ಅಂಬೇಡ್ಕರ್ ಭವನ ದುರುಪಯೋಗ – ಕ.ರ.ವೇ ಪ್ರತಿಭಟನೆ.
ತರೀಕೆರೆ. ಜ .08

ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕಾಗಿ ಪಂಚಾಯಿತಿ ಕಾರ್ಯಾಲಯವನ್ನು ಪರ್ಯಾಯ ವ್ಯವಸ್ಥೆಗಾಗಿ ಹೆಚ್. ತಿಮ್ಮಾಪುರ ದಲ್ಲಿರುವ ಡಾ, ಬಿ.ಆರ್ ಅಂಬೇಡ್ಕರ್ ಭವನವನ್ನು ದುರುಪಯೋಗ ಮಾಡಿ ಕೊಂಡಿದ್ದಾರೆ. ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಜಿಲ್ಲಾಧ್ಯಕ್ಷರು ರಮೇಶ್.ಜಿ ರವರು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿರುತ್ತಾರೆ. ಅವರು ಇಂದು ಬೆಲೆನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಯ ಕಚೇರಿಯನ್ನಾಗಿ ಪರಿವರ್ತನೆ ಮಾಡಿ ಕೊಂಡಿರುವ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗೆ ಮತ್ತು ಸದಸ್ಯರಿಗೆ ಏಳು ದಿನಗಳೊಳಗೆ ಅಂಬೇಡ್ಕರ್ ಭವನವನ್ನು ತೆರವು ಗೊಳಿಸಿ ಕೊಡಬೇಕು ಎಂದು ಆಗ್ರಹಿಸಿದರು. ರಾಷ್ಟ್ರೀಯ ನಾಯಕರ ಭಾವ ಚಿತ್ರಗಳನ್ನು ಹಳೆಯ ದಾಖಲಾತಿಗಳ ಕಸದ ಬುಟ್ಟಿಗಳಿಗೆ ಕಟ್ಟಿರುವುದನ್ನು ಖಂಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ತರೀಕೆರೆ ತಹಸಿಲ್ದಾರ್ ವಿಶ್ವಜಿತ್ ಮೆಹತಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ, ದೇವೇಂದ್ರಪ್ಪ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಮಂಜುನಾಥ್ ಪ್ರತಿಭಟನಾಕಾರ ರಿಂದ ಮನವಿ ಸ್ವೀಕರಿಸಿ 15 ದಿನಗಳೊಳಗೆ ಅಂಬೇಡ್ಕರ್ ಭವನ ತೆರುವು ಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿ ಕೊಡುತ್ತೇವೆ ಎಂದು ಒಪ್ಪಿದರು. ಪ್ರತಿಭಟನೆಯಲ್ಲಿ ಕರವೇ ಯುವ ಘಟಕದ ಅಧ್ಯಕ್ಷ ಇಮ್ರಾನ್, ತಾಲೂಕು ಉಪಾಧ್ಯಕ್ಷರುಗಳಾದ ರಾಜು ಹಾಗೂ ಸಂತೋಷ್, ಪದಾಧಿಕಾರಿಗಳಾದ ರಮೇಶ್, ಹನುಮಂತ ಮುಂತಾದವರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು