ಆದ್ದೂರಿಯಿಂದ ಜರುಗಿದ ಅಂಬೇಡ್ಕರ್ – ಜಯಂತಿ ಆಚರಣೆ.

ಕೋರವಾರ ಏ.29

ದೇವರ ಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ರಂದು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಸನ್ಮಾನ್ಯ ಶ್ರೀ ಶರಣಪ್ಪ ಸುಣುಗಾರ ಮಾಜಿ ಶಾಸಕರು ಸಿಂದಗಿ ಹಾಗೂ ಶ್ರೀನಾಥಗೌಡ.ಜಿ ಪಾಟೀಲ್ ಅಧ್ಯಕ್ಷರು ವಿನಾಯಕ ಕೋ ಆಪರೇಟಿವ್ ಸೊಸೈಟಿ ಕೋರವಾರ ನೆರವೇರಿಸಿದರು. ಮತ್ತು ಧ್ವಜಾರೋಹಣವನ್ನು ಸನ್ಮಾನ್ಯ ಶ್ರೀ ಶೇಖರಗೌಡ.ಬಿ ಪಾಟೀಲ್ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ವಿಜಯಪುರ ಹಾಗೂ ಭೀಮನಗೌಡ.ಸಿ ಕುಳೇಕುಮಟಗಿ ಗ್ರಾಮ ಪಂಚಾಯತಿ ಸದಸ್ಯರು ನೆರವೇರಿಸಿದರು. ಸಸ್ಯ ನಡೆಸುವ ಮೂಲಕ ಕಾರ್ಯಕ್ರಮವನ್ನು ಶ್ಮಕ್ಬುಲ್ ಭಾಗವಾನ್ ಉದ್ದಿಮೆದಾರರು ದೇವರ ಹಿಪ್ಪರಗಿ ಇವರು ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ ಅಭಿನವ ಮುರುಘೇಂದ್ರ ಮಹಾ ಸ್ವಾಮಿಗಳು ಹಾಗೂ ಪೂಜ್ಯ ಬಂತೆ ಅಮರ ಜೊತೆ ತಾಲೂಕ ಇವರು ವಹಿಸಿ ಕೊಂಡು ಮಾತನಾಡಿದರು.

ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಭೀಮನಗೌಡ (ರಾಜುಗೌಡ) ಪಾಟೀಲ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟನೆ ಮಾಡಿ ಬಾಬಾ ಸಾಹೇಬರು ಕುರಿತು ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಭುಗೌಡ ಲಿಂಗದಳ್ಳಿ ಅವರು ಪ್ರಶಸ್ತಿ ಪ್ರಧಾನ ಮಾಡುವುದರ ಜೊತೆಗೆ ಬಾಬಾ ಸಾಹೇಬರು ಕುರಿತು ಮಾತನಾಡಿದರು. ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಯುಷ್ಮಾನ್ ವೈ ಸಿ ಮಯೂರ ಅವರು ನೆರವೇರಿಸಿ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರ ಪ್ರತಿನಿಧಿಯಾದ ರಫಿಕ್ ಮೊಮೀನ್ ನವರು ವಹಿಸಿ ಕೊಂಡಿದ್ದರು. ಪ್ರಶಸ್ತಿ ಪ್ರಧಾನ ಸಮಿತಿಯ ಅಧ್ಯಕ್ಷರಾದ ಅರುಣ ಕೋರವಾರ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಪುಗೌಡ ಬಿರಾದಾರ ಸಿದ್ದು ರಾಯಣ್ಣನವರ ಎ.ಎಚ್ ವಾಲಿಕಾರ್ ಸಂಗಮೇಶ ಛಾಯಾಗೋಳ ಮಹಮದ್ ರಫೀಕ್ ಮೊಮಿನ್ ಮಹಾಂತೇಶ ಸಿ ತಾಳಿಕೋಟಿ ದಯಾನಂದ ಗುತ್ತರ್ಗಿಮಠ ಚಂದ್ರಶೇಖರ್ ಕಡಕೋಳ್ಕರ ಕಾಶಿನಾಥ್ ತಳಕೇರಿ ಪ್ರಕಾಶ ಮಲ್ಲಾರಿ ದತ್ತಪ್ಪ ನಾಟಿಕಾರ ರಾಘವೇಂದ್ರ ರಾ ಗುಡಿಮನಿ ಜಾನು ಗುಡಿಮನಿ ರಾವುತ ಮಾಸ್ತರ ತಳಕೇರಿ ಸೋಮು ಬಡಿಗೇರ್ ಬಸವರಾಜ ನಾಟಿಕಾರ ಬಸವರಾಜ ಜಾಲವಾದಿ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು 42 ಶ್ರೇಷ್ಠ ಶಿಕ್ಷಕರಿಗೆ ವಿತರಿಸಲಾಯಿತು. ಹಾಗೆ ರಾಜ್ಯಮಟ್ಟದ ಸ್ಪೂರ್ತಿದಾಯಕ ವ್ಯಕ್ತಿ ಪ್ರಶಸ್ತಿಯನ್ನು 27 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ದೇವರ ಹಿಪ್ಪರಗಿ ತಾಲೂಕಿನ ಪತ್ರಿಕಾ ವರದಿಗಾರರಿಗೆ ಕೋರವಾರ ಗ್ರಾಮ ಪಂಚಾಯತಿಯ ಎಲ್ಲಾ ಪೌರ ಕಾರ್ಮಿಕರಿಗೆ ಹಾಗೂ ಊರಿನ ಹಿರಿಯರಿಗೆ ವಿಶೇಷ ಸನ್ಮಾನ ಮಾಡಲಾಯಿತು. ದೇವರ ಹಿಪ್ಪರಗಿ ತಾಲೂಕು ಡಿಎಸ್ಎಸ್ ಪದಾಧಿಕಾರಿಗಳು ಹಾಗೂ ಪಟ್ಟಣದ ಘಟಕದ ಎಲ್ಲಾ ಪದಾಧಿಕಾರಿಗಳು ದೇವರ ಹಿಪ್ಪರಗಿ ತಾಲೂಕಿನ ಅಲ್ಪ ಸಂಖ್ಯಾತರ ಘಟಕದ ಪದಾಧಿಕಾರಿಗಳು ದೇವರ ಹಿಪ್ಪರಗಿ ತಾಲೂಕಿನ ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಕೋರವಾರ ಗ್ರಾಮದ ಎಲ್ಲ ಊರಿನ ಹಿರಿಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಭಾಗವಹಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ರಮೇಶ ಕಲಕೇರಿ ಹಾಗೂ ಕಾರ್ಯಕ್ರಮದ ವಂದನಾರ್ಪಣೆ ಮಲ್ಲಿಕಾರ್ಜುನ ಮಸಬಿನಾಳ ನೆರವೇರಿಸಿ ಕೊಟ್ಟರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button