ಮಕ್ಕಳ ಎದೆಯಲ್ಲಿ ಭಾವೈಕ್ಯತೆಯ ಬೀಜ ಬಿತ್ತಬೇಕು – ಮಹಿಬೂಬ್. ಮದ್ಲಾಪುರ.

ನೀರಮಾನ್ವಿ ಜ.08

ಭಾರತ ಸೇವಾದಳ ರಾಯಚೂರು ವತಿಯಿಂದ ಸರಕಾರಿ ಪ್ರೌಢ ಶಾಲೆ ನೀರಮಾನವಿಯಲ್ಲಿ ಸೇವಾದಳ ಸಪ್ತಾಹ ಆಚರಣೆ ಕಾರ್ಯಕ್ರಮ ಇಂದು ಜರುಗಿತು.ಅತಿಥಿಯಾಗಿ ಸಂಪನ್ಮೂಲ ವ್ಯಕ್ತಿ ಡಾ, ಮಹಿಬೂಬ್ ಮದ್ಲಾಪುರ ಮಾತನಾಡುತ್ತಾ ” ವಂದೇ ಮಾತರಂ, ಬೋಲೋ ಭಾರತ ಮಾತಾಕೀ ಜೈ, ಜೈ ಹಿಂದ್ ಎಂಬ ಘೋಷವಾಕ್ಯ ಕೇಳಿದರೆ ಮನೆ ಬಿಟ್ಟು, ತಾಯಿ ಮಗುವಿಗೆ ಹಾಲು ಉಣಿಸುವುದು ಬಿಟ್ಟು, ಊಟ ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕುತಿದ್ದರು. ಅವರ ಪ್ರಾಣ ಈ ನೆಲಕ್ಕಾಗಿ ಅರ್ಪಿಸಿದ್ದಾಕ್ಕಾಗಿ ಈ ಸ್ವಾತಂತ್ರ್ಯ, ಅವರು ಕೊಟ್ಟ ಭಿಕ್ಷೆ. ನಾವು ಇವತ್ತಿನ ದಿನಮಾನದಲ್ಲಿ ನನ್ನ ಧರ್ಮ ಶ್ರೇಷ್ಠ, ಜಾತಿ, ಮತ, ಪಂಥ, ಸಮುದಾಯ ಎಂದು ಕಿತ್ತಾಡುತ್ತೇವೆ. ರಾಷ್ಟ್ರಕ್ಕೆ ನಾಮ್ಮ ಗೌರವದ ಕೊರತೆ ಸಂವಿಧಾನ, ಕಾನೂನು ನಿಯಮಗಳು ದೇಶದ ಕರ್ತವ್ಯಗಳು ನಾವು ಪಾಲಿಸುತ್ತೇವೆಯೇ ಎಂದು ಪ್ರಶ್ನಿಸಿ ಕೊಳ್ಳುವುದು ಅವಶ್ಯ” ಇದೆ ಎಂದರು.

ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟ ಮಹನೀಯರ ಹೋರಾಟಗಾರರ ಫಲವಾಗಿ ನಮಗೆ ಇಂದು ಸಂತೋಷ ನೆಮ್ಮದಿಯ ಜೀವನ ಸಿಕ್ಕಿದೆ ನಾ.ಸು ಹರ್ಡಿಕರ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ನೆಹರು, ಲಾಲ್ ಭಾಲ್ ಪಾಲ್, ಅಬುಲ್ ಕಲಾಂ ಆಜಾದ್, ಅಂಬೇಡ್ಕರ್, ಲಾಲ್ ಬಾಹುದ್ದೂರ್ ಶಾಸ್ತ್ರಿ, ಸುರೆಂದ್ರನಾಥ ಬ್ಯಾನರ್ಜಿ, ಸುಖದೇವ್ ಇನ್ನೂ ಹಲವಾರು ಹೋರಾಟಗಾರರ ಫಲವಾಗಿ ಸ್ವಾತಂತ್ರ್ಯ ಜೀವನ ಅನುಭವಿಸುತ್ತಿದ್ದೇವೆ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ, ದೇಶ ಭಕ್ತಿ ಸೇವಾ ಭಾವನೆ ನಮ್ಮಲ್ಲಿ ಐಕ್ಯತೆಯ ಬಾಳು ಬೆಳಗಬೇಕು ಎಂದು ವಿಭಾಗ ಸಂಘಟಿಕ ವಿದ್ಯಾಸಾಗರ ಚಿಣಮಗೇರಿ ಮಾತನಾಡಿದರು.ಸಪ್ತಾಹ ಅಂಗವಾಗಿ ದೇಶಭಕ್ತಿ ಸ್ವಾತಂತ್ರ್ಯ ಹೋರಾಟಗಾರರ ಜೀವನ ಮತ್ತು ತ್ಯಾಗದ ಬಗ್ಗೆ ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ರಾಷ್ಟ್ರ ಧ್ವಜದ ಕುರಿತು ಚಿತ್ರಕಲೆ, ದೇಶಭಕ್ತಿ ಗೀತೆಗಳ ಸ್ಪರ್ಧೆಯನ್ನು ಹಮ್ಮಿಕೊಂಡು ಪ್ರಮಾಣ ಪತ್ರ ಮತ್ತು ಮೆಡಲ್ ಗಳನ್ನು ಬಹುಮಾನವಾಗಿ ಕೊಟ್ಟು ಗೌರವಿಸಲಾಯಿತು. ವೇದಿಕೆಯ ಅಧ್ಯಕ್ಷತೆಯಲ್ಲಿ ಮುಖ್ಯ ಗುರುಗಳಾದ ಮಕ್ಬುಲ್ ಅಹ್ಮದ್, ಶಾಖನಾಯಕಿ ದೈಹಿಕ ಶಿಕ್ಷಣ ಶಿಕ್ಷಕಿ. ಲಕ್ಷ್ಮೀದೇವಿ, ಪ್ರಕಾಶ, ಶಾರದಾ, ದೀಪಾ, ಲಕ್ಷ್ಮೀದೇವಿ, ವಿಜಯಲಕ್ಷ್ಮೀ ವಿದ್ಯಾರ್ಥಿಗಳು ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button