ಪಟ್ಟಣದಲ್ಲಿ ಒಳ ಮೀಸಲಾತಿ – ಕ್ರಾಂತಿಕಾರಿ ರಥಯಾತ್ರೆ.
ಮಾನ್ವಿ ಮೇ.06

ರಾಜ್ಯದಲ್ಲಿ ಎಸ್ಸಿ ಜನಾಂಗದಲ್ಲಿರುವ ಜಾತಿವಾರು ಜನ ಗಣತಿ ಸಮೀಕ್ಷೆ ನಡೆಯಲಿದ್ದು. ಮಾನ್ವಿ ಹಾಗೂ ಸಿರವಾರ ತಾಲೂಕಿನ “ಮಾದಿಗ” ಜನಾಂಗದವರು ಸಮೀಕ್ಷೆ ವೇಳೆ ಕ್ರಮ ಸಂಖ್ಯೆ 61 ರಲ್ಲಿ “ಮಾದಿಗ” ಸಮಾಜ ಎಂದು ನಮೂದಿಸ ಬೇಕು ಎಂದು ವಕೀಲ ಪಿ.ರವಿಕುಮಾರ್ ವಕೀಲ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ. ಒಳ ಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯು ಮೇ. 10 ರಂದು ಮಾನ್ವಿಗೆ ಆಗಮಿಸಲಿದ್ದು. ಅದ್ಧೂರಿಯಾಗಿ ಸ್ವಾಗತದ ಜೊತೆಗೆ ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಜನ ಸಮೂಹಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಕೋರಿದರು.
ಮಾದಿಗ ಜಾಗೃತಿ ಯುವ ವೇದಿಕೆಯಿಂದ ಮಾನ್ವಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಮುದಾಯದ ಜನರಿಗೆ ಮಾದಿಗ ಎಂದು ಬರೆಸಬೇಕು ಎಂದು ತಿಳಿಸಲಾಗುತ್ತಿದೆ. ಊರಿನ ಹಿರಿಯರು ಹಾಗೂ ಮುಖಂಡರು ಚಾಚು ತಪ್ಪದೆ ಪ್ರತಿ ಮನೆಗೆ ಸರ್ವೆ ಮಾಡಿಸುವ ಕೆಲಸ ಮಾಡಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ