“ನಿನ್ನ ದುಡಿಮೆಯೇ ನಿನ್ನ ಶೋಭಾ ಯಾತ್ರೆ”…..

ದ್ವೇಷ ಬೀಡು ಪ್ರೀತಿ ಮಾಡು
ಕಿಚ್ಚು ಆರಸಿ ತಂಪು ತಣಿಸು
ಕೇಡು ಬಿಟ್ಟು ಒಳಿತು ಮೆಚ್ಚು
ಅಳು ಮರೆಸು ನಗು ತರುಸು
ಶತ್ರುತ್ವ ಸೋಲಿಸಿ ಮಿತ್ರುತ್ವ ಒಲಿಸು
ಅತೃಪ್ತಿ ಮರೆಸಿ ಸಂತೃಪ್ತಿ ಮೆರಸಿ
ನಯವಂಚಕತನ ದೂರ ಸರಸಿ
ಹಿಚಿಂತಕತನ ಸನಿಹ ಬಳಸಿ
ವಿಲಾಸಿತನ ನಿರ್ಲಕ್ಷಿಸು
ಸೃಷ್ಟಿಯ ಸೌಂದರ್ಯ ಆಸ್ವಾದಿಸು
ಗೌರವಕೊಡದವರ ಏದಿರು
ಒಳ್ಳೆಯತನ ತೋರದಿರು
ಹೆತ್ತವರ ಎದಿರು ಮಾತು ಮೆತ್ತಗಿರಲಿ
ಹೊತ್ತವರ ಜವಾಬ್ದಾರಿ ಅರಿವಿರಲಿ
ಸತ್ಯಕ್ಕೆ ಯಾವುದಾದರೇನು ತಲೆಬಾಗು
ಮಿತ್ಯಕ್ಕೆ ಬೇಲೆ ಕೊಡದಿರು
ನಿನ್ನ ದುಡಿಮೆಯೇ ನಿನ್ನ ಶೋಭಾ ಯಾತ್ರೆ
ಸಂಸಾರ ಚಕ್ರವ್ಯೂಹದಲಿ ನೀನೇ ವೈರಿ
ನೀ ಬೇರೆಯವರ ಗೆಲುವಿಗೆ
ಕಾರಣವಿರಬಹುದು
ನಿನ್ನ ಸೋಲಿಸಲು ಹವಣಿಸುವವರು
ಅನೇಕರು.

– ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ