ಸಂಘಟನೆ ಬಲಿಷ್ಠ ಪಡಿಸಲಿಕ್ಕೆ – ಕರ್ನಾಟಕ ದಲಿತ ರಕ್ಷಣಾ ವೇದಿಕೆ ಪ್ರವಾಸ.

ಬಳ್ಳಾರಿ ಜ.21

ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಮಿತಿ ಆದೇಶದ ಮೇರೆಗೆ ರಾಯಚೂರು ಜಿಲ್ಲಾ ಸಮಿತಿಯ ಇನ್ನು ಉಳಿದಂತ ಪದಾಧಿಕಾರಿಗಳನ್ನು ಹಾಗೂ ಸಿಂಧನೂರು ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಿಕ್ಕಾಗಿ ದಿನಾಂಕ 19/1/2024 ಸಿಂಧನೂರು ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಕರೆಯಲಾಯಿತು. ಪದಾಧಿಕಾರಿಗಳನ್ನು ನೇಮಕ ಮಾಡಲಿಕ್ಕಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ ಶಂಕರ್ ನಂದಿಹಾಳ್ ರಾಜ್ಯ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾಧ ಎನ್ ವೆಂಕಟೇಶ್ ಇವರ ಆದೇಶದ ಮೇರೆಗೆ ರಾಯಚೂರು ಜಿಲ್ಲೆಯಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಂಘಟನೆಯನ್ನು ಬಲಿಷ್ಠ ಪಡಿಸಬೇಕೆಂದರೆ ರಾಯಚೂರು ಜಿಲ್ಲಾ ಸಮಿತಿಯ ಇನ್ನೂ ಉಳಿದಂತ ಸೂಕ್ತವಾದ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು ಹಾಗೂ ಆಯಾ ತಾಲೂಕಿನ ಪದಾಧಿಕಾರಿಗಳನ್ನು ನೇಮಕ ಮಾಡಿಡುವುದಕ್ಕಾಗಿ ಪ್ರವಾಸವನ್ನು ಕೈಗೊಂಡು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಸಂಘಟನೆಯನ್ನು ಬಲಿಷ್ಠ ಗೊಳಿಸಲಿಕ್ಕಾಗಿ ರಾಜ್ಯ ಕಾರ್ಯದರ್ಶಿ ಕೆ ಶಂಕರ್ ನಂದಿಹಾಳ ಹಾಗೂ ರಾಯಚೂರು ಜಿಲ್ಲಾಧ್ಯಕ್ಷರಾದ ಕಾಶಿನಾಥ ಕುರುಡಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳನ್ನು ನೇಮಿಸಿದಂತಹ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಕೆ ಶಂಕರ್ ನಂದಿಹಾಳ ರಾಜ್ಯ ಕಾರ್ಯದರ್ಶಿ ಸಂಘಟನೆಯ ಪದಾಧಿಕಾರಿಗಳನ್ನು ನೇಮಕಾತಿ ಆದೇಶ ಪತ್ರವನ್ನು ನೀಡುವುದು ಸಹಜವಾಗಿ ಬಿಟ್ಟಿದೆ. ಅಂದರೆ ನೇಮಕ ಮಾಡಿದಂತ ಪದಾಧಿಕಾರಿಗಳು ಸರಿಯಾಗಿ ಹಳ್ಳಿ ಗ್ರಾಮಾಂತರ ಮಟ್ಟದ ಅನ್ಯಾಯದಿಂದ ತುಳಿತಕ್ಕೆ ಒಳಪಟ್ಟಂತ ದಲಿತ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಅತ್ಯಾಚಾರ ಅನ್ಯಾಯ ದಲಿತರಿಗೆ ಜಾತಿ ನಿಂದನೆ ಅವಮಾನ ಆಗುತ್ತಿದ್ದುದಲ್ಲದೆ ಕೊಲೆ ಸುಲಿಗೆಗಳಿಗೆ ಒಳಪಟ್ಟಂತ ಅವರ ಸಮಸ್ಯೆಗಳಿಗೆ ಕೂಡಲೇ ಪ್ರತಿಭಟಿಸಿ ನ್ಯಾಯ ಒದಗಿಸಿ ಕೊಡ ಬೇಕಾಗಿರುವುದು ಸಂಘಟನೆಯ ಪದಾಧಿಕಾರಿಗಳ ಜವಾಬ್ದಾರಿ ಅಗಿದ್ದು ಆ ನಿಟ್ಟಿನಲ್ಲಿ ಕೆಲಸ ಮಾಡಿ ತೋರಿಸಿದಾಗ ಮಾತ್ರ ಸಂಘಟನೆ ಕಟ್ಟಿದಕ್ಕೆ ಸಾರ್ಥಕವಾಗುತ್ತದೆ ಸಂಘ ಅಂತ ಹೇಳಿಕೊಂಡು ತಿರುಗಾಡಿ ಕಾಲಹರಣ ಮಾಡಿದರೆ ಪ್ರಯೋಜನವಿಲ್ಲ ಸಮಾಜದಲ್ಲಿ ಹುಟ್ಟಿದ್ದೇವೆ ತುಳಿತಕ್ಕೊಳ ಪಟ್ಟಂತ ಸಮಾಜದ ಜನರಿಗೆ ಏನಾದರೂ ಒಂದು ಒಳ್ಳೆಯದು ಕೆಲಸವು ಮಾಡಿ ತೋರಿಸಬೇಕಾದಂತ ಜವಾಬ್ದಾರಿಗಳು ಸಂಘಟನೆಯ ಪದಾಧಿಕಾರಿಗಳ ಮೇಲೆ ಇದೆ ಅದನ್ನು ತಾವು ಎಲ್ಲಾರು ಸೇರಿ ಮಾಡಿ ತೋರಿಸಬೇಕಾಗಿದೆ ಆವಾಗ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಘಟನೆ ಹೆಸರು ಬರುತ್ತದೆ ಒಳ್ಳೆ ಹೆಸರು ತರಬೇಕೆಂದರೆ ಕಷ್ಟಪಟ್ಟು ಹಳ್ಳಿ ಗ್ರಾಮ ಮಟ್ಟದ ಸಮಸ್ಯೆಗಳನ್ನು ಕ್ರೂಢೀಕರಿಸಿ ಕೊಂಡು ಆ ಸಮಸ್ಯೆಗಳಿಗೆ ಸ್ಪಂದಿಸಿ ಜನರಿಗೆ ಪರಿಹಾರವನ್ನು ಒದಗಿಸಿ ಕೊಟ್ಟಾಗ ಮಾತ್ರ ಹೆಸರು ಬರುತ್ತದೆ ಹಾಗೂ ಬರೀ ಒಬ್ಬ ಪದಾಧಿಕಾರಿಗಳಿಂದ ಮಾಡಲಿಕ್ಕೆ ಅಸಾಧ್ಯ ಎಲ್ಲಾರು ಸೇರಿಕೊಂಡು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಬಲಿಷ್ಠ ಗೊಳಿಸಬೇಕೆಂದು ಈಗ ಆಯ್ಕೆ ಆದಂತ ಎಲ್ಲಾ ಪದಾಧಿಕಾರಿಗಳ ಜವಾಬ್ದಾರಿ ಆಗಿದ್ದೇ ಎಂದು ಕೀವಿ ಮಾತುಗಳನ್ನು ಹೇಳಿದರು. ಅದೇ ರೀತಿಯಾಗಿ ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದಂತ ಚನ್ನಬಸವ ಅಮೀನಗಡ ಸಂಘಟನೆ ಎಂಬುದು ಬಹಳ ಪವಿತ್ರವಾದದ್ದು ಸರಿಯಾಗಿ ತಿಳಿದು ಅರ್ಥೈಸಿಕೊಂಡು ಒಳ್ಳೆಯ ಮಾರ್ಗದಲ್ಲಿ ಸಂಘಟನೆಯನ್ನು ಕೊಂಡೊಯ್ದಾಗ ಮಾತ್ರ ನಮ್ಮ ನಿಮ್ಮೆಲಾರ ಹೆಸರು ‌ಹಾಗೂ ಕರ್ನಾಟಕ ದಲಿತರ ರಕ್ಷಣಾ ವೇದಿಕೆ ಸಂಘಟನೆಗೆ ಹೆಸರು ಬರುತ್ತದೆ ಹೆಸರಿಗೆ ಮಾತ್ರ ಸಂಘಟನೆ ಕಟ್ಟಿಕೊಂಡರೆ ಸಾಲದು ಬಡಜನರ ಕಷ್ಟಗಳಿಗೆ ನಾವು ನೀವು ಎಲ್ಲರೂ ಸೇರಿಕೊಂಡು ಸ್ಪಂದಿಸಿದಾಗ ಮಾತ್ರ ನಮ್ಮ ಸಂಘಟನೆ ಜೊತೆಯಲ್ಲಿ ಗ್ರಾಮ ಮತ್ತು ಹೋಬಳಿಯ ಜನರು ನಮಗೆ ಸ್ಪಂದನೆ ಮಾಡುತ್ತಾರೆ ಇಲ್ಲದಿದ್ದರೆ ಸಂಘಟನೆಯಾಗಿ ಉಳಿದು ಕೊಳ್ಳುತ್ತದೆ ಆ ನಿಟ್ಟಿನಲ್ಲಿ ನಾವು ನೀವು ಎಲ್ಲರೂ ಸೇರಿ ಸಂಘಟನೆಯ ಮಾಡಿ ಕೊಂಡಿರುದು ಒಳ್ಳೆಯ ಕೆಲಸವನ್ನು ಮಾಡಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಸಂಘಟನೆಯನ್ನು ಇಂದಿನಿಂದ ಕೊಂಡೊಯ್ಯ ಬೇಕಾಗಿದೆ ಎಂದು ಹೇಳಿದರು. ಅದೇ ರೀತಿಯಾಗಿ ಜಿಲ್ಲಾಧ್ಯಕ್ಷರಾದ ಕಾಶೀನಾಥ ಕುರುಡಿ ಈ ಸಂಘಟನೆಯನ್ನು ಮಾಡ ಬೇಕಾದರೆ ಮೊದಲು ತಥಾಗತ್ ಭಗವಾನ್ ‌ಗೌತಮ್ ಬುದ್ಧನ ಹಾಗೂ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅರಿತು ಕೊಂಡಾಗ ಮಾತ್ರ ಸಂಘಟನೆಯನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲಿಕ್ಕೆ ಸಾಧ್ಯ ಎಂದು ಹೇಳಿದರು. ನೂತನವಾಗಿಜಿಲ್ಲಾ ಪದಾಧಿಕಾರಿಗಳು ಚನ್ನಬಸವ ಅಮಿನಗಡ ಜಿಲ್ಲಾ ಉಪಾಧ್ಯಕ್ಷರು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಾಧಿಕ್ ಅನ್ಸಾರಿ ತಾಲೂಕ ಗೌರವಾಧ್ಯಕ್ಷರು ಯಮುನಪ್ಪ ಕಾಳಾಪುರ ತಾಲೂಕ ಅಧ್ಯಕ್ಷರು ವಿರುಪಾಕ್ಷಿ ಉಪಾಧ್ಯಕ್ಷರು ಶರೀಫ್ ಏಳುರಾಗಿ ಪ್ರಧಾನ ಕಾರ್ಯದರ್ಶಿ ದೊಡ್ಡಬಸವ ಬೂದಿವಾಳ ಸಂಘಟನಾ ಕಾರ್ಯದರ್ಶಿ ಮಾರೇಶ್ ಏಳುರಾಗಿ ಅಬ್ದುಲ್ ಸಾಬ್ ಪಂಚರ್ ಇಸ್ಮಾಯಿಲ್ ಬಳಿಗೆರ ಪರಸಪ್ಪ ಏಳುರಾಗಿ ಕಾರ್ಯಕರ್ತರು ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಶಿನಾಥ ಕುರುಡಿ ಜಿಲ್ಲಾ ಅಧ್ಯಕ್ಷರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button