ಲಿಂ.ಪಂ. ಮೀಸಲಾತಿಗೆ ಶಾಸಕರು ಧ್ವನಿ ಯಾಗುವ ವಿಶ್ವಾಸ ವ್ಯಕ್ತಪಡಿಸಿದ – ಬಸವಜಯ ಶ್ರೀ ಗಳು.
ಇಲಕಲ್ಲ ಜು.11

ಮತ್ತೆ ಮುನ್ನಲೆಗೆ ಬಂದ ಲಿಂಗಾಯತ ಪಂಚಮಸಾಲಿ 7 ನೇ. ಹಂತದ ಹೋರಾಟ 2 ಎ ಮೀಸಲಾತಿಗಾಗಿ ಜು 10 ರಂದು ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ ‘ಆಗ್ರಹ ಪತ್ರವನ್ನು’ ಶಾಸಕ ವಿಜಯಾನಂದ ಎಸ್.ಕಾಶಪ್ಪನವರ ಅಧ್ಯಕ್ಷರು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಇವರಿಗೆ ನೀಡಿದರು.ಪಾದಯಾತ್ರೆಯ ಪ್ರವರ್ತಕ ಪೂಜ್ಯ ಬಸವಜಯ ಮೃತ್ಯುಂಜಯ ಶ್ರೀಗಳು ಮಾತನಾಡುತ್ತಾ 2 ಎ ಮೀಸಲಾತಿಗಾಗಿ ಕೂಡಲ ಸಂಗಮ ದಿಂದ ಬೆಂಗಳೂರಿನ 750. ಕಿ.ಮಿ ಪಾದಯಾತ್ರೆ ಮಾಡಿ ಹಿಂದಿನ ಸರ್ಕಾರಕ್ಕೆ ನಾವು ನಮ್ಮ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ, ಹಾಗೂ ಎಲ್ಲಾ ಲಿಂಗಾಯತ ಒಳ ಪಂಗಡಗಳನ್ನು ಕೆಂದ್ರದ “OBC” ಪಟ್ಟಿಗೆ ಸೇರಿಸಿ ಎಂದು ಸತತ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಹಿಂದಿನ ಬಿಜೆಪಿ ಸರಕಾರವು 2 ಡಿ ನೀಡಿದರು. ಪ್ರಯೋಜನ ವಾಗಲಿಲ್ಲ, ಬೆರೊಂದು ಸಮಾಜದ ಮೀಸಲಾತಿ ಕಿತ್ತುಕೊಂಡು ನಮ್ಮ ಸಮುದಾಯಕ್ಕೆ ನೀಡಿದರು, ನಮ್ಮ ಸಮುದಾಯದವರು ತಿರಸ್ಕರಿಸಿ, ನಾವು ಕೇಳಿದ್ದು ಇನ್ನೊಂದು ಸಮುದಾಯದವರ ಮೀಸಲಾತಿ ಕಿತ್ತು ನಮ್ಮ ಸಮಾಜಕ್ಕೆ ನೀಡಿ ಎಂದು ಕೇಳಿಲ್ಲ. ಬದಲಿಗೆ ಪ್ರತ್ಯೇಕ ಮೀಸಲಾತಿ ಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವು. ಈ ಭಾರಿ ಸಿದ್ಧರಾಮಯ್ಯನವರ ಸರಕಾರ ಬಂದಿದೆ ಅವರು ನಮ್ಮ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಅಖಿಲಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಮಗಮ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕ ವಿಜಯಾನಂದ ಎಸ್.ಕಾಶಪ್ಪನವರ ಮನೆಗೆ ಬಂದು ಇವತ್ತು “ಆಗ್ರಹ ಪತ್ರ” ಚಳುವಳಿಮನವಿ ನೀಡಿದ್ದೇವೆ. ಶಾಸಕರು ನಮ್ಮ ಸಮುದಾಯಕ್ಕೆ ಮೀಸಲಾತಿ ದೊರಕಿಸಿ ಕೊಡುವ ವಿಶ್ವಾಸ ನಮಗಿದೆ, ಮುಂಬರುವ ಅಧಿವೇಶನದಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತುತ್ತಾರೆ ಎನ್ನುವ ವಿಶ್ವಾಸವಿದೆ, ನಾವೆಲ್ಲೂರ ಅವರ ಮೇಲೆ ವಿಶ್ವಾಸ ಇಡೋನ, ಮೀಸಲಾತಿ ಸಿಗುವವರೆಗೂ 7 ನೇ. ಹಂತದ ಚಳುವಳಿ ಮುಂದುವರಿಯುತ್ತದೆ ಎಂದು ಶ್ರೀ ಗಳು ಭರವಸೆ ಮಾತುಗಳನ್ನಾಡಿದರು.ನಮ್ಮ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯ ಕೂಗು 28 ವರ್ಷಗ ಸುದೀರ್ಘ ಹೋರಾಟವಿದೆ, ತಾವು ಕೂಡ ಕೂಡಲ ಸಂಗಮ ದಿಂದ ಬೆಂಗಳೂರಿನ ವರೆಗೂ 750 ಕಿ.ಮಿ ಪೂಜ್ಯರ ಜತೆಗೆ ಪಾದಯಾತ್ರೆ ಮಾಡಿದ್ದೇನೆ, ಇದು ನಮ್ಮ ಸಮಾಜ ನಮ್ಮ ಸಮಾಜಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ, ತಾವು ಅಧಿಕಾರಕ್ಕಾಗಿ ಕುಳಿತ್ತಿಲ್ಲ, ನಮಗೆ ಸಮುದಾಯದ ಮಕ್ಕಳ ಭವಿಷ್ಯ ಮುಖ್ಯ ಅವರಿಗಾಗಿ ನಾನು ಅಧಿವೇಶನದಲ್ಲಿ ಧ್ವನಿ ಎತ್ತಿ ಮಾತನಾಡುತ್ತೇನೆ. ಈ ಹೋರಾಟ ನಿರಂತರ ನ್ಯಾಯ ಸಿಗುವವರೆಗೂ ಸಂದರ್ಭ ಬಂದರೆ “ಅಧಿಕಾರ ತ್ಯಾಗ” ಮಾಡಿ ಜಗದ್ಗುರುಗಳ ಜೊತೆಗೆ ಹೋರಾಟ ಮಾಡಲು ಸಿದ್ದ ಎಂದು “ಆಗ್ರಹ ಪತ್ರ” ಸ್ವೀಕರಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರು ನಾನು ಕೂಡ ಸುಮ್ಮನೆ ಕುಳಿತಿಲ್ಲ, ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಜೊತೆ ಸುದೀರ್ಘ ಚರ್ಚೆ ಮಾಡಿದ್ದೇವೆ ಅವರು ನಮ್ಮ ಸಮಾಜಕ್ಕೆ ಮೀಸಲಾತಿ ಸಿಗುವ ಭರವಸೆ ವ್ಯಕ್ತ ಪಡಿಸಿದ್ದಾರೆ. ಸಮಾಜದ ಬಾಂಧವರು ಬೇರೆ ಯಾರೋ ಮಾತಿಗೆ ಕಿವಿ ಗೊಡದೆ ನಮ್ಮ ಮೇಲೆ ಭರವಸೆ ಇಡಿ ಎಂದು ಗುರುಗಳನ್ನು ಸ್ವಾಗತಿಸಿ ಬೆಂಬಲಿಸಿ ಶಿಕ್ಷಣ ಪ್ರೇಮಿ. ಇಳಕಲ್-ಹುನಗುಂದ ತಾಲೂಕಿನ ಹೆಚ್ಚು ಚಳುವಳಿಗಾರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರೈತ ಘಟಕದ ಅಧ್ಯಕ್ಷರು, ಹಿರಿಯ ಪತ್ರಕರ್ತ ಅಮರೇಶ ನಾಗೂರ, ಮಹಾಂತೇಶ ನರಗುಂದ, ಮಹಾಂತೇಶ ಯಲಬುರ್ತಿ, ಹುಚ್ಚಪ್ಪ ಐಹೊಳೆ, ನಿಂಗಮ್ಮ ಬೇವೂರ, ಅಕ್ಕಮ್ಮ ಪಾಟೀಲ, ಶಿಲ್ಪಾ ನರಗುಂದ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.