ಒಂದು ವಾರದಲ್ಲಿ ಅಸ್ಕಿ ಕೆರೆ ತುಂಬದಿದ್ದರೆ, ತಹಶೀಲ್ದಾರ್ ಆಫೀಸ್ ಮುಂದೆ – ರೈತ ಸಂಘದಿಂದ ಉಗ್ರವಾದ ಎಚ್ಚರಿಕೆ.

ಅಸ್ಕಿ ಜ.30

ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಸರ್ಕಾರಿ ಕೆರೆ ಹೂಳೆತ್ತುವುದು ಮತ್ತು ಒತ್ತುವರಿ ತೆರೆವು ಕೆರೆ ನೀರು ತುಂಬುವುದು ಈ ಮೊದಲು ಕೆರೆಯ ದಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಗಿತ್ತು. ಮಾನ್ಯ ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳು ತಾಳಿಕೋಟಿ ಇವರು ಮತ್ತು KBJNL ಅಧಿಕಾರಿಗಳು ಭೇಟಿ ಕೊಟ್ಟಿದ್ದರು ಭರೆವಸೆ ನೀಡಿದ್ದರು. ಪ್ರತಿಭಟನೆಯ ಸ್ಥಳದಲ್ಲಿ 10 ದಿನಗಳ ಕಾಲಾವಕಾಶ ಕೇಳಿದ್ದರು. ನಂತರ ಕರ್ನಾಟಕ ರಾಜ್ಯ ರೈತ ಸಂಘದ ಪ್ರತಿಭಟನಾಕಾರರಿಗೆ ಸಭೆ ಕರೆದು ತಿಳಿಸುತ್ತೇನೆ ಎಂದು ಮಾನ್ಯ ತಹಶೀಲ್ದಾರರು ಅಧಿಕಾರಿಗಳು ತಿಳಿಸಿದರು. ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಸ್ಪಂದನೆ ಮಾಡಿಲ್ಲ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿವಿಧ ಎಲ್ಲಾ ಸಂಘಟನೆಗಳಿಂದ ಒಂದು ವಾರದಲ್ಲಿ ಅಸ್ಕಿ ಕೆರೆ ತುಂಬದಿದ್ದರೆ ತಾಳಿಕೋಟಿ ತಹಶೀಲ್ದಾರ್ ಆಫೀಸ್ ಮುಂದೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ರೈತರು ತಿಳಿಸಿದರು. ರಾಜ್ಯ ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷರು ಸಂಗನಗೌಡ ಎಸ್ ಬಿರಾದರ್ ತಾಲೂಕ ಅಧ್ಯಕ್ಷರು ಎಸ್.ವಾಯ್ ವಾಲಿಕಾರ್ ಅನಂತರೆಡ್ಡಿ ಎಸ್ ಬಿರಾದಾರ್, ಶರಣಗೌಡ ಪಿರಾಪುರ್, ಬಸನಗೌಡ ಪೀರಾಪುರ್, ಶರಣಗೌಡ ಕೋನ್ಯಾಳ, ಸಾಹೇಬಗೌಡ ಮೇಲಿನಮನಿ, ಯಂಕಪ್ಪ ಗುತ್ತ್ಯಾಳ, ಗೌಡಪ್ಪಗೌಡ ಹಳಿಮನಿ, ಗುರುಸ್ವಾಮಿ ಹಿರೇಮಠ, ಮಹದೇವಪ್ಪ ತು ಚಟ್ನಳ್ಳಿ, ರಾಜು ಮಾದರ, ಗೌಡಪ್ಪಗೌಡ ಟಕ್ಕಳಕ್ಕಿ,ಮುತ್ತು ಹೂಗಾರ, ದೇವೀಂದ್ರಪ್ಪ ಗೌಡ ಬಿರಾದಾರ್, ಶಿವಣ್ಣ ಹೂಗಾರ್, ಸಂಗನಗೌಡ ಅರಖೆರಿ, ಅಣ್ಣಪ್ಪಗೌಡ ದಂಡಪ್ಪಗೋಲ, ರೈತರು ಈ ಸಂದರ್ಭದಲ್ಲಿ ತಿಳಿಸಿದರು.ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button