ನಿಧನ ವಾರ್ತೆ:ಹೆಚ್. ಕರಿಬಸಪ್ಪ ನಿವೃತ್ತ ಮುಖ್ಯ ಗುರುಗಳ ನಿಧನ.

ಕೂಡ್ಲಿಗಿ ಅ.05

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 2 ನೇ. ವಾರ್ಡಿನ ನಿವಾಸಿಗಳಾದ ಹೆಚ್. ಕರಿಬಸಪ್ಪ ನಿವೃತ್ತ ಮುಖ್ಯ ಗುರುಗಳು ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಮಾಜಿ ಅಧ್ಯಕ್ಷರು , ಹಾಗೂ ದಲಿತ ಹಿರಿಯ ಮುಖಂಡರು (65) ಅ. 5 ರ ಶನಿವಾರ ಬೆಳಿಗ್ಗೆ 6 ಗಂಟೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು ಅವರು ಬಹು ದಿನಗಳಿಂದ, ವಯೋ ಸಹಜ ಅನಾರೋಗ್ಯ ದಿಂದ ಬಳಲುತಿದ್ದರು. ಮೃತರ ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರು ಸೇರಿದಂತೆ, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಹೊಂದಿದವರಾಗಿದ್ದರು. *ಅಂತ್ಯಕ್ರಿಯೆ*- ಅಕ್ಟೋಬರ್ 5 ರ ಶನಿವಾರ ರಂದು ಸಾಯಂಕಾಲ 4:30 ಕ್ಕೆ ಕೂಡ್ಲಿಗಿ ತಾಲೂಕಿನ ಹುಟ್ಟುರು ನಿವಾಸ ಸ್ಥಳ ವಾದ ಹಾರಕಬಾವಿ ಗ್ರಾಮದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. *ಸಂತಾಪ*- ಕೂಡ್ಲಿಗಿ ತಾಲೂಕಿನ ಗ್ರಾಮದ ದಲಿತ ಸಮುದಾಯದವರು, ಸ್ಥಳೀಯ ಗ್ರಾಮವಾದ ಹಾರಕಬಾವಿ ಗ್ರಾಮದ ಸಂಬಂಧಿಕರು ಹಾಗೂ ವಿವಿದ ಸಮುದಾಯದವರು ಸಮಸ್ತ ಗ್ರಾಮಸ್ಥರು. ದಲಿತ ಸಮುದಾಯದವರು ಸೇರಿದಂತೆ, ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ, ಪತ್ರಕರ್ತರು ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ವಿವಿಧ ಗ್ರಾಮ ಘಟಕಗಳ, ತಾಲೂಕಾ ಜಿಲ್ಲಾ ರಾಜ್ಯ ಘಟಕಗಳ ಪದಾಧಿಕಾರಿಗಳು ಸರ್ವ ಸದಸ್ಯರು. ಸರ್ಕಾರಿ ನೌಕರರು, ತಾಲೂಕಿನ ಶಿಕ್ಷಕ ವೃಂದದವರು, ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ಹಾಗೂ ಹೋರಾಟಗಾರರು ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಹಾರಕಬಾವಿ ಗ್ರಾಮದ ನೆರೆ ಹೊರೆ ಗ್ರಾಮಸ್ಥರು. ಮೃತ ಎಚ್ ಕರಿಬಸಪ್ಪ ರವರ ಅಗಲಿಕೆಗೆ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button