ವಿದ್ಯುತ್ ಇಲ್ಲದ ಕಾರಣಕ್ಕೆ ನೀರಿನ ಸಮಸ್ಯೆ ಉಲ್ಬಣ ತ್ವರಿತ ಕ್ರಮ ಕೈಗೊಳ್ಳದಿದ್ದರೆ – ರೈತರಿಂದ ಉಗ್ರ ಹೋರಾಟದ ಎಚ್ಚರಿಕೆ.

ಕೋರವಾರ ಮಾರ್ಚ್.7

ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಹೆಸ್ಕಾಂ ಬಂದ ಮಾಡಿದ ಗ್ರಾಮದ ಪ್ರಮುಖರು, ಹಾಗೂ ರೈತರು, ಬೋರಗಿ, ಪುರದಾಳ, ಗುಬ್ಬೇವಾಡ, ಗ್ರಾಮದ ವಿದ್ಯುತ್ ಪೂರೈಕೆಯನ್ನು ಕಡಿತ ಗೊಳಿಸಿದರು, ಪುರದಾಳ ಕೆರೆ ಕೋರವಾರ ಗ್ರಾಮದ 240, ಎಕರೆ ಕ್ಷೇತ್ರ ಮುಳಗಡೆಯಾಗಿದ್ದು ಆದರೂ ಕೋರವಾರ ಗ್ರಾಮದ ಸಾರ್ವಜನಿಕರಿಗೆ ಕುಡಿಯಲು ನೀರು ಇಲ್ಲ ಆದ ಕಾರಣ ಗ್ರಾಮದ ಸಾರ್ವಜನಿಕರು ಉಗ್ರವಾದ ಹೋರಾಟವನ್ನು ಕೈಗೋಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಿದರು ಈ ಹೋರಾಟದ ನೇತೃತ್ವವನ್ನು ಗ್ರಾಮದ ಮುಖಂಡರಾದ ಬಾಪುಗೌಡ ಬಿರಾದಾರ, ಶೇಖರಗೌಡ ಬಾ, ಪೋಲಿಸ್ ಪಾಟೀಲ, ತಾಲೂಕಾ ತಹಶಿಲ್ದಾರ ಸಾಹೇಬರು ಬಂದು ಕ್ಷಮೆ ಕೇಳುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು. ಗ್ರಾ,ಪಂ, ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ರಾಜಶೇಖರ ಬಾ, ಛಾಯಾಗೊಳ, ಗ್ರಾ.ಪಂ.ಅಧ್ಯಕ್ಷರ ಅನುಪಸ್ಥಿತಿಯಲ್ಲಿ ರಫೀಕ ಬ್ಯಾಕೋಡ, ಉಪಾಧ್ಯಕ್ಷರಾದ ಮಾದೇವ ರಾಮನಹಳ್ಳಿ , ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಭೀಮನಗೌಡ ಶಿ, ಕುಳೇಕುಮಟಗಿ, ಬಸನಗೌಡ ಬಿರಾದಾರ, ಶರನಗೌಡ ನಾಯ್ಕಲ್, ಶಿವನಗೌಡ ಪಾಟೀಲ, ಬಸವರಾಜ ಜಾದವ, ಮಾಂತೇಸ ಪಾಟೀಲ, ಆಶೀನ್ ವಡಗೇರಿ, ಹಣಮಂತ ದೊಡ್ಡಮನಿ, ದಯಾನಂದ ಗುತ್ತರಗಿಮಠ, ಅಯಿಬ್ ತುರಕನಗೇರಿ, ಅರವೀಂದ ರಾಠೋಡ, ಉಮೇಶ ಕಾಖಂಡಕಿ, ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಕಾಶಿನಾಥ ಕಡಕಬಾವಿ, ಹಾಗೂ ಗ್ರಾಮದ ಪ್ರಮುಖರು ಸುರೇಶಗವಡ ಪೋಲಿಸ್ ಪಾಟೀಲ, ಮಾಂತಗೌಡ ಸುಂಬಡ, ಮಲ್ಲನಗೌಡ ಆರ್, ಬಿರಾದಾರ, ರಮೇಶ ಚಾಂದಕವಟೆ, ಬಸವರಾಜ ಏವೂರ, ಗುರುರಾಜ ಹುಣಸಗಿ, ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಚನ್ನಪ್ಪಗೌಡ ಬಿರಾದಾರ, ಸಿಂದಗಿ ತಾಲೂಕಾಧ್ಯಕ್ಷರು ಸಂತೋಷ ಮನಗೂಳಿ, ಹಾಗೂ ದೇವರ ಹಿಪ್ಪರಗಿ ತಾಲುಕಾ ಉಪಾಧ್ಯಕ್ಷರಾದ ಸಿದ್ರಾಮಪ್ಪ ಅವಟಿ, ಹಾಗೂ ಗ್ರಾಮದ ರೈತರು ಮತ್ತಿತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button