ವಿದ್ಯಾರ್ಥಿ ಜೀವನ ಸದ್ಬಳಕೆ ಮಾಡಿಕೊಳ್ಳಿ ಸ್ಪರ್ಧಾತ್ಮಕ ಜಗತ್ತನ್ನು – ಸ್ಪರ್ಧೆಯಿಂದ ಎದುರಿಸಿ.
ನರೇಗಲ್ ಅ.15

ಪದವಿ ಹಂತದ ಎಲ್ಲಾ ವಿದ್ಯಾರ್ಥಿಗಳು ಸತತ ಪರಿಶ್ರಮ ನಿಷ್ಟೆಯ ಕಲಿಕೆಯಿಂದ ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ತಮ್ಮ ಅಮೂಲ್ಯವಾದ ಭವಿಷ್ಯವನ್ನು ರೂಪಿಸಿ ಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ಎಲ್ ಗುಳೇದಗುಡ್ಡ ಹೇಳಿದರು.ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳು ಸುಮ್ಮನೆ ಕೂರುವ ಕಾಲವಲ್ಲ. ಸ್ಪರ್ಧೆ ಇದ್ದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಅದಕ್ಕಾಗಿ ಹೆಚ್ಚಿನ ನೈಪುಣ್ಯತೆ ಬೆಳೆಸಿ ಕೊಳ್ಳಿ. ವಿಶ್ವದಲ್ಲೇ ಭಾರತ ಅತ್ಯಧಿಕ ಯುವ ಸಮೂಹವನ್ನು ಹೊಂದಿದ್ದು, ಅದು ಸಂಪನ್ಮೂಲವಾಗಿ ಹೊರ ಹೊಮ್ಮಲು ವಿದ್ಯಾರ್ಥಿ ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಬೆಳೆಯಬೇಕು ಎಂದರು. ಸಾಧನೆ ಮತ್ತು ಯಶಸ್ಸು ಸಾಧಕರ ಸೊತ್ತಾಗಿದ್ದು ಕೇವಲ ಪಾಲಕರು ಮತ್ತು ಶಿಕ್ಷಕರ ಮೇಲೆ ಅವಲಂಬನೆ ಯಾಗದೆ ಗುರುಗಳ ಹೆಚ್ಚಿನ ಮಾರ್ಗದರ್ಶನದಲ್ಲಿ ಸ್ವ ಆಸಕ್ತಿಯಿಂದ ತಮ್ಮ ಭಾವಿ ಜೀವನ ಉಜ್ವಲ ಗೊಳ್ಳಲು ಶ್ರಮ ವಹಿಸುವುದು ಅವಶ್ಯವಾಗಿದೆ ಎಂದರು.ಹಿರಿಯ ಪ್ರಾಧ್ಯಾಪಕ ಎಸ್.ಎಸ್ ಸೂಡಿ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡಲು ಬಂದ ವಿದ್ಯಾರ್ಥಿಗಳು ಉತ್ತಮ ಜ್ಞಾನದ ಜೊತೆ ಕೌಶಲಾಭಿವೃದ್ದಿಗೆ ಮುಂದಾಗಬೇಕು. ವಿವಿಧ ಕ್ಷೇತ್ರದಲ್ಲಿ ತಮ್ಮಲ್ಲಿರುವ ಪ್ರತಿಭೆ ಹೊರ ಬರಲು ಉಪನ್ಯಾಸಕರ ಮಾರ್ಗದರ್ಶನದಲ್ಲಿ ತಾವೇ ಅವಕಾಶಗಳನ್ನು ಹುಡುಕಿ ಕೊಳ್ಳಬೇಕು ಹೀಗಾದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.ಪ್ರಾಧ್ಯಾಪಕರಾದ ಜ್ಯೋತಿ ಬೋಳಣ್ಣವರ, ನಸರೀನ್ಬಾನು ಜಮಾದರ, ಕೆ.ಆರ್. ಪಾಟೀಲ, ಅಂಜನಮೂರ್ತಿ, ಶಿವಮೂರ್ತಿ ಕರೇರ, ಅನಿಲಕುಮಾರ, ವಿ. ಸಿ. ಇಲ್ಲೂರ, ಕೆ. ಎನ್. ಕಟ್ಟಿಮನಿ, ನಾಗರಾಜ ಹೊನ್ನೂರ, ಬಸವರಾಜ ಕಂಬಳಿ, ಚಂದ್ರು ಸಂಶಿ, ವಿ. ಕೆ. ಸಂಗನಾಳ, ಬಸವರಾಜ ಮಡಿವಾಳರ, ಕಿರಣ ರಂಜನಗಿ, ಶಂಕರ ನರಗುಂದ, ಕಿನ್ನಾಳ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಸಿದ್ದು ನವಲಗುಂದ ಇದ್ದರು.
ಬಾಕ್ಸ್:-
ನರೇಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಪದವಿಗಳ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಉದ್ಘಾಟಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ಗೋಗೇರಿ.ತೋಟಗುಂಟಿ. ಗದಗ