ತಿಮ್ಮಾಪುರ ಗ್ರಾಮದ 43 ಎಕರೆ ಅರಣ್ಯ ಭೂಮಿಯನ್ನು ಮಾದರಿ ಅರಣ್ಯ ಪ್ರದೇಶ ಹಾಗೂ ಉದ್ಯಾನವನ ಮಾಡಲು – ಸಚಿವ ಈಶ್ವರ ಖಂಡ್ರೆಗೆ ಮನವಿ ಸಲ್ಲಿಸಿದ ವನಸಿರಿ ತಂಡ.

ತಿಮ್ಮಾಪುರ ಜ.28

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಸಭೆಗೆ ಆಗಮಿಸಿದ ಮಾನ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರನ್ನು ವನಸಿರಿ ಪೌಂಡೇಷನ್ (ರಿ) ರಾಯಚೂರು ರಾಜ್ಯ ಘಟಕದ ವತಿಯಿಂದ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸರ್ವೇ ನಂಬರ್ 73/1 ಇದರಲ್ಲಿ ಒಟ್ಟು ಅರಣ್ಯ ಭೂಮಿ 43 ಎಕರೆ ಇದ್ದು ಇದನ್ನು ವನಸಿರಿ ಪೌಂಡೇಷನ್ (ರಿ) ರಾಯಚೂರು ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಾದರಿ ಅರಣ್ಯ ಪ್ರದೇಶ ಮಾಡಲು ಹಾಗೂ ಮೂಲ ಜೀವಿಗಳ ವಾಸವಾಗಿ ಮಾರ್ಪಡಿಸಲು ಜೊತೆಗೆ ಮಾದರಿ ಉದ್ದ್ಯಾನವನ ನಿರ್ಮಿಸಲು, ಅಳಿವಿನ ಅಂಚಿನಲ್ಲಿರುವ ಪ್ರಾಣಿ ಪಕ್ಷಿಗಳು, ಜಲಚರ ಜೀವ ಜಲ ಧರೆಗಳಿಗೆ ಆಹಾರ, ಪುನರ್ವವಸತಿ ಕೇಂದ್ರವಾಗಿ ಮಾಡಲು ಅರಣ್ಯ ಇಲಾಖೆ ಹಾಗೂ ವನಸಿರಿ ಪೌಂಡೇಷನ್ ಸಹಯೋಗದಲ್ಲಿ ನಿರ್ವಹಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.

ನಂತರ ಸಸಿಗಳ ಮೇಲಿನ ದರವನ್ನು ಕಡಿಮೆ ಗೋಳಿಸಿದ್ದಾಕ್ಕಾಗಿ ಧನ್ಯವಾದಗಳು ತಿಳಿಸಲಾಯಿತು. ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಬೆಳೆಯುವ ಬೇವಿನ ಗಿಡಗಳನ್ನು ಕಡಿಯದಂತೆ ಕ್ರಮ ಕೈಗೊಳ್ಳಬೇಕು ಮತ್ತು ಹಣ್ಣಿನ ಗಿಡಗಳನ್ನು ಹೆಚ್ಚು ಹೆಚ್ಚು ಬೆಳಸುವಂತೆ ಪ್ರೋತ್ಸಾಹಿಸ ಬೇಕೆಂದು ಮನವಿ ಮಾಡಿ ಕೊಂಡಾಗ ಇದಕ್ಕೆ ತಕ್ಷಣ ಸ್ಪಂದಿಸಿದ ಅರಣ್ಯ ಸಚಿವರು ತಮ್ಮ ಪಕ್ಕದಲ್ಲೇ ಇದ್ದ ಅರಣ್ಯ ಇಲಾಖೆ ಅಧಿಕಾರಿ ಸುರೇಶ ಬಾಬು ಅವರಿಗೆ ರಾಯಚೂರು ಜಿಲ್ಲೆಯಲ್ಲಿ ಬೇವಿನ ಗಿಡಗಳನ್ನು ಕಡಿಯದಂತೆ ನೋಡಿ ಕೊಳ್ಳಿ ಎಂದು ಸೂಚಿಸಿದರು. ಈ ಸಂಧರ್ಭದಲ್ಲಿ ಸಿಂಧನೂರು ಶಾಸಕರಾದ ಹಂಪನಗೌಡ ಬಾದರ್ಲಿ, ರಾಯಚೂರು ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್,ಅರಣ್ಯ ಇಲಾಖೆಯ ಅಧಿಕಾರಿ ಸುರೇಶ ಬಾಬು, ಗುಲಬರ್ಗಾದ ಸಿಸಿಫ್, ವನಸಿರಿ ಪೌಂಡೇಷನ್ ದೇವದುರ್ಗ ತಾಲೂಕು ಅಧ್ಯಕ್ಷ ಪ್ರಕಾಶ ಪಾಟೀಲ್ ಶಾವಂತಗೇರಿ,ಸದಸ್ಯರಾದ ಶಂಕರಗೌಡ ಎಲೆಕೂಡ್ಲಿಗಿ, ಡಾ. ನವೀನ್, S.N ವೀರೇಶ, ಸುನಿಲ್ ತಡಕಲ್ ಇದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button