ಜಾತ್ಯತೀತ ಮನೋಭಾವದಿಂದ ನಾವು ಸದಾ ಸೇವೆಗೆ ಸಿದ್ದ – ಶಾಸಕ ಜಿ.ಎಸ್ ಪಾಟೀಲ.
ಜಕ್ಕಲಿ ಮಾ.30

ತಾಲೂಕಿನ ಜಕ್ಕಲಿ ಗ್ರಾಮದ ಡಾ, ಬಿ.ಆರ್ ಅಂಬೇಡ್ಕರ್ ನಗರದಲ್ಲಿ ಶ್ರೀ ದುರ್ಗಾದೇವಿ ಕಳಸಾರೋಹಣ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ರೋಣ ಮತ ಕ್ಷೇತ್ರದ ಶಾಸಕ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಮಂಡಳ್ಳಿಯ ಅಧ್ಯಕ್ಷ ಜಿ.ಎಸ್ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮುದಾಯದ ಸಹಕಾರದಿಂದ ಇಂತಹ ಸಮಾಜ ಕಾರ್ಯಗಳು ನಡೆಯಲು ಸಾಧ್ಯ. ಭಾರತ ಹಾಗೂ ನಾಡಿನ ಸಂಸ್ಕೃತಿಯನ್ನು ಇಂದಿನ ದಿನ ಯುವಕರು ಅಳವಡಿಸಿ ಕೊಳ್ಳಬೇಕು. ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ನಮ್ಮ ಕಾಂಗ್ರೆಸ್ ಸರ್ಕಾರ ಸಾಮಾನ್ಯರಿಗೆ ಮಹತ್ವ ಸ್ಥಾನಮಾನ ಕೊಟ್ಟಿದೆ ಪರಿಶಿಷ್ಟ ಜಾತಿಯ ಹಿರಿಯ ನಾಯಕ ಮಲ್ಲಿಕಾರ್ಜುನವರಿಗೆ ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರ ಸ್ಥಾನ ವಹಿಸಿ ಕೊಟ್ಟಿದೆ ಮುಂದಿನ ದಿನ ಮಾನಗಳಲ್ಲಿ ಒಂದು ಅವಕಾಶ ಸಿಕ್ಕರೆ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನ ಮಂತ್ರಿ ಆಗುವ ಎಲ್ಲಾ ಲಕ್ಷಣಗಳು ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಇದೆ ಎಂದು ಹೇಳಿದರು.ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅನಿಲಕುಮಾರ ಹೊಸಮನಿ ಮಾತನಾಡಿ. ನಿಜಕ್ಕೂ ಇದು ಬಹಳ ಶುಭ ಸಮಾರಂಭ ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಇವತ್ತಿನ ದಿನ ಹೊಸ ವರ್ಷ ನಾವುಗಳು ಜನೆವರಿಯಿಂದ ಹೊಸ ವರ್ಷ ಆಚರಣೆ ಮಾಡುತ್ತೇವೆ ಅದು ನಿಜಕ್ಕೂ ತಪ್ಪು ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ದಿನದಿಂದ ಹೊಸ ವರ್ಷ ಪ್ರಾರಂಭ ಈ ಹೊಸ ವರ್ಷದ ಶುಭ ಸಂದರ್ಭದಲ್ಲಿ ಈ ದುರ್ಗಾದೇವಿಯ ಕಳಸಾರೋಹಣ ಉದ್ಘಾಟನೆ ಮಾಡಿರುವುದು ನಮಗೆಲ್ಲ ಸಂತಸ ತಂದಿದೆ ದೇವಸ್ಥಾನವನ್ನು ಎಷ್ಟೇ ಲಕ್ಷ ಖರ್ಚು ಮಾಡಿದರು ಕೂಡ ದೇವಸ್ಥಾನಕ್ಕೆ ಮೇಲೆ ಕಳಸವನ್ನು ಅಲಂಕರಿದರೆ ಮಾತ್ರ ಆ ದೇವಸ್ಥಾನಕ್ಕೆ ಒಂದು ಕಳೆ ಬರುತ್ತದೆ ಎಂದು ಮಾತನಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯ ಮಾತುಗಳನ್ನಾಡಿದ ಎಂ.ಎಂ ಮೇಟಿ ಮಾತನಾಡಿ. ಯುವಕರು ಉತ್ತಮ ರೀತಿಯಲ್ಲಿ ಧರ್ಮದ ಹಾದಿಯಲ್ಲಿ ಬದುಕ ಬೇಕು. ಡಾಕ್ಟರ್, ಬಾಬಾ ಸಾಹೇಬ್ ಅಂಬೇಡ್ಕರ ಹೇಳಿದಾಗೆ ಶಿಕ್ಷಣ ಎಂಬುವುದು ಹುಲಿಯ ಹಾಲು ಇದ್ದಂತೆ ಅದನ್ನು ಕುಡಿದವರು ಘರ್ಜಿಸಲೇ ಬೇಕೆಂಬ ಮಾತು ನಿಜಕ್ಕೂ ಸತ್ಯ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ಹಿರಿಯರಿಗೆ ಗೌರವ ನೀಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗವ್ವ ಜಂಗಣ್ಣವರ, ರಮೇಶ ಪಲ್ಲೆದ. ಅಶೋಕಪ್ಪ ಯಾವಗಲ್. ಮಹೇಶ್ವರಪ್ಪ ಕೋರಿ. ಪ್ರಕಾಶ ವಾಲಿ. ಫಕೀರಪ್ಪ ಮಾದರ. ಕೊಪ್ಪದ ವಕೀಲರು. ಹುಚ್ಚುಸಾಬ್ ಬಸಾಪುರು. ಅಂದಪ್ಪ ಕಟ್ನಳ್ಳಿ. ಸಂದೇಶ ದೊಡ್ಡಮೇಟಿ. ಸಿದ್ದಪ್ಪ ಮಾದರ. ಶೇಕಪ್ಪ ತಿಲಗರ. ಮುತ್ತಪ್ಪ ಜೋಗಿನ. ದೇವರಾಜ ತಿಲಗರ. ಈರಪ್ಪ ಕಾಳಿ. ಬಸವರಾಜ ಕಾಳಿ. ಮುತ್ತಪ್ಪ ಕಾಳಿ. ಯಲ್ಲಪ್ಪ ಜೋಗಿನ. ಅಯ್ಯಪ್ಪ ತಿಲಗರ. ಯಲ್ಲಪ್ಪ ತಿಲಗರ. ಜಗದೀಶ ತಿಲಗರ. ಲಕ್ಶ್ಮಣ ಜೋಗಿನ. ಅನಿಲ್ ಜೋಗಿನ. ಶ್ರೀಕಾಂತ್ ಜೋಗಿನ. ವಿಜಯ ಜೋಗಿನ. ಸೇರಿದಂತೆ ಗುರು-ಹಿರಿಯರು ಹಾಗೂ ಯುವಕರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ