ಮಹಿಳೆ ಸಮಾಜ ಸೇವೆಗೆ ತೊಡಗಿಸಿ ಕೊಂಡರೆ ಬದಲಾವಣೆ ಸಾಧ್ಯ – ಅರವಿಂದರಾವ್ ಕೆದಿಗೆ.
ತರೀಕೆರೆ ನವೆಂಬರ್.9
ಮಹಿಳೆಯರ ಸಬಲೀಕರಣ ವಾಗುತ್ತಿದ್ದ ಈ ಸಂದರ್ಭದಲ್ಲಿ ಸಂಸ್ಥೆಯಿಂದ ಆಸಕ್ತರಿಗೆ ಹೊಲಿಗೆ ಯಂತ್ರ, ಗಾಲಿ ಕುರ್ಚಿಗಳನ್ನು ರಾಷ್ಟ್ರೀಯ ನಿಧಿಯಿಂದ ಸಹಾಯಧನ ನೀಡುತ್ತಿದ್ದೇವೆ ಎಂದು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಅರವಿಂದರಾವ್ ಕೆದಿಗೆ ಹೇಳಿದರು. ಅವರು ಬುಧವಾರ ಸಂಜೆ ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ ತರೀಕೆರೆ ಲಿಜಿನ್ ಸಂಸ್ಥೆಯನ್ನು ಉದ್ಘಾಟನೆ ಮಾಡಿ ಹೇಳಿದರು. ಈ ಸಂಸ್ಥೆಯನ್ನು 1997ರಲ್ಲಿ ಟಿಪಿ ಪ್ರೇಮಾನಂದ ರವರು ಸ್ಥಾಪಿಸಿದ್ದು ಇವರ ಹೆಸರಿನಲ್ಲಿ ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳನ್ನು ಸಹಾಯಧನ ನೀಡುತ್ತಿದ್ದೇವೆ. ಮಂಗಳೂರಿನಲ್ಲಿ ಜಲಧಾರ ಎಂಬ ಕಾರ್ಯಕ್ರಮ ಹಾಕಿಕೊಂಡು ಒಂದು ಲಕ್ಷಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿರುತ್ತೇವೆ. ಮಹಿಳೆಯರು ಸಂಸಾರಿಕ ಜೀವನಕ್ಕೆ ಸೀಮಿತವಾಗದೆ ಹೊರಗಿನ ಪ್ರಪಂಚದಲ್ಲಿ ಬೆರೆತು ಸಮಾಜ ಸೇವೆ ಮಾಡಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಸುರೇಖಾ ಮುರಳಿಧರ್ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಎಸ್ಸಿಐ ಭಾವನಾ ಸಂಸ್ಥೆಯು ಸಂಘಟಿಸಿ ಸಮಾಜ ಸೇವೆ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಜನಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ ಬೆಳೆದಿದೆ. ಮಹಿಳೆ ಸಮಾಜ ಸೇವೆಗೆ ತೊಡಗಿಸಿ ಕೊಂಡರೆ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು. ನೂತನವಾಗಿ ಪ್ರಾರಂಭಿಸಿದ ತರೀಕೆರೆ ಪ್ರಗತಿ ಲೀಜನ್ ನಾ ಅಧ್ಯಕ್ಷರಾದ ಕಲ್ಪನಾ ಸುಧಾಮ ರವರು ಶಿವಮೊಗ್ಗ ಅಧ್ಯಕ್ಷರಾದ ಸುರೇಖಾ ಮುರಳೀಧರ್ ವರಿಂದ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿ,ತರೀಕೆರೆ ಮಮತಾ ಮಹಿಳಾ ಸಮಾಜ ಹಾಗೂ ಎಲ್ಲಾ ಮಹಿಳಾ ಸಂಘ ಸಂಸ್ಥೆಯವರು ಸಹಕಾರ ನೀಡಿದ್ದೀರಿ,ಈ ಸಂಸ್ಥೆಯಲ್ಲಿ ನಾನು ನನ್ನ ಗುರಿ ಮುಟ್ಟಲು ಊರಿನ ಗಣ್ಯರು ಪ್ರೋತ್ಸಾಹ ನೀಡಬೇಕು, ಕಳೆದ 13 ವರ್ಷಗಳಿಂದ ಸಕ್ರಿಯವಾಗಿ ಸಂಸ್ಥೆಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುತ್ತೇನೆ. ತರೀಕೆರೆ ಪ್ರಗತಿ ಲೀಜನ್ ಸಂಸ್ಥೆಯಲ್ಲಿ ನೂತನ ಸದಸ್ಯರೆಲ್ಲ ರೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಸಮಾಜ ಸೇವಕರು ಹಾಗೂ ಶಾಸಕರಾದ ಜಿಎಚ್ ಶ್ರೀನಿವಾಸ್ ರವರ ಪತ್ನಿ ವಾಣಿ ರವರು ಮಾತನಾಡಿ ಫೋಟೋ ಗಾಗಿ ಸಮಾಜ ಸೇವೆ ಮಾಡಬೇಡಿ, ನಿಜವಾಗಿ ಕಳಕಳಿಯಿಂದ ನಿಷ್ಠೆಯಿಂದ ಸಮಾಜ ಸೇವೆ ಮಾಡಿರಿ.

ನಾನು ಜನಹಿತ ಸಂಸ್ಥೆಯಿಂದ ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಮಾಡಿಸಿದ್ದೇನೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡಿಸಿ ಬಡ ಮಹಿಳೆಯರಿಗೆ ಮಡಿಲು ತುಂಬಿಸಿದ್ದೇನೆ. ಸಂಘಟನೆಗಳ ಮೂಲಕ ಸಮಾಜ ಸೇವೆ ಮಾಡುವುದು ಪ್ರಸ್ತುತವಾಗಿ ಅಗತ್ಯವಾಗಿದೆ ನಿಮ್ಮ ಸಂಸ್ಥೆಗೆ ನಮ್ಮ ಸಹಕಾರ ನೀಡುತ್ತೇನೆ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ಪರಮೇಶ್ ಮಾತನಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆ 1997. ರಲ್ಲಿ ಪ್ರಾರಂಭವಾಗಿ ರಾಜ್ಯದಲ್ಲಿ ಆಸಕ್ತರಿಗೆ ಸಮಾಜ ಸೇವೆ ಮಾಡುತ್ತಾ ಬಂದಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ, ಇದೇ ರೀತಿ ಮುಂದೆ ಸಾಗಲಿ ತರೀಕೆರೆ ಪ್ರಗತಿ ಲೀಜನ್ ಕೂಟ ಜೊತೆ ಗೂಡಿ ಸಮಾಜ ಸೇವೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಇನಿಷ್ಟಲೇಷನ್ ಆಫೀಸರ್ ನವೀನ್ ಅಮೀನ್, ಸಿ ಎಸ್ ಐ ಮುಖ್ಯಸ್ಥ ಚಿತ್ರ ಕುಮಾರ್, ನ್ಯಾಷನಲ್ ಕೋ ಆರ್ಡಿನೇಟರ್ ಪುಷ್ಪ ಎಸ್ ಶೆಟ್ಟಿ, ಎಸ್ ಸಿ ಐ ಶಿವಮೊಗ್ಗ ಬಾವನ ಸಂಸ್ಥೆಯ ಉಪಾಧ್ಯಕ್ಷರಾದ ಸುಗುಣ, ತರೀಕೆರೆ ಪ್ರಗತಿ ಲೀಜಿನ್ನ ಆಶಾ ವಿಠಲ ಬೋಸ್ಲೆ, ಖಜಾಂಚಿಯಾದ ವಿಶಾಲಕ್ಷ್ಮಮ್ಮ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ