ಕೆಳ ಭಾಗದ ಜನರಿಗೆ ತಲುಪದ ನೀರು ಮಾಜಿ ಶಾಸಕ – ರಾಜಾ ವೆಂಕಟಪ್ಪ ನಾಯಕ ಆಕ್ರೋಶ.
ಮಾನ್ವಿ ಮಾ.13
ತಾಲೂಕಿನ ಕೆಳ ಭಾಗದ ರೈತರಿಗೆ ಕಾಲುವೆ ನೀರು ಬಾರದ ಹಿನ್ನೆಲೆಯಲ್ಲಿ ತೊಂದರೆಯಾಗಿದ್ದು, ಕೂಡಲೇ ಸರಕಾರ ಎಪ್ರೀಲ್ 20 ರವರೆಗೂ ನೀರು ಹರಿಸುವ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಆರ್.ವಿ.ಎನ್ ಕಾಂಪ್ಲೆಕ್ಸ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಡ್ಯಾಂನಲ್ಲಿ ನೀರಿದೆ ಆದರೆ ಕೆಳಭಾಗಕ್ಕೆ ನೀರು ಬಾರದ ಕಾರಣ ತಡವಾಗಿ ನಾಟಿ ಮಾಡಿದ ಭತ್ತ ಬೆಳೆಗಾರರಿಗೆ ತೊಂದರೆ ಯಾಗುತ್ತದೆ. ಈ ಸಮಸ್ಯೆ ನಿವಾರಿಸಲು ಸ್ಥಳೀಯ ಶಾಸಕ ಹಂಪಯ್ಯ ನಾಯಕರು ಕಾಳಜಿ ವಹಿಸಬೇಕು ಎಂದರು.

ಈ ಭಾಗದ ಶಾಸಕನಾಗಿದ್ದ ವೇಳೆ ನಾನು ನೀರು ಹರಿಸುವ ಕೆಲಸ ಮಾಡಿದ್ದೇ. ಆದರೆ ರೈತರು ನೀರು ಬಿಡಿಸುವ ಕೆಲಸ ಮಾಡಿ ಎಂದು ನಮಗೆ ಮನವಿ ಮಾಡುತ್ತಿದ್ದಾರೆ. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಮತ್ತು ಸಚಿವ ಎನ್.ಎಸ್.ಬೋಸರಾಜು ಅವರು ನೀರು ಬಿಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ