ಅಗರಖೇಡ ಗ್ರಾ.ಪಂ ಗೆ – ಬೀಗ ಹಾಕಿ ಪ್ರತಿಭಟನೆ.
ಅಗರಖೇಡ ಮೇ.20

ಇಂಡಿ ತಾಲೂಕಿನ ಅಗರಖೇಡ ಗ್ರಾ.ಪಂ ಗೆ ಗ್ರಾಮಸ್ಥರು ಬೀಗ ಹಾಕಿ ಮುಳ್ಳು ಹಚ್ಚಿ ಸಿಬ್ಬಂದಿಯನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು.ಗ್ರಾಮದ ವಾರ್ಡ ನಂ 1. ರಲ್ಲಿ ರಸ್ತೆ ಸುಧಾರಣೆ, ಇಲ್ಲದೆ ಜನರು ನಡೆದಾಡುವುದಕ್ಕೂ ತುಂಬಾ ತೊಂದರೆ ಯಾಗುತ್ತಿದೆ. ಹಾಗೂ ಯಾವುದೇ ವಾಹನಗಳನ್ನು ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಆಗುತ್ತಿಲ್ಲ. ಮತ್ತು ಕುಡಿಯುವ ನೀರಿನ ತೊಂದರೆ ಇದೆ. ವ್ಯವಸ್ಥೆ ಸರಿಯಾಗಿ ಇಲ್ಲ ಹೆಣ್ಣು ಮಕ್ಕಳು ಬಹಿರ್ದೇಶೆಗೆ ಹೋಗಲು ತುಂಬಾ ತೊಂದರೆ ಇದೆ. ಗ್ರಾಮಸ್ಥರು ಹಲವಾರು ಭಾರಿ ಮೌಖಿಕವಾಗಿ ಮತ್ತು ಲಿಖಿತ ರೂಪದಲ್ಲಿ ಮನವಿ ಮಾಡಿದರು ಗ್ರಾ.ಪಂ ದವರು ಸ್ಪಂದಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಗ್ರಾ.ಪಂ ಗೆ ಬೀಗ ಹಾಕಿ ರಸ್ತೆ ಸಂಚಾರ ಬಂದು ಮಾಡಿ ಪ್ರತಿಭಟನೆ ನಡೆಸಿದರು. ಬಾಬಾಗೌಡ ಪಾಟೀಲ, ಮೌಲಾ ಬೀಜಲಿ, ಪ್ರಭುಗೌಡ ಪಾಟೀಲ, ತುಕಾರಾಮ ಭೋಸಲೆ, ವಿನಾಯಕ ಪಾಟೀಲ, ತಿಪ್ಪಣ್ಣ ಕೌಲಗಿ, ಯಲ್ಲಾಲಿಂಗ ಕೌಲಗಿ, ಸಮೀರ ಕೋರಬು, ಶ್ರೀಶೈಲ ಪಾರೇಕರ, ಚಂದು ಪಾರೇಕರ, ಇಮಾಮಸಾಬ ಮುಲ್ಲಾ, ಅರುಗೌಡ ಪಾಟೀಲ, ಪ್ರಕಾಶ ಪಾಟೀಲ, ಕಾಂತು ಕೋಟಿ, ಇಮಾಮಸಾಬ ಕೊರಬು, ಆರಿಫ್ ಅಗರಖೇಡ, ಆರೀಫ್ ಮುಲ್ಲಾ ಮತ್ತಿತರಿದ್ದರು.