“ಕರುನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ”…..

ಬಸವಣ್ಣನವರನ್ನು ಕುರಿತು ಪೌರಾಣಿಕ ಕಥೆ ಏನೇ ಹೇಳಲಿ ಅವರು ಭಾರತ ದೇಶದ ಮೊಟ್ಟ ಮೊದಲನೆಯ ಸ್ವತಂತ್ರ ವಿಚಾರವಾದಿ ಆಗಿದ್ದರೆಂಬ ವಿಷಯ ಅತ್ಯಂತ ಸ್ಪಷ್ಟವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೆಯ ಶತಮಾನ ಪ್ರಮುಖವಾದುದು. ಏಕೆಂದರೆ ಸಾಹಿತ್ಯ ಕ್ರಾಂತಿ ಯುಂಟಾಯಿತು. ಆ ಕ್ರಾಂತಿ ಪುರುಷರೇ ಬಸವಣ್ಣನವರು. 12 ನೇ. ಶತಮಾನದಲ್ಲಿ ಅಸಂಘಟಿತ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಕಾಯಕ ಸಿದ್ಧಾಂತ ಪರಿಕಲ್ಪನೆ ಮುಖಾಂತರ ಸರ್ವ ಸಮಾನತೆ ಸಮಾಜ ಕಟ್ಟಲು ಬಯಸಿದ ಜಗತ್ತಿನ ಮೊದಲ ‘ಸಮೂಹ ಸಂಘಟಕ’ ವಿಶ್ವ ಗುರು ಬಸವಣ್ಣನವರು.
ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ 1134 ರಲ್ಲಿ ಜನಿಸಿದರು. ಶ್ರೀ ಮಾದರಸ ಮತ್ತು ಮಾದಲಾಂಬಿಕೆ ಬಸವಣ್ಣನವರ ಅಪ್ಪ ಅಮ್ಮ. ಬಸವಣ್ಣನವರು ಎಂಟನೇ ವಯಸಿನಲ್ಲಿ ಇದ್ದಾಗ ಅವರಿಗೆ ಜನಿವಾರ ಕಟ್ಟಲು ಹೋದಾಗ ಅವರು ತಮಗಿಂತ ದೊಡ್ಡವಳಾದ ಸಹೋದರಿ ನಾಗಮ್ಮನಿಗೆ ಕಟ್ಟಲು ಹೇಳುತ್ತಾರೆ. ಆ ಸಮಯದಲ್ಲಿ ಹಿರಿಯರು ಇದು ಪುರುಷರಿಗೆ ಮಾತ್ರ ಕಟ್ಟಬೇಕು ಮಹಿಳೆಯರಿಗೆ ಕಟ್ಟುವಂತಿಲ್ಲ ಎಂದು ಹೇಳಿದಾಗ ಪುರುಷ ಮತ್ತು ಮಹಿಳೆ ಮಧ್ಯ ಸಮಾನತೆ ಇರಬೇಕು ಬೇಧ – ಭಾವ ಇರಬಾರದು ಎಂದು ಹೇಳಿ ಮನೆ ಬಿಟ್ಟು ಹೊರಟು ಹೋಗುತ್ತಾರೆ.
ನಂತರ ಬಸವಣ್ಣ ಕೂಡಲ ಸಂಗಮಕ್ಕೆ ತೆರಳುತ್ತಾರೆ. ಸುಮಾರು 12 ವರ್ಷಗಳ ಕಾಲ ಕೂಡಲ ಸಂಗಮದಲ್ಲೇ ಅಧ್ಯಯನದಲ್ಲಿ ತೊಡಗಿಸಿ ಕೊಳ್ಳುತ್ತಾರೆ. ದೇವರು ಬೇರೆ ಎಲ್ಲಿಯೂ ಇಲ್ಲ ಅವನು ನಮ್ಮೊಳಗೆ ಇದ್ದಾನೆ ಎಂದು ಬಸವಣ್ಣ ನಂಬಿದ್ದರು. ಸುಳ್ಳು ಹೇಳುವುದು, ಕೊಲೆ ಸುಲಿಗೆ ಪ್ರಾಣಿ ಬಲಿ / ಹಿಂಸೆ ಯಾವುದು ಇಷ್ಟವಾಗುತ್ತಿರಲಿಲ್ಲ. ಇವೆಲ್ಲವನ್ನು ಬಸವಣ್ಣ ವಿರೋಧಿಸುತ್ತಿದ್ದರು. ಬಸವಣ್ಣನವರಿಗೆ ಕ್ರಾಂತಿಯೋಗಿ ಬಸವಣ್ಣ, ಮಹಾ ಮಾನತಾವಾದಿ ಎಂಬ ಹೆಸರುಗಳು ಕೂಡ ಇವೆ. ಸಮಾನತೆ, ಕಾಯಕ, ತತ್ವಗಳನ್ನು ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವ ಶರಣರಾಗಬಹುದು ಅನ್ನೋದು ಬಸವಣ್ಣನವರ ದೃಷ್ಟಿ ಕೋನವಾಗಿತ್ತು. ಬಸವಣ್ಣನವರ ವಚನಗಳ ಅಂಕಿತ “ಕೂಡಲ ಸಂಗಮದೇವ.” ಕಾಯಕವೇ ಕೈಲಾಸ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಹೀಗೆ ಹಲವು ವಚನಗಳ ಮೂಲಕ ಅಪೂರ್ವವಾದ ಕೊಡುಗೆ ನೀಡಿದ್ದಾರೆ.
ಕರ್ತನೆಂಬ ಕಲಾವಿದ ಮನುಕುಲದ ಇತಿಹಾಸವೆಂಬ ಭಿತ್ತಿಯ ಮೇಲೆ ತನ್ನ ಕಾರುಣ್ಯ ಕುಂಚದಿಂದ ಬಿಡಿಸಿದ ಅಪ್ರತಿಮ ಚಿತ್ರ ವಿಶ್ವ ಗುರು ಬಸವಣ್ಣನವರು. ಸರ್ವ ಗುಣ ಸಂಪನ್ನರಾದ, ಸಕಲ ಜನ ವಂದ್ಯರಾದ, ದಯೆ ಮಾನವೀಯತೆ -ಧೀಮಂತಿಕೆಯ ತ್ರಿಕೂಟವಾದ ಬಸವಣ್ಣನವರು ಪರ ವಸ್ತುವಿನ ಚಿತ್ಕಳೆಯಾಗಿ, ಶರಣರ ಮನೋ ಮಧ್ಯದ ಸ್ವಯಂ ಜ್ಯೋತಿಯಾಗಿ ಬಾಳಿ ಬೆಳಗಿದರು.
ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಹಿಂದೂ ದೇವಸ್ಥಾನದಲ್ಲಿ ಅಧ್ಯಯನ ಮಾಡುತ್ತಿದ್ದರು ನಂತರ ಸಂಗಮೇಶ್ವರದಲ್ಲಿದ್ದ ಲಕುಲಶಾ – ಪಾಶುಪತ ಸಂಪ್ರದಾಯದ ಒಂದು ಶೈವ ಗುರು ಕುಲದಲ್ಲಿ ಶಿಕ್ಷಣವನ್ನು ಮುಗಿಸಿದರು. ಜಾತವೇದಮುನಿ (ಈಶಾನ್ಯಗುರು) ಎಂಬುವವರು ಅವರ ಗುರುಗಳೆಂದು ಹೇಳಲಾಗುತ್ತದೆ. ಅವರು ತಮ್ಮ ಸೋದರ ಮಾವನ ಮಗಳು ನೀಲಾಂಬಿಕೆಯನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಳು.
ಕನ್ನಡ ನೆಲದ ಸಮಾಜ ಚರಿತ್ರೆಯ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಹಾಕಿರುವ ಹೆಸರು ಬಸವಣ್ಣ. 12 ನೇ. ಶತಮಾನದಲ್ಲಿ ಕರ್ನಾಟಕದ ಶಿವ ಶರಣ ಧರ್ಮದ ಸ್ಥಾಪಾಕನಾಗಿ, ಜಾತಿ – ವರ್ಣ, ಲಿಂಗ – ತಾರತಮ್ಯಗಳ ವಿರುದ್ಧ ಕೂಗಿ ಹೊಡೆದ, ಸಮಾನತೆಯ ಸೌಂದರ್ಯವನ್ನು ಸಾರಿ, ಇಡಿ ಸಮಾಜದ ರೂಪವನ್ನೇ ಬದಲಿಸಿದ ಯುಗ ಪುರುಷ ಬಸವಣ್ಣನ ಕಥೆ ಕೇವಲ ಚರಿತ್ರೆ ಅಲ್ಲ, ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶನದ ಹೊಳಹು.
ಬಸವಣ್ಣನವರು ಅನುಭವ ಮಂಟಪ ರಚಿಸಿ ಧರ್ಮ ಪ್ರಚಾರ ಮಾಡಿದರು. ಅಲ್ಲಮಪ್ರಭುಗಳು ಅನುಭವ ಮಂಟಪದ ಅಧ್ಯಕ್ಷರಾಗಿ ಅದರ ನೇತೃತ್ವ ವಹಿಸಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮ ಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು. ಅನುಭವ ಮಂಟಪವೆಂಬುದು ಮಂಟಪವಲ್ಲ, ಅದು ಎಲ್ಲಾ ಜಾತಿ – ಧರ್ಮ, ಸ್ತ್ರೀ -ಪುರುಷ, ಬಡವ -ಶ್ರೀಮಂತ, ಆಳು -ಒಡೆಯ, ಅಕ್ಷರಸ್ಥ-ಅನಕ್ಷರಸ್ಥ, ಎಂಬ ಬೇಧ – ಭಾವಗಳಿಲ್ಲದೆ ಎಲ್ಲರನ್ನೂ ಒಳಗೊಂಡಿದ್ದ ಮಹಾ ವೇದಿಕೆ.
ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಿದ ಮತ್ತು ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶವನ್ನು 12 ನೇ. ಶತಮಾನದಲ್ಲಿ ಇಡಿ ಜಗತ್ತಿಗೆ ನೀಡಿದ ವಿಶ್ವ ಗುರು ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು. 900 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ.
ರಾಜ್ಯದ ಏಳಿಗೆಗಾಗಿ ಬಸವಣ್ಣನವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಜನರಲ್ಲಿ ಆಳವಾಗಿ ಬೇರೂರಿದ್ದ ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದರು. ಸಕಲ ಪ್ರಾಣಿಗಳಲ್ಲೂ ದಯೆ ಇಡಬೇಕು, ಅಹಂಕಾರ ಬಿಡಬೇಕು ಎಂದು ಬೋಧಿಸಿದರು. ಎಲ್ಲ ಜಾತಿಯವರೂ ಒಂದೇ, ಜಾತಿಬೇಧ ತರವಲ್ಲ ಎಂದು ಹೇಳುತ್ತಿದ್ದರು. ಎಷ್ಟೋ ಮಂದಿ ಬಸವಣ್ಣನವರ ಅನುಯಾಯಿಗಳಾದರು. ಬಸವಣ್ಣನವರನ್ನು ಕಂಡರಾಗದ ಜನ ದೊರೆಯ ಬಳಿ ಅವರ ಬಗ್ಗೆ ದೂರು ತಂದರು. ಆದರೆ ಬಸವಣ್ಣನವರ ಸತ್ಯ ಮತ್ತು ಪ್ರಾಮಾಣಿಕತೆಯ ಗುಣಗಳು ಅವರನ್ನು ಕಾಪಾಡಿದವು.
ಬಸವಣ್ಣ ತಾವು ನಂಬಿಕೊಂಡ ತತ್ವಗಳನ್ನು ಪ್ರತಿಪಾದಿಸುವುದಕ್ಕಾಗಿ ವೀರಶೈವ ಮತವನ್ನು ಸ್ಥಾಪಿಸಿದರು. ಅನ್ಯಜಾತಿಯವರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು. ಅದರ ಕುರುಹಾಗಿ ಲಿಂಗಧಾರಣೆ ಮಾಡಿಸಿದರು. ಅಸ್ಪ್ರಶ್ಯರೆಂದು ದೂಡಲ್ಪಟ್ಟ ಜನರೊಡನೆ ಬೆರೆತರು. “ನಾವೆಲ್ಲ ಶಿವನ ಮಕ್ಕಳು, ಶಿವ ಶರಣರು” ಎಂದು ಹೇಳಿದರು. ಮೇಲು ಕೀಳು ಎಂಬ ತಾರತಮ್ಯವನ್ನು ತೊಡೆದು ಹಾಕಲು ಬಸವಣ್ಣನವರು ಶ್ರಮಿಸಿದರು.
ಬಸವಣ್ಣನವರ ಬದುಕು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಕಾಯಕದ ಪವಿತ್ರತೆ, ಸರಳತೆ, ಪ್ರಾಮಾಣಿಕತೆ, ನಿರ್ಭಯತೆ, ಧೈರ್ಯ – ಇವುಗಳೇ ಅವರ ಬದುಕಿನ ಸಾರ. ಅವರ ಜೀವನವನ್ನು ಒಂದು ಕನ್ನಡಿಯಾಗಿ ನೋಡಿ ಕೊಂಡು ನಮ್ಮನ್ನು ನಾವು ಸರಿಪಡಿಸಿ ಕೊಳ್ಳಬೇಕು ಎಂದು ಬಸವಣ್ಣನ ಧರ್ಮ, ತತ್ವಜ್ಞಾನ, ಸಾಹಿತ್ಯ ಇಂದಿಗೂ ನಮ್ಮನ್ನು ಪ್ರೇರೆಪಿಸುತ್ತವೆ. ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಅವರ ಸಂದೇಶವನ್ನು ಹರಡಲೂ ನಾವೆಲ್ಲರೂ ಒಂದಾಗೋಣ. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿ ಕೊಂಡು, ನ್ಯಾಯೋಚಿತ, ಸಮಾನತೆಯ ಸಮಾಜವನ್ನು ಕಟ್ಟಲು ಪ್ರಯತ್ನಿಸೋಣ. ಇದೇ ಬಸವಣ್ಣನಿಗೆ ನಾವು ನೀಡಬಹುದಾದ ಅತ್ಯಂತ ದೊಡ್ಡ ಗೌರವ.
ಬಸವಣ್ಣನವರ ಸಾಧನೆಗಳು ಕೇವಲ ಸಮಾಜದಲ್ಲಿ ತಾನಲ್ಲ, ಸಾಹಿತ್ಯದಲ್ಲೂ ಅಜರಾಮರವಾಗಿವೆ. ಅವರು ಬರೆದ “ವಚನಗಳು” ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳು. ಸರಳ ಭಾಷೆಯಲ್ಲಿ, ಆಳವಾದ ತತ್ವವನ್ನು ಹೇಳುವ ವಚನಗಳು ಎಲ್ಲಾ ವರ್ಗದ ಜನರಿಗೂ ಮನ ಮುಟ್ಟುತ್ತವೆ. ಪ್ರೀತಿ, ಭಕ್ತಿ, ಸಮಾನತೆ, ಮಾನವೀಯತೆ ಮುಂತಾದ ವಿಷಯಗಳನ್ನು ವಚನಗಳಲ್ಲಿ ಕಾಣಬಹುದು. ಬಸವಣ್ಣನವರ ವಚನಗಳು ಕೇವಲ ಓದುವ ಕೃತಿಗಳಲ್ಲಿ, ಬದುಕಿನ ಪಾಠಗಳು ಅವು ನಮ್ಮನ್ನು ಆತ್ಮ ಸಂಶಯಕ್ಕೆ, ಸಮಾಜ ಸುಧಾರಣೆಗೆ ಮತ್ತು ಒಳ್ಳೆಯ ಬದುಕಿಗೆ ಪ್ರೇರೇಪಿಸುತ್ತವೆ. ಇಂದಿಗೂ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಬಸವಣ್ಣನ ವಚನಗಳು ಜನಪ್ರಿಯವಾಗಿವೆ.
ಬಸವಣ್ಣ ತಮ್ಮ ಬದುಕನ್ನೆ ಒಂದು ಪ್ರಾಯೋಗಿಕ ಶಾಲೆಯಾಗಿ ಮಾಡಿ ಕೊಂಡವರು. ಜಗತ್ತನ್ನು ಸುಧಾರಿಸುವವರು ಮೊದಲು ತನ್ನನ್ನು ಸುಧಾರಿಸಿ ಕೊಳ್ಳಬೇಕು ಎಂದು ಸ್ವತಃ ತಾವೇ ಅದನ್ನು ಪರಿ ಪಾಲಿಸಿದವರು. ತನ್ನ ಬದುಕು ಉತ್ತಮವಾಗಿದ್ದರೆ ಮಾತ್ರ ಇನ್ನೊಬ್ಬರ ಬದುಕಿಗೆ ಮಾರ್ಗದರ್ಶಕನಾಗಲು ಸಾಧ್ಯ. ಅದರಂತೆ ಕೇವಲ ಮಾತು ಆದರ್ಶವಾಗದೆ ನಡೆ ಆದರ್ಶವಾಗಬೇಕು ಎಂಬ ತತ್ವದಂತೆ ನಡೆದು ತೋರಿಸಿದವರು.
ಕೂಡಲ ಸಂಗಮದಲ್ಲಿ ಬಸವಣ್ಣನವರು ತಮ್ಮ ಗುರುಗಳೊಂದಿಗೆ 10 ವರ್ಷ ಕಳೆದರು. ಅವರು 18 ವರ್ಷ ವಯಸ್ಸಿನ ಯುವಕರಾಗಿದ್ದರು. ವೇದಗಳು, ಪುರಾಣಗಳು, ಶಾಸ್ತ್ರಗಳು ಇತ್ಯಾದಿಗಳು ಅಧ್ಯಯನವನ್ನು ಪೂರ್ಣ ಗೊಳಿಸಿದ ಅವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಸಂಪೂರ್ಣ ಜ್ಞಾನವನ್ನು ಹೊಂದಿದ್ದರು. ದೇವರ ಹೆಸರಿನಲ್ಲಿ ನಡೆಯುವ ಅನೈತಿಕ ಸಂಸ್ಕೃತಿಯನ್ನು ಕಂಡು ಅಸಹ್ಯ ಪಟ್ಟು, ಅನಕ್ಷರಸ್ಥ ಮುಗ್ಧ ಬ್ರಾಹ್ಮಣೇತರರು ದೇವರ ಹೆಸರಿನಲ್ಲಿ ವಂಚನೆ ಗೊಳಗಾಗುತ್ತಿರುವುದನ್ನು ಕಂಡು ಕನಿಕರ ವ್ಯಕ್ತಪಡಿಸಿದರು. ಬ್ರಾಹ್ಮಣರು ಅಕ್ಷರಸ್ಥರಾಗಿದ್ದರೂ, ಅಕ್ಷರವಿಲ್ಲದ ಬ್ರಾಹ್ಮಣೇತರರಂತೆ ಮೇಕೆಯನ್ನು ಬಲಿ ಪಶುವಾಗಿ ಅರ್ಪಿಸುವ ಮೂಲಕ ಅದೇ ಪಾಪಗಳನ್ನು ಮಾಡುತ್ತಿದ್ದರು. ಇಂತಹ ಹಿಂಸಾಚಾರಕ್ಕೆ ಕಡಿವಾಣ ಹಾಕಲು ಸಮಾಜದಲ್ಲಿ ಸುಧಾರಣೆ ತರಲು ಬಸವಣ್ಣನವರು ನಿರ್ಧರಿಸಿದರು.
ಸಾವಿಲ್ಲದ ಸಾಹಿತ್ಯಕ್ಕೆ ವಾಸ್ತುವಾಗುವುದರಲ್ಲಿ ಜೀವನದ ಸಾರ್ಥಕತೆ ಅಡಗಿದೆ. ಬದುಕನ್ನು ಹಿತವಾಗಿಸುವ ಸಾಹಿತ್ಯದೊಳಗೆ ಜೀವ ಚೈತನ್ಯವಿದೆ. ಕನಸು ಕಟ್ಟೆ ನನಸಾಗಿಸುವ, ಮಾಲಿನ್ಯ ಗೊಂಡ ಮನವನ್ನು ಮಡಿಯಾಗಿಸಿ, ವ್ಯಷ್ಟಿ ಮತ್ತು ಸಮಷ್ಟಿಯನ್ನು ಸದೃಢ ಗೊಳಿಸುವ ಶಕ್ತಿ ಕಾವ್ಯಕ್ಕಿದೆ. ವ್ಯಕ್ತಿ ಮತ್ತು ಸಮಾಜದ ಸಂವರ್ಧನೆಯ ಬೀಜವು ಕಾವ್ಯದೊಳಗೆ ಅಡಗಿ ಕೊಂಡಿರುತ್ತದೆ. ಭೂತಕಾಲವು ವರ್ತಮಾನಕ್ಕೆ ಪ್ರೇರಕ ಶಕ್ತಿಯಾದಂತೆ, ವರ್ತಮಾನ ಭವಿಷ್ಯತ್ ಕಾಲದ ನಡುವಳಿಕೆಗೆ ಸ್ಫೂರ್ತಿಯಾಗಿರುತ್ತದೆ. ಕಾಲ ಮತ್ತು ಸಮಾಜವನ್ನು ಮುನ್ನೆಡೆಸುವ ಧೀಶಕ್ತಿಗಳೆಂದರೆ ವಿಶಿಷ್ಟವಾದ ಆದರ್ಶ ಮತ್ತು ಮೌಲ್ಯಗಳು. ಇಂಥ ಆದರ್ಶ ಮತ್ತು ಮೌಲ್ಯಗಳನ್ನು ರೂಪಿಸಿ, ರೂಢಿಸಿ ಕೊಂಡು ಬಾಳಿ ಬೆಳಗಿದ ಬಸವಣ್ಣ ಯುಗಪುರುಷ.
ಕನ್ನಡ ನಾಡು – ನುಡಿಗೆ ಅನನ್ಯವಾದ ಕಾಣಿಕೆ ನೀಡಿದ ಬಸವಣ್ಣ ವಿಶ್ವ ಶ್ರೇಷ್ಠ ಸಾಂಸ್ಕೃತಿಕ ನಾಯಕ. ತನ್ನ ಸಮಕಾಲೀನರು, ಜನಪದರು ಹಾಗೂ ಕವಿಗಳ ಕೃತಿಗಳಿಗೆ ವಸ್ತುವಾಗಿರುವ ಬಸವಣ್ಣನವರು ಅನುಭವ ಮತ್ತು ಅನಾನುಭಾವವನ್ನು ಒಗ್ಗೂಡಿಸಿ ಅರಳಿದವರು. ಬಸವಣ್ಣನವರು ಬದುಕು ಮತ್ತು ಬರಹಗಳು ಸಮಾಜವನ್ನು ಸಾಮರಸ್ಯ ದೊಳಗೆ ಬೆಸೆಯುವ ಬೆಸುಗೆಗಳು. ತನ್ನ ತಾನರಿತ ಬಸವಣ್ಣನವರ ನುಡಿಯೊಳಗಿನ ನಡೆಯನ್ನು ನಡೆ ಯೊಳಗಿನ ನುಡಿಯನ್ನು ಅವರ ಅರಿವಿನ ಅನುಭವ ಮಂಟಪವನ್ನು ಕನ್ನಡ ಸಾಹಿತ್ಯ ದಾಖಲಿಸುತ್ತಾ ಬಂದಿದೆ.
ಬಸವ, ಬಸವಣ್ಣ, ಬಸವೇಶ್ವರ ಎಂಬ ಹೆಸರೇ ಒಂದು ಬಗೆಯ ರೋಮಾಂಚನ, ಸಮ ಸಮಾಜದ ಕನಸುಗಾರ, ಪ್ರಗತಿಪರ ಚಿಂತಕ, ಶರಣ ಪರಂಪರೆಯ ಹರಿಕಾರ, ವಚನ ಸಾಹಿತ್ಯದ ನೇತಾರ, ಕನ್ನಡ ಭಾಷೆಗೆ ಅಸಾಮಾನ್ಯ ಶಕ್ತಿ ತುಂಬಿದ ವಿದ್ವಾಂಶ ಜನ ಭಾಷೆಯಲ್ಲಿ ವಚನಗಳ ಮೂಲಕ ಸಂವಹನ ನಡೆಸಿದ ಜನಪದವೂ ಬಸವಣ್ಣನೇ ಆಗಿದ್ದಾನೆ.
ಬಸವಣ್ಣ ಪ್ರಕಾರ ಸಾಮಾಜಿಕ ಬದುಕಿನ ಬೇರುಗಳು ಸಮಾಜದ ಕೆನೆ ಪದರದಲ್ಲಿ ಹುದುಗಿದೆಯೇ ಹೊರತು ಸಮಾಜದ ಕೊಳೆಯಲ್ಲಿದೆ ಎಂದರು. ಹಸು ತನ್ನ ಬೆನ್ನಿನ ಮೇಲೆ ಕುಳಿತವನಿಗೆ ಹಾಲು ಕೊಡುವುದಿಲ್ಲ. ಆದರೆ ತನ್ನ ಪಾದದಲ್ಲಿ ಕುಣಿಯುವವನಿಗೆ ಹಾಲು ಕೊಡುತ್ತದೆ ಎಂಬುದು ಅವರ ಹಾಸ್ಯದ ಮಾತು. ಅವರ ವ್ಯಾಪಕ ಸಹಾನುಭೂತಿಯೊಂದಿಗೆ, ಅವರು ತಮ್ಮ ಮಡಿಕೆಯಲ್ಲಿ ಉನ್ನತ ಮತ್ತು ಕೀಳುಗಳನ್ನು ಸಮಾನವಾಗಿ ಒಪ್ಪಿಕೊಂಡರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಅಥವಾ ಧಾರ್ಮಿಕ ಸಂಸತ್ತು ಸಾಮಾಜಿಕ ಪ್ರಜಾಪ್ರಭುತ್ವದ ಅಡಿಪಾಯವನ್ನು ಹಾಕಿತು. ಮನುಷ್ಯನು ಹುಟ್ಟಿನಿಂದಲ್ಲ, ಸಮಾಜಕ್ಕೆ ಅವನ ಯೋಗ್ಯತೆಯಿಂದ ಶ್ರೇಷ್ಠನಾಗುತ್ತಾನೆ ಎಂದು ಬಸವಣ್ಣನವರು ನಂಬಿದ್ದರು.
ಬಹಿರಂಗ ಶುದ್ದಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಿದ ಮತ್ತು ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶವನ್ನು 12 ನೇ. ಶತಮಾನದಲ್ಲೇ ಇಡೀ ಜಗತ್ತಿಗೆ ನೀಡಿದ ವಿಶ್ವಗುರು ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು. 900 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳು ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ.
ನಾಡಿನಲ್ಲಿ ವಿಚಾರ ಕ್ರಾಂತಿಯನ್ನು ಬಿತ್ತಿದ, ಸರ್ವ ಸಮಾನತೆಯನ್ನು ಹರಡಿದ, ವರ್ಗ ವರ್ಣವನ್ನು ನಿರ್ಮೂಲನೆ ಮಾಡಿದ, ಸ್ತ್ರೀ ಗೆ ಸಮಾನತೆ ನೀಡಿದ, ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ತಿರುವನ್ನು ನಿರ್ಮಿಸಿದ, ಕಾಯಕದ ಪರಿಕಲ್ಪನೆಯನ್ನು ಬಲವಾಗಿ ಮಂಡಿಸಿ ಆಚರಿಸಿದ, ದಾಸೋಹ ಭಾವನ್ನು ಎಲ್ಲೆಡೆ ಹರಡಿದ ಭಕ್ತಿ ಭಂಡಾರಿ, ವಿಶ್ವದ ಮೊಟ್ಟ ಮೊದಲ ಸಮಾಜವಾದಿ, ಸಮಾನತೆಯ ಹರಿಕಾರ, ಕಾಯಕ ಯೋಗಿ, ದಾಸೋಹ ಪ್ರೇಮಿ, ವಿಚಾರ ಕ್ರಾಂತಿಯ ನಿರ್ಮಾಪಕ, ಅನುಭವ ಮಂಟಪ ಶಿಲ್ಪಿ, ಪರಮ ಗುರು, ಕನ್ನಡದ ಅಣ್ಣ, ಕನ್ನಡ ಭಾಷೋದ್ಧಾರಕ, ಧಾರ್ಮಿಕ- ಸಾಮಾಜಿಕ- ಸಾಹಿತಿಕ – ವೈಚಾರಿಕ ಕ್ರಾಂತಿಗಳನ್ನು ಹುಟ್ಟು ಹಾಕಿದ ವಿಶ್ವದ ಶ್ರೇಷ್ಠ ದಾರ್ಶನಿಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಜಗದಣ್ಣ ವಿಶ್ವಗುರು ಬಸವಣ್ಣ.ಬಸವಣ್ಣನವರ ಆಚಾರ – ವಿಚಾರಗಳನ್ನು ಧಿಕ್ಕರಿಸಿ ಇಷ್ಟಲಿಂಗ ಧರಿಸಿ, ಕೈಯಲ್ಲಿ ರುದ್ರಾಕ್ಷಿಬೀಜ ಹಿಡಿದು, ವಿಭೂತಿ ಧರಿಸಿ ನಿರಂತರವಾಗಿ ಶಿವಣ್ಣನ ಪೂಜೆ ಮಾಡುವಂತೆ ಪ್ರೇರೇಪಿಸಿದರು. ಸಮಾಜದಲ್ಲಿ ಜಾತಿ ಬೇಧವಿಲ್ಲದೆ ಎಲ್ಲರೂ ಸಮಾನರು ಎಂದು ಬಸವಣ್ಣ ಪ್ರತಿಪಾದಿಸಿದರು. ಶರಣ ಪಂಥದಲ್ಲಿ ಪ್ರಮುಖರೆಂದರೆ ಬಸವಣ್ಣನವರು. ಅವರ ಜೀವನವೊಂದು ಅಮರ
ಜ್ಯೋತಿ.ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ