ಸಾಹಿತ್ಯ ಸಮ್ಮೇಳನದ ಹಿಂದಿನ ಇತಿಹಾಸ ಹಾಗೂ ಪರಂಪರೆಯನ್ನುನವ ಪೀಳಿಗೆಗೆ ಹೇಳುತ್ತಿರಬೇಕು – ಸಚಿವ ಎಚ್.ಕೆ ಪಾಟೀಲ.

ಗಜೇಂದ್ರಗಡ ಜ.21

ಪಟ್ಟಣದಲ್ಲಿ ಸೋಮವಾರ ನಡೆದ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಿಸಿ ಮಾತನಾಡಿದರು. ಗದಗ ಜಿಲ್ಲೆ ಕರ್ನಾಟಕದ ಸಂಸ್ಕೃತಿ ರಾಜಧಾನಿ ಆಗಬೇಕಾದರೆ ಜಿಲ್ಲೆಯು ಸಾಹಿತ್ಯ ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ನೆನಪಿನಲ್ಲಿ ಇಟ್ಟು ಕೊಳ್ಳಬೇಕು ಮುಂದಿನ ಪೀಳಿಗೆಗೆ ತಿಳಿಸಿ ಕೊಡಬೇಕು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಮಾರ್ಚ್ ಅಂತ್ಯದ ವೇಳೆಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.1961 ರಲ್ಲಿ ಗದಗ್ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವ ಮೊದಲ ಬಾರಿ ಹಕ್ಕೋತ್ತಾಯ ಮಾಡಲಾಯಿತು ಎಂದು ಸ್ಮರಿಸಿದರು. ಸಾಹಿತ್ಯ ಸಮ್ಮೇಳನದ ಹಿಂದಿನ ಇತಿಹಾಸವನ್ನು ಪದೇ ಪದೇ ನವ ಪೀಳಿಗೆಗೆ ಹೇಳುತ್ತಿರಬೇಕು ಕನ್ನಡವು ಸಾಹಿತ್ಯ ಸಂಗೀತ ಕ್ರೀಡಾ ಸಂಸ್ಕೃತಿಕವಾಗಿ ಶ್ರೀಮಂತವಾಗಲು ಗದಗ ಜಿಲ್ಲೆಯ ಕೊಡುಗೆ ಅಪರಿಮಿತಗದಗ ಜಿಲ್ಲೆಯ ರೋಣ ಹಾಗೂ ಗಜೇಂದ್ರಗಡ ಪಟ್ಟಣಗಳು ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸುವೆ ಕುಮಾರವ್ಯಾಸ ನಯಸೇನ ದುರ್ಗಸಿಂಹ ಭೀಮಸೇನ್ ಜೋಶಿ ಸೇರಿದಂತೆ ಅನೇಕ ಮಹನೀಯರಿಂದ ಈ ನಾಡು ಮತ್ತಷ್ಟು ಗರಿಮೆ ಹೊಂದುವಂತೆ ಮಾಡಿದೆ ಎಂದು ಸಚಿವ ಎಚ್.ಕೆ ಪಾಟೀಲ್ ಮಾತನಾಡಿದರು. ಈ ಸಮಯದಲ್ಲಿ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್ ಪಾಟೀಲ್ ರೋಣ ಮತ್ತು ಗಜೇಂದ್ರಗಡ ತಾಲೂಕಗಳಿಗೆ ಮಲಪ್ರಭಾ ನದಿ ನೀರು ಸಂಪರ್ಕಿಸಬಹುದು ಈ ನಿರ್ಣಯಕ್ಕೆ ನಾನು ಕಟಿ ಬದ್ಧನಾಗಿದ್ದೇನೆ ರೋಣ ಗಜೇಂದ್ರಗಡ ಪಟ್ಟಣದಲ್ಲಿ ವಾಸ್ತು ಶಿಲ್ಪಗಳ ಕುರುಹುಗಳಿವೆ ವಾಸ್ತು ಶಿಲ್ಪಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ ಅವುಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮುನ್ನುಡಿ ಬರೆಯಲಾಗಿದೆ ಎಂದರು. ಸಮ್ಮೇಳನದ ವೇದಿಕೆಯಲ್ಲಿ ಅಂತರಗಂಗೆ ಸ್ಮರಣ ಸಂಚಿಕೆಯನ್ನು ಶಾಸಕ ಜಿ.ಎಸ್ ಪಾಟೀಲ್ ಬಿಡುಗಡೆ ಗೊಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷರನ್ನು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಮಯದಲ್ಲಿ ವೇದಿಕೆಯ ಮೇಲೆ ಗದಗ ತೋಟದಾರಿ ಮಠದ ಸಿದ್ಧರಾಮ ಶ್ರೀಗಳು ಮೈಸೂರು ಮಠದ ವಿಜಯ ಮಹಾಂತ ಶ್ರೀಗಳು ಸಾನಿಧ್ಯ ವಹಿಸಿದ್ದರು ಅದೇ ರೀತಿಯಾಗಿ ಸಚಿವ ಎಸ್.ಎಸ್ ಪಾಟೀಲ್ ಮಾಜಿ ಶಾಸಕ ಡಿ.ಆರ್ ಪಾಟೀಲ್ ಮಿಥುನ್.ಪಾಟೀಲ್ ಟಿ ಈಶ್ವರ್ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಜಿಲ್ಲಾಧಿಕಾರಿ ಸಿಎಂ ಶ್ರೀಧರ್ ಸಿ ಓ ಭರತ್ ಎಸ್ ಸಾಹಿತಿ ರವೀಂದ್ರ ದೊಡ್ ಮೇಟಿ ವೀರಣ್ಣ ಶೆಟ್ಟರ್ ಪರಶುರಾಮ್ ಅಳಗವಾಡಿ ವಿಆರ್ ಗುಡಿಸಾಗರ್ ಮುತ್ತಣ್ಣ ಕಡಗ ಪ್ರಶಾಂತ್ ರಾಥೋಡ್ ಅಪ್ಪು ಮತ್ತಿ ಕಟ್ಟಿ ಮುಕ್ತ ಸಾಬ್ ಮುಧೋಳ್ ರಫೀಕ್ ತೋರಗಲ್ ಅಶೋಕ್ ಭಾಗಮಾರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು ಸೇರಿದಂತೆ ಸರ್ವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button