ರಾಜ್ಯಸ್ವ ಸಂಗ್ರಹಿಸಲು ವರ್ತಕರು ಅಧಿಕಾರಿಗಳ ಮೇಲೆ – ಹೊರೆ ಬಿ.ಎನ್ ಹೂಗಾರ್ ವಕೀಲರು.
ಮುದ್ದೇಬಿಹಾಳ ಮಾ.07

2024-25 ನೇ. ಸಾಲಿನ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ. ಸ್ಥಾನದಲ್ಲಿದೆ. 2024-25 ರ ಪರಿಷತ್ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1.05.000 ಕೋಟಿ ರೂ ಗಳ ರಾಜ್ಯಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರರಾದ ಬಿ.ಎನ್ ಹೂಗಾರ್ ವಕೀಲರು ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ತೆರಿಗೆ ಅದೀನಿಯಮದಡಿ ವಾರ್ಷಿಕವಾಗಿ ಅನುಮತಿಸ ಬಹುದಾದ ಗರಿಷ್ಠ ಮಿತಿ 2500 ರೂ ಗಳಿಗೆ ಗುಣವಾಗಿ ಸಂಬಳ ಅಥವಾ ಮಂಜೂರಿ ಪಡೆಯುವ ವ್ಯಕ್ತಿಗಳು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿರುವ ವೃತ್ತಿ ತೆರಿಗೆಯನ್ನು ಪ್ರಸ್ತುತ 200 ರೂ ಗಳಿಂದ 300 ರೂ ಗಳಿಗೆ ಹೆಚ್ಚಿಸಲು ಸೂಕ್ತ ತಿದ್ದುಪಡಿ ಮಾಡುತ್ತಿರುವುದು ನಿರಾಶಾಯ ದಾಯಕವಾಗಿದೆ ಎಂದು ತಿಳಿಸಿದ್ದಾರೆ. ಬಾರ್ ಅಸೋಸಿಯೇಷನ್ ಸದಸ್ಯರಿಗೆ ಚಂದಾ ದಾರಿಕೆಯೊಂದಿಗೆ ಕಾಯಿದೆ ನಿಯಮಗಳು ಪುಸ್ತಕಗಳು ಸುಲಭವಾಗಿ ದೊರಕುವಂತೆ ಮಾಡಲು ಅಡ್ವಕೇಟ್ ಜನರಲ್ ಕಚೇರಿ ಸಂಯೋಗ ದೊಂದಿಗೆ ಆನ್ಲೈನ್ ಗ್ರಂಥಾಲಯವನ್ನು 50 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸುತ್ತಿರುವುದು ಕಾನೂನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡುವವರಿಗೆ ಸ್ಪೂರ್ತಿದಾಯಕ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಬಂದೋಬಸ್ತ್ ಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಆಹಾರ ಭತ್ಯೆಯ ದರವನ್ನು 200 ರೂ ರಿಂದ 500 ರೂ ವರೆಗೆ ಹೆಚ್ಚಿಸ ಬಹುದೆಂದು ನಿರೀಕ್ಷೆ ಹುಸಿಯಾಗಿದೆ ಅಲ್ಲದೆ ಹೂಗಾರ ಸಮಾಜ ನಿಗಮದ ಬಗ್ಗೆ ಯಾವುದೇ ಕಾಳಜಿಯನ್ನು ಮತ್ತು ಅಭಿವೃದ್ಧಿಯನ್ನು ಈ ಬಜೆಟ್ ನಲ್ಲಿ ನೀಡಿರುವುದಿಲ್ಲ. ತೆರಿಗೆ ಸಲಹೆಗಾರರ ಪ್ರೋತ್ಸಾಹಕ್ಕೆ ಯಾವುದೇ ಅನುದಾನದ ಬಗ್ಗೆ ಅಭಿವೃದ್ಧಿಯ ಬಗ್ಗೆ ಪ್ರಸ್ತಾವನೆ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ. ದೇವಾಲಯಗಳ ನಿಧಿಯಿಂದ ಭರಿಸ ಲಾಗುತ್ತಿರುವ ದತ್ತಿ ಇಲಾಖೆಯ ಸರ್ಕಾರಿ ನೌಕರರ ಭತ್ಯೆಗಳನ್ನು ಇವಾಗ ಸರ್ಕಾರವೇ ಪಾವತಿಸಲು ಮುಂದಾಗುತ್ತಿರುವುದು ಒಳ್ಳೆಯ ಅಭಿವೃದ್ಧಿ ಸಂಗತಿ ಎಂದು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ