿ.ಎಚ್ ರಸ್ತೆಯಲ್ಲಿ ಕಾಲ್ನಡಿಗೆ ಜಾಥಾ ಮಾಡಿ ಗಾಂಧಿ ವೃತದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ನಾವು ಹುಟ್ಟಿದ ದೇಶದ ಋಣ ತೀರಿಸಲು ಬದ್ಧರಾಗಿದ್ದೇವೆ ಇಂತಹ ಯುದ್ಧದ ಪರಿಸ್ಥಿತಿಯಲ್ಲಿ ಸರ್ಕಾರ ಕರೆ ಕೊಟ್ಟರೆ ಯುದ್ಧಕ್ಕೆ ಹೋಗಲು ಸಿದ್ದರಿದ್ದೇವೆ ಎಂದು ಸೈನಿಕರಿಗೆ ಬೆಂಬಲ ಸೂಚಿಸಿದರು. 1962 ರ ಯುದ್ಧ ಹಾಗೂ 1965 ರ ಯುದ್ಧ ಮತ್ತು 1971 ರ ಯುದ್ಧ ಹಾಗೂ ಇತ್ತೀಚಿನ 1998 ರ ಕಾರ್ಗಿಲ್ ಯುದ್ಧಗಳಲ್ಲಿಯೂ ಸಹ ಭಾರತೀಯ ಸೈನ್ಯ ಪಾಕಿಸ್ತಾನವನ್ನು ಸದೆ ಬಡಿದು ಸೋಲಿಸಿದ್ದೇವೆ, ಜಮ್ಮು ಕಾಶ್ಮೀರ ಭಾರತದ ಸಿಂಧೂರ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಎಸ್.ಹೆಚ್ ಕುಮಾರ್ ಮಾತನಾಡಿ ಭಾರತೀಯ ಸೈನ್ಯ ಪ್ರಪಂಚದಲ್ಲಿಯೇ ಬಲಿಷ್ಠ ನಾಲ್ಕನೇ ಸ್ಥಾನದಲ್ಲಿದೆ ನಮ್ಮ ಸೈನ್ಯದ ಮುಂದೆ ಪಾಕಿಸ್ತಾನದ ಸೈನ್ಯ ನಿಲ್ಲಲು ಸಾಧ್ಯವಿಲ್ಲ ಈಗಲೂ ಸಹ ನಮ್ಮದೇ ಗೆಲುವು ಎಂದು ಹೇಳಿದರು.

ಮಿಲ್ಟ್ರಿ ದೇವೇಂದ್ರ, ಮಾಜಿ ಪುರಸಭಾ ಅಧ್ಯಕ್ಷರಾದ ಎಂ.ನರೇಂದ್ರ, ಅಹಿಂದ ಚಳುವಳಿಯ ಜಿಲ್ಲಾ ಮುಖ್ಯ ಸಂಚಾಲಕರಾದ ಟಿ.ಹೆಚ್ ಹಾಲವಜ್ರಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಭಾರತೀಯ ಸೈನಿಕರಿಗೆ ಬೆಂಬಲ ಸೂಚಿಸಿ ಮಾತನಾಡಿದರು. ಕಾಲ್ನಡಿಗೆ ಜಾಥಾದಲ್ಲಿ ಮಾಜಿ ಸೈನಿಕರಾದ ಗೋವಿಂದಪ್ಪ, ಯತಿರಾಜ್, ರೇವಣ್ಣ, ವೀರರಾಜು, ಜಗನ್ನಾಥ, ದೇವಸಗಯಂ, ಶೇಖರಪ್ಪ, ಸಿದ್ದಪ್ಪ, ಶಬ್ಬೀರ್, ಟಿ.ಆರ್ ವೆಂಕಟೇಶ್, ಸೋಮಶೇಖರಪ್ಪ, ಸತೀಶ್, ಮಂಜುನಾಥ ಮತ್ತು ಅಹಿಂದ ಚಳುವಳಿಯ ಮಹಿಳಾ ಘಟಕದ ಪದ್ಮ, ವಾಣಿ ಹಾಗೂ ನಾಗರೀಕರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button