ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಗೊಳಿಸುವಂತೆ – ಆದಿ ಜಾಂಬವ ಯುವ ಬ್ರಿಗೇಡ್ ವತಿಯಿಂದ ಆಗ್ರಹಿಸಿ ಡಿ.ಸಿ ಯವರ ಮೂಲಕ ಮನವಿ.
ಗದಗ ಜ.30

ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ವಿಚಾರವಾಗಿ ಮಾದಿಗ ಮತ್ತು ಸಂಬಂಧಿತ ಜನಾಂಗಳಿಗೆ ಕನಿಷ್ಠ 6% ಒಳ ಮೀಸಲಾತಿ ಅಥವಾ ಪ್ರತ್ಯೇಕ ಪರಿಶಿಷ್ಟ ಜಾತಿಯ 6% ಮೀಸಲಾತಿಗಾಗಿ ಶಿಫಾರಸ್ಸು ಮಾಡುವಂತೆ ಆದಿ ಜಾಂಬವ ಯುವ ಬ್ರಿಗೇಡ್ ನ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಬುರಡಿ ಒತ್ತಾಯಿಸಿದರು.ಮಾನ್ಯ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯ ಸರ್ಕಾರಗಳ ಅಧಿಕಾರ ಎಂದು ತೀರ್ಪು ನೀಡಿದ್ದು, ಅದರಂತೆ ವಿವಿಧ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿ ಪ್ರಕ್ರಿಯೆಗಳು ಪ್ರಗತಿಯಲ್ಲಿರುತ್ತೇವೆ ಎಂದರು.ಅದರಂತೆ ಕರ್ನಾಟಕದಲ್ಲಿ ನೊಂದ ಮತ್ತು ಕನಿಷ್ಠ ಅವಕಾಶಗಳಲ್ಲಿ ಅನ್ಯಾಯ ಅನುಭವಿಸುತ್ತಿರುವ ಜನಾಂಗಗಳು ಒಳ ಮೀಸಲಾತಿಗಾಗಿ ನ್ಯಾಯಯುತವಾದ ಹಕ್ಕೋತ್ತಾಯ ಮಾಡುತ್ತಿವೆ. ಆ ನಿಟ್ಟಿನಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಮಾಡುವ ಅವಕಾಶ ತಮಗೆ ಲಭಿಸಿರುವುದು ನೊಂದ ಮತ್ತು ಅನ್ಯಾಯಕ್ಕೆ ಒಳಗಾದ ಜನಾಂಗಗಳಿಗೆ ಒಂದು ದೊಡ್ಡ ಭರವಸೆ ಮೂಡಿಸಿದೆ.ಆ ನಿಟ್ಟಿನಲ್ಲಿ ಮಾನ್ಯರಾದ ತಮ್ಮಲ್ಲಿ ಕೆಲವೊಂದು ಅಂಶಗಳನ್ನು ವಿನಂತಿಸುತ್ತಿದ್ದೇವೆ. ಅದರಲ್ಲಿ ಸಂವಿಧಾನವನ್ನು ಗೌರವಿಸುವವರು ಮತ್ತು ಸಾಮಾಜಿಕ ನ್ಯಾಯದ ಪರವಾಗಿರುವ ಪ್ರತಿಯೊಬ್ಬರು ಒಳ ಮೀಸಲಾತಿ ಒಪ್ಪಿಕೊಳ್ಳುತ್ತಾರೆ. ಒಂದು ವೇಳೆ ಒಳ ಮೀಸಲಾತಿ ವಿರೋಧ ಮಾಡುತ್ತಾರೆಂದರೆ ಅವರ ಒಳಗೆ ಮನುವಾದಿ ಮನಸ್ಥಿತಿ ಇದ್ದು, ಡೊಂಗಿಯಾಗಿ ಸಂವಿಧಾನ, ದೇಶ ಪ್ರೇಮ ಮತ್ತು ಸಮಾನತೆಯ ಬಗ್ಗೆ ಮಾತನಾಡುತ್ತಾರೆ ಎಂದರ್ಥ. ಆದ್ದರಿಂದ ಅಂತಹವರ ವಿತ್ತಂಡ ವಾದಗಳು ಮತ್ತು ಸಂವಿಧಾನ ವಿರೋಧಿ ಮನಸ್ಥಿತಿಯ ಅಹವಾಲುಗಳನ್ನು ಯಾವುದೇ ಸಂದರ್ಭದಲ್ಲಿಯೂ ಪುರಸ್ಕರಿಸ ಬಾರದು ಎಂದು ವಿನಂತಿಸುತ್ತೇವೆ ಎಂದು ತಿಳಿಸಿದರು.ಒಳ ಮೀಸಲಾತಿ ಬೇಡ ಎನ್ನುವವರು ಮತ್ತು ಒಳ ಮೀಸಲಾತಿ ಬೇಕು ಅಥವಾ ಬೇಡ ಎಂದು ಹೇಳದೇ ತಟಸ್ಥವಾಗಿರುವ ಜನಾಂಗಗಳಿಗೆ ಒಳ ಮೀಸಲಾತಿ ಶಿಫಾರಸ್ಸು ಮಾಡದೇ ಅಂತಹ ಜನಾಂಗಗಳಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಮಾಡಲಾದ ಮೀಸಲಾತಿ ಪ್ರಮಾಣಗಳು ಎಷ್ಟು ಇವೆ ಅವುಗಳನ್ನು ಒಂದು ಮಾಡಿ ಅವರೇಲ್ಲರನ್ನು ಒಂದೇ ಗುಂಪು ಮಾಡಿ ಒಳ ಮೀಸಲಾತಿ ಬೇಕು ಎನ್ನುವವರನ್ನು ಪ್ರತ್ಯೇಕಿಸಿ, ಅವರಿಗೆ ಶಿಫಾರಸ್ಸು ಮಾಡಿದ ಪ್ರಮಾಣವನ್ನು ಅವರಿಗೆ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಹಾಗೂ ಮಾದಿಗ ಮತ್ತು ಸಂಬಂಧಿತ ಜನಾಂಗಗಳಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ 69 ಒಳ ಮೀಸಲಾತಿ ನೀಡಲು ಶಿಫಾರಸ್ಸು ಮಾಡಬೇಕು. ಮತ್ತು ಒಟ್ಟು ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಮತ್ತು ಸಂಬಂಧಿತ ಜನಾಂಗ 1911 ರ ಸೌತ್ ಇಂಡಿಯನ್ ಸೆನ್ಸಸ್ ಪ್ರಕಾರ 58% ಮತ್ತು 1975 ರ ಎಲ್.ಜಿ ಹಾವನೂರ್ ಕಮೀಷನ್ ವರದಿ ಪ್ರಕಾರ 57.2% ಇದ್ದು, ಅದರಂತೆ 2011 ರ ಜನ ಗಣತಿ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 1,04,74,992 ಇದ್ದು ಇದರಲ್ಲಿ 57.2% ಅಂದರೆ 39,91,695 ಆಗುತ್ತದೆ. ಮತ್ತು ಪ್ರಸ್ತುತ ಇರುವ 15% ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ 57.2% ಎಂದರೆ ನ್ಯಾಯುತವಾಗಿ ಮಾದಿಗ ಜನಾಂಗಕ್ಕೆ 858% ಒಳ ಮೀಸಲಾತಿ ದೊರೆಯ ಬೇಕಾಗುತ್ತದೆ. ಆದರೆ ಕೇವಲ 6% ಮಾತ್ರ ಶಿಫಾರಸ್ಸು ಮಾಡಿದ್ದು ಅದರಲ್ಲಿ ಯಾವುದೇ ವ್ಯತ್ಯಾಸಕ್ಕೆ ಅವಕಾಶ ಕೊಡದೇ ಕನಿಷ್ಠ 6% ಒಳ ಮೀಸಲಾತಿಗಾಗಿ ಶಿಫಾರಸ್ಸು ಮಾಡಬೇಕು ಎಂದು ವಿನಂತಿಸುತ್ತೇವೆ.ನೊಂದ ಮಾದಿಗ ಮತ್ತು ಸಂಬಂಧಿತ ಜನಾಂಗಕ್ಕೆ ಒಳ ಮೀಸಲಾತಿ ಅನಿವಾರ್ಯವಾಗಿದ್ದು ಇದನ್ನು ಕೂಡಲೇ ಜಾರಿ ಮಾಡುವ ಅಗತ್ಯೆತೆ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡ ಬೇಕು. ಹಾಗೂ ಒಳ ಮೀಸಲಾತಿ ಬೇಡ ಎಂದು ಎಲ್ಲವನ್ನು ನಾವೇ ತಿಂದು ಉಳಿದವರು ಹಸಿವಿನಿಂದ ಹಾಗೇ ಸತ್ತು ಹೋಗಲಿ ಎಂದು ಬಯಸುತ್ತಿರುವ ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಭಾರತ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಯಾವ ಪ್ರವರ್ಗದಲ್ಲಿ ಮೀಸಲಾತಿ ದೊರೆಯುತ್ತಿದ್ದೆಯೋ ಅದೇ ಪ್ರವರ್ಗದಲ್ಲಿ ಕರ್ನಾಟಕದಲ್ಲಿ ಮುಂದುವರೆಯುವ ವ್ಯವಸ್ಥೆ ಮಾಡಿ ಅವರು ಅವರು ಪರಿಶಿಷ್ಟ ಜಾತಿಗಳ ಸಾಮಾಜಿಕ ನ್ಯಾಯಕ್ಕೆ ವಿರೋಧಿಸುವುದನ್ನು ತಪ್ಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.ಒಳ ಮೀಸಲಾತಿ ಜಾರಿಯ ಜೊತೆಗೆ ರಾಜಕೀಯವಾಗಿ ಕೂಡ ಒಳ ಮೀಸಲಾತಿ ಜಾರಿ ಅಗತ್ಯವಿದ್ದು ರಾಜಕೀಯವಾಗಿ ಒಳ ಮೀಸಲಾತಿ ಜಾರಿ ಮಾಡಲು ಸರಕಾರಕ್ಕೆ ಶಿಫಾರಸ್ಸು ಮಾಡ ಬೇಕೆಂದು ವಿನಂತಿಸಲಾಗಿದೆ ಎಂದು ತಿಳಿಸಿ ಮನವಿ ಪತ್ರವನ್ನು ಗದಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ ಬಾಬು ಜಗಜೀವನರಾಮ ಆದಿ ಜಾಂಬವ ಯುವ ಬ್ರಿಗೇಡ್ ನ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಬುರಡಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಡಿ.ಜಿ ಕಟ್ಟಿಮನಿ, ಉಡಚಪ್ಪ ಹಳ್ಳಿಕೇರಿ, ಅಶೋಕ ಕುಡತಿನಿ, ಪ್ರವೀಣ ತಗ್ಗೆನಮನಿ, ಯಮನೂರ ಮಾದರ, ರಾಘವೇಂದ್ರ ಪರಾಪೂರ ಮುಂತಾದವರು ಇದ್ದರು.