ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ – ಬಸವೇಶ್ವರ ಜಯಂತಿ ಆಚರಣೆ.

ಬೇಕಿನಾಳ ಏ.30

ತಾಳಿಕೋಟೆ ತಾಲೂಕಿನ ಬೇಕಿನಾಳ ಗ್ರಾಮದ ಪ್ರಾಥಮಿಕ ಕೃಷಿ ಪತಿನ ಸಹಕಾರಿ ಸಂಘದಲ್ಲಿ ಶ್ರೀಕಾಯಕ ಯೋಗಿ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಣೆ ಮಾಡಲಾಯಿತು. ಶ್ರೀ ಬಸವೇಶ್ವರ ಭಾವ ಚಿತ್ರಕ್ಕೆ ಪೂಜೆ ಮಹಾ ಮಂಗಳಾರತಿ ಪುಷ್ಪ ಮಾಲೆ ಹಾಕಿ ವಿಶೇಷ ಪೂಜೆ ಮಾಡಿ ಅವರ ಜಿನದ ಬಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಬಸವೇಶ್ವರ ಜೀವನ ಚರಿತ್ರೆ ಅವರ ಬಹಳ ಅಪರೂಪ ದವರು 12 ನೇ. ಶತಮಾನದಲ್ಲಿ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು ತಂದೆ ಮಾದರಸ ತಾಯಿ ಮಾದಲಾಂಬಿಕೆ ಉದರದಿ ಜನಿಸಿದರು. ಅನುಭವ ಮಂಟಪ ಬಸವ ಕಲ್ಯಾಣದ ರೂವಾರಿ ಗಳಾಗಿದ್ದರು. ಕಾಯಕವೇ ಕೈಲಾಸ ವೆಂದು ಸಾರಿದರು ಇವರ ವಚನಗಳು ಬಹಳ ಅತ್ಯದ್ಭುತವಾಗಿದ್ದವು ಕೊನೆಗೆ ಕೂಡಲ ಸಂಗಮದಲ್ಲಿ ಐಕ್ಯರಾದರು. ಪೂಜೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷರಾದ ಬಿ.ಎನ್ ಪಾಟೀಲ್ ಉಪಾಧ್ಯಕ್ಷರಾದ ದಾವಲ್ ಸಾಬ್ ಪೀರಾಪುರ್ ನಿರ್ದೇಶಕರಾದ ಭೀಮಣ್ಣ ಸಜ್ಜನ್ ಶರಣಯ್ಯ ಬೆನಾಳಮಠ್ ಶ್ರೀಶೈಲ್ ಸಂಗಾಪುರ್ ರಮೇಶ್ ಗೌಡ ವಡ್ಡೋಡ್ಗಿ ಶ್ರೀಶೈಲ್ ವಾಲಿಕರ್ ಭಾವಸವಾಲಿಕಾರ್ ಪಿಕೆಪಿಎಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಬಾಬುಗೌಡ ಕರ್ಕಳ್ಳಿ ಮತ್ತು ಸಿಬ್ಬಂದಿ ವರ್ಗದ ವೀರೇಶ್ ದೇಸಾಯಿ ಮಡಿವಾಳಪ್ಪ ಚಟರ್ಕಿ ಸಂಗಪ್ಪ ನಾವಿ ಇತರರು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಪಾಲ್ಗೊಂಡಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೆನಾಳಮಠ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button