ಗೃಹ ಲಕ್ಷ್ಮೀ ಯೋಜನೆಯ ಕೆಲವು ಸಮಸ್ಯೆಗಳನ್ನು ಸರಿಪಡಿಸಿ ಕೊಳ್ಳಿ – ಪಿ.ಡಿ.ಓ ಎಸ್.ಕೆ.ಹಡಪದ ಸಲಹೆ.
ಯಲಗೋಡ ಡಿಸೆಂಬರ್.28

ಗ್ರಾಮ ಪಂಚಾಯತಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆಯ ವಿಶೇಷ ಶಿಬಿರದಲ್ಲಿ ಎರಡು ಸಾವಿರ ರೂಪಾಯಿ ಬಾರದೆ ಇರುವ ಮಹಿಳೆಯರಿಗೆ ಈ ಶಿಬಿರದಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬೇಕು ಎಂದು ಅಭಿವೃದ್ಧಿ ಅಧಿಕಾರಿಯಾದ ಎಸ ಕೆ ಹಡಪದ ತಿಳಿಸಿದರು,

ಈ ಗೃಹ ಲಕ್ಷ್ಮಿ ಶಿಬಿರದಲ್ಲಿ ಬ್ಯಾಂಕಿಗೆ ಸಂಬಂಧಿಸಿದ ತೊಂದರೆ ಗಳಾದ ಕೆವ್ಯೆಸಿ, ಅಪ್ಡೇಟ್ ಹೊಸ ಬ್ಯಾಂಕ ಖಾತೆ ಯನ್ನು ಹಾಗೂ ಮುಂತಾದ ಅಡೆ ತಡೆಗಳನ್ನು ನಿವಾರಿಸಿ ಕೊಳ್ಳಲು,ಬ್ಯಾಂಕಿನ ಅಧಿಕಾರಿಗಳು, ಗ್ರಾಮ ಒನ್ ಸಿಬ್ಬಂದಿ, ಹಾಗೂ ಅಂಗನವಾಡಿ ಕಾರ್ಯಕರ್ತೆಯಾದ,ಇಮೊಂಬಿ ಕಲಕೇರಿ, ಶಾಂತಬಾಯಿ ಕುಲಕರ್ಣಿ, ಮಲ್ಲಮ್ಮ ಪಾಟೀಲ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಮಲ್ಲು ಹೆಬ್ಬಾಳ ಡಿ,ಎಸ್ ಕಣಮೇಶ್ರರ, ಮುತ್ತು ನಾಟಿಕಾರ, ಸಿದ್ಧು ನಾಟಿಕಾರ, ಹಾಗೂ ಯಲಗೋಡ, ವಂದಾಲ,ಕಂದರಪುರ ಗ್ರಾಮದ ಮಹಿಳೆಯರು ಈ ಶಿಬಿರದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ