ಅಂಗನವಾಡಿ ಕಾರ್ಯಕರ್ತೆಯರ ನೇಮಕ ಅಕ್ರಮ – ರದ್ದತಿಗೆ ಬಿ.ಎಸ್.ಪಿ ಯಿಂದ ಆಗ್ರಹ.

ಕೋರಹಳ್ಳಿ ಅ.15

ಆಲಮೇಲ ತಾಲ್ಲೂಕಿನ ಕೋರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಎರಡರಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿ ಇದ್ದ ಕಾರಣ ಸರ್ಕಾರ ಆದೇಶದ ೨೦೨೨ ರ ನಿಯಮಾವಳಿಯ ಪ್ರಕಾರ ಗ್ರಾಮದವರಿಗೆ ನೇಮಕ ಮಾಡಬೇಕು, ಆದರೆ ಸಿಂದಗಿ ತಾಲ್ಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳು, ಸರ್ಕಾರದ ನಿಯಮಾವಳಿಯನ್ನು ಗಾಳಿಗೆ ತೂರಿರುತ್ತಾರೆ, ಬೇರೆ ಹಳ್ಳಿಯ ಕಾರ್ಯಕರ್ತೆಯನ್ನು, ಈ ಹುದ್ದೆಗೆ ನೇಮಕ ಮಾಡಿ, ಅಕ್ಟೋಬರ್, ೧೦ ರಂದು ಹಾಜರಾಗಿದ್ದರು. ಆದರೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿವ ಸಲುವಾಗಿ ಹಾಜರಾತಿ ಪುಸ್ತಕದಲ್ಲಿ ಅಕ್ಟೋಬರ್ ತಿಂಗಳ ಒಂದು ಪ್ರತಿಯನ್ನು ಹರಿದು ಹಾಕಿ ಅಕ್ಟೋಬರ್ ೧ ರಂದು ೧೦ ವರೆಗೆ ಅನಧಿಕೃತ ಹಾಜರಾತಿಗೆ ಸಹಿ ಮಾಡಿಸಿದ್ದಾರೆ. ಈ ಅಕ್ರಮದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಗಳು ಸಿಂದಗಿ ಹಾಗೂ ಮೇಲ್ವಿಚಾರಕರು ಸಂಪೂರ್ಣವಾಗಿ ಅಕ್ರಮದಲ್ಲಿ ತೊಡಗಿ ಕೊಂಡಿರುತ್ತಾರೆ,

ಕೂಡಲೇ ಭ್ರಷ್ಟಾಧಿಕಾರಿಗಳನ್ನು ಅಮಾನತು ಮಾಡಬೇಕು, ಈ ಅಕ್ರಮ ನೇಮಕವನ್ನು ರದ್ದು ಗೊಳಿಸಬೇಕು ಹಾಗೂ ಈ ಹುದ್ದೆಯನ್ನು ಪುನಃ ನೇಮಕ ಅರ್ಜಿಯನ್ನು ಕರೆಯಬೇಕು ಎಂದು ತಾಲ್ಲೂಕು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು, ಒಂದು ವೇಳೆ ಈ ಬೇಡಿಕೆ ಈಡೇರಿಸದೆ ಹೋದರೆ ತಹಶಿಲ್ದಾರ ಕಛೇರಿ ಆವರಣದಲ್ಲಿ ಧರಣೆ ಸತ್ಯಾಗ್ರಹ ಕೈಗೊಳ್ಳುತ್ತವೆ, ಎಂದು ಬಹುಜನ ದಲಿತ ಸಂಘರ್ಷ ಸಮಿತಿ ಎಚ್ಚರಿಕೆ ನೀಡಿದೆ, ಈ ಹೋರಾಟವನ್ನು ಬಹುಜನ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಧ್ಯಕ್ಷರಾದ ಶ್ರೀಶೈಲ ಜಾಲವಾದ, ಹಾಗೂ ತಾಲ್ಲೂಕು ಬಹುಜನ ದಲಿತ ಸಂಘರ್ಷ ಸಮಿತಿ ಸಿಂದಗಿ ಶಾಖೆಯ ನೇತೃತ್ವದಲ್ಲಿ ನಡೆಯಿತು, ಈ ಹೋರಾಟದಲ್ಲಿ ದಲಿತ ಮುಖಂಡರಾದ ಪರಸುರಾಮ ಕಾಂಬಳೆ, ಧರ್ಮಣ್ಷ ಎಂಟಮಾನ, ಶ್ರೀನಿವಾಸ ಓಲೇಕಾರ, ಪ್ರಕಾಶ ತಳಕೇರಿ, ಸುನಿಲ ಕನಮಡಿ ದಾದಾ ತಾಂಬೊಳಿ ರಾಜು ಹೊಸಮನಿ ಅಮರ ಅಳ್ಳಗಿ ಹಾಗೂ ಕನ್ನಡ ಪರ ಸಂಘಟನೆಗಳು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button