ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ – 76 ನೇ. ಗಣರಾಜ್ಯೋತ್ಸವ ಅದ್ದೂರಿಯಾಗಿ ಜರಗಿತು.
ಬಸವನ ಬಾಗೇವಾಡಿ ಜ.27

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನ ಬಾಗೇವಾಡಿ ಪಟ್ಟಣದಲ್ಲಿ 76 ನೇ. ಗಣರಾಜ್ಯೋತ್ಸವ ಕಾರ್ಯಕ್ರಮವು ಶ್ರೀ ಬಸವೇಶ್ವರ ಸರಕಾರಿ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ತಹಸಿಲ್ದಾರರು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಸಮಿತಿ ಬಸವನ ಬಾಗೇವಾಡಿ ವತಿಯಿಂದ ಅದ್ದೂರಿಯಿಂದ ಜರಗಿತು. ಬಸವನ ಬಾಗೇವಾಡಿ ತಾಲೂಕಿನ ತಹಸೀಲ್ದಾರರಾದ ಶ್ರೀ ಯಮನಪ್ಪ ಸೋಮನಕಟ್ಟಿ ಇವರು ಧ್ವಜಾರೋಹಣ ಮಾಡಿದರು. ನಂತರ ಇಂದು ನಾವು ಆಚರಿಸುತ್ತಿರುವುದು 76 ನೇ. ಗಣರಾಜ್ಯೋತ್ಸವ. ಭಾರತ ದೇಶ ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಸರಕಾರವೇ ಪ್ರಜಾ ಸರಕಾರ. 1950 ಜನವರಿ 26 ರಂದು ನಮ್ಮ ದೇಶದ ಸಂವಿಧಾನ ಜಾರಿಗೆ ಬಂದಿತು. ಸಂವಿಧಾನದ ಅನ್ವಯ ನಮ್ಮ ದೇಶ ಪ್ರಜಾಪ್ರಭುತ್ವ ದೇಶವಾಗಿದೆ. ಇಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನ ಅವಕಾಶಗಳಿವೆ. ಸಂವಿಧಾನವು ನಮಗೆ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ನೀಡಿದೆ. ನಮ್ಮ ದೇಶ ವಿಶ್ವದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ರಕ್ಷಣಾತ್ಮಕವಾಗಿ ಬಲಾಢ್ಯ ರಾಷ್ಟ್ರವಾಗಿ ಬೆಳೆದಿದೆ. ಎಲ್ಲಾ ರಂಗಗಳಲ್ಲಿ ಪ್ರಗತಿಯನ್ನು ಸಾಧಿಸಲಾಗಿದೆ. ಮುಂಬರುವ ದೇಶ ಮುಂಬರುವ ದಿನಗಳಲ್ಲಿ ನಮ್ಮ ದೇಶವು ಪ್ರಪಂಚದಲ್ಲಿಯೇ ಮೂರನೆಯ ಆರ್ಥಿಕವಾಗಿ ಬೆಳೆದು ಬರಲಿದೆ. ಬಸವನ ಬಾಗೇವಾಡಿ ತಾಲೂಕ ಕೂಡ ಪ್ರಗತಿಯತ್ತ ಸಾಗಿದೆ. ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಸರಕಾರವು ಅನುಮೋದನೆ ನೀಡಿದೆ. ಇನ್ನೂ ಮುಂದೆ ನಮ್ಮ ತಾಲೂಕ ಹೆಚ್ಚಿನ ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ ಎಂದರು. ಪೊಲೀಸರು ವಿದ್ಯಾರ್ಥಿಗಳು ಗೃಹರಕ್ಷಕ ದಳದವರು ಪಥ ಸಂಚಾರ ನಡೆಸಿದರು. ಇದೆ ಸಂದರ್ಭದಲ್ಲೇ ಶ್ರೀ ಬಸವರಾಜ್ ಹಾರಿವಾಳ ರಾಜ್ಯ ಪ್ರಶಸ್ತಿ ವಿಜೇತರು. ಶ್ರೀ ಲೋಕನಾಥ್ ಅಗರ್ವಾಲ್ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಶ್ರೀ ಸಿದ್ದು ಬಾಗೇವಾಡಿ ರಾಜ್ಯ ಕುಸ್ತಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ನಗರದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ್ ಮನರಂಜನೆ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಶ್ರೀ ಬಲ್ಲಪ್ಪನಂದಗಾವಿ ಪೊಲೀಸ್ ವಿಭಾಗ ಅಧಿಕಾರಿಗಳು. ಶ್ರೀ ಪ್ರಕಾಶ್ ಕೆ ದೇಸಾಯಿ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ವಸಂತ ರಾಠೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಎಚ್.ಎಸ್ ಚಿತ್ತರಗಿ ಪುರಸಭೆ ಮುಖ್ಯ ಅಧಿಕಾರಿಗಳು ಊರಿನ ಗಣ್ಯಮಾನ್ಯರು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ