ಗ್ರಾಮ ಪಂಚಾಯಿತಿಯಲ್ಲಿ 76 ನೇ. – ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ.
ಕಲಕೇರಿ ಜ.27

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ 76 ನೇ. ಗಣಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಜ ಅಹ್ಮದ್ ಸಿರಸಗಿ ಇವರಿಂದ ಧ್ವಜಾರೋಹಣ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರಾದಂತ ಸಂಗರೆಡ್ಡಿ ದೇಸಾಯಿ ಇವರು 76 ನೇ. ಸ್ವತಂತ್ರದ ಬಗ್ಗೆ ಮಾತನಾಡಿದರು ಮತ್ತು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಇವರ ತೋರಸಿದ ಹಾದಿಯಲ್ಲಿ ನಾವೆಲ್ಲರೂ ಒಂದೇ ತಾಯಿ ಮಕ್ಕಳಾಗಿ ನಡೆಯಬೇಕು ಎಂದು ತಿಳಿಸಿದರು. ಮಾಜಿ ತಾಲೂಕ ಪಂಚಾಯತಿಯ ಸದಸ್ಯರಾದ ಲಕ್ಕಪ್ಪ ಬಡಿಗೇರ್ ಇವರು 76 ನೇ. ಗಣರಾಜ್ಯೋತ್ಸವ ಅಂಗವಾಗಿ ಜಾತಿ ಮತ ಎನ್ನದೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ಸ್ವತಂತ್ರವಾಗಿ ಬದುಕುವ ಅವಕಾಶ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಎಂ.ಪಿ ನದಾಫ್ ಗುರುಗಳು ಈ ಸಂದರ್ಭದಲ್ಲಿ ಮಾತನಾಡಿದರು. ನಬಿಲಾಲ್ ನಾಯ್ಕೋಡಿ ಗ್ರಾಮ ಪಂಚಾಯಿತಿಯ ಸದಸ್ಯರು 76 ನೇ. ಗಣರಾಜ್ಯೋತ್ಸವದ ಅಂಗವಾಗಿ ಈ ಸಂದರ್ಭದಲ್ಲಿ ಮಾತನಾಡಿದರು. ಊರಿನ ಹಿರಿಯರಾದಂತ ಶರಣಪ್ಪ ಮೋಪಗಾರ. ಗ್ರಾಮ ಪಂಚಾಯತಿಯ ಸದಸ್ಯರು ಸಲೀಂ ನಾಯ್ಕೋಡಿ. ಅನಿಲ್ ಬಡಿಗೇರ್. ದೇವೇಂದ್ರ ಬಡಿಗೇರ್. ಕುತುಬುದ್ದೀನ್ ಹೊಸಮನಿ. ಇರಗಂಟಿ ಬಡಿಗೇರ್. ಮಲ್ಕಪ್ಪ ಭಜಂತ್ರಿ. ಸುಧಾಕರ್ ಅಡಿಕಿ. ಆನಂದ್ ಅಡಿಕಿ. ಪಿಂಟು ಮುಜವಾರ್. ವಿಶ್ವನಾಥ್ ರಾಠೋಡ. ವಿನೋದ್ ವಡಿಗೇರಿ. ಭೀಮಣ್ಣ ವಡ್ಡರ್. ದೌಲತ್ ಪಟೇಲ್ ಬಿರಾದಾರ್. ಕಿರಣ ಬಿಂಜಲಬಾವಿ. ಹುಸೇನ್ ನಾಯ್ಕೋಡಿ. ಪ್ರಕಾಶ್ ಪೂಜಾರಿ. ಪರಶುರಾಮ್ ವಡ್ಡರ್. ರಮೇಶ್ ಮಾಪುಗಾರ್. ಮಲ್ಕಾ ಜಿ ಬಡಿಗೇರ್. ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಅಧಿಕಾರಿಗಳು ಸಿಬ್ಬಂದಿ ವರ್ಗ ಗ್ರಾಮಸ್ಥರು ಸೇರಿದಂತೆ 76 ನೇ. ಗಣರಾಜ್ಯೋತ್ಸವ ಅದ್ದೂರಿಯಿಂದ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ