ಅದ್ದೂರಿಯಾಗಿ ನಡೆದ ರೋಣ ನಗರದ – ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ.

ರೋಣ ಮೇ.08

ಪಟ್ಟಣದ ಆರಾಧ್ಯ ದೇವರಾದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದು ತುಂಬಾ ವಿಜೃಂಭಣೆಯಿಂದ ಜರುಗಿತು. ಜಾತ್ರೆಯು ಸಂಭ್ರಮ ಸಡಗರ ದಿಂದ ಸಂಪ್ರದಾಯ ಬದ್ಧವಾಗಿ ಜರುಗಿತು. ರಥವು ವೀರಭದ್ರೇಶ್ವರನ ದೇವಸ್ಥಾನ ದಿಂದ ಪಾದಗಟ್ಟಿಯ ವರೆಗೂ ತುಂಬಾ ವಿಜೃಂಭಣೆಯಿಂದ ಸಾಗಿತು ಈ ಸಮಯದಲ್ಲಿ ತೇರು ಸಾಗುತ್ತಿರುವಾಗ ವಾದ್ಯ ಮೇಳಗಳ ಶಬ್ದ ಮುಗಿಲು ಮುಟ್ಟಿತ್ತು. ಎಲ್ಲಾ ಜನರು ವೀರಭದ್ರೇಶ್ವರನ ಹೆಸರಿನಲ್ಲಿ ಜೈಕಾರ ಹಾಕುತ್ತ ಉತ್ತತ್ತಿಗಳನ್ನು ಭಕ್ತಿಯಿಂದ ರಥಕ್ಕೆ ಎಸೆಯುತ್ತಿದ್ದರು. ಈ ಬಾರಿ ತುಂಬಾ ಜಾಗರೂಕತೆ ಯಿಂದ ರೋಣ್ ಪೊಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ಊರಿನ ಗಣ್ಯ ಮಾನ್ಯರ ನೇತೃತ್ವದಲ್ಲಿ ಹಾಗೂ ಎಲ್ಲಾ ಸದ್ಭಕ್ತರ ಸಹಕಾರ ದೊಂದಿಗೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು ಈ ಜಾತ್ರಾ ಸಮಯದಲ್ಲಿ ಇನ್ನೊಂದು ಮುಖ್ಯ ವಿಷಯ ವೆಂದರೆ ಕಾಶ್ಮೀರದಲ್ಲಿ ನಡೆದ ದಾಳಿ ಖಂಡಿಸಿ ನರೇದ್ರ ಮೋದಿ ಯವರು ಜಾರಿ ಗೊಳಿಸಿದ ಆಪರೇಷನ್ ಸಿಂಧೂರ ನಾಮ ಫಲಕ ಹಿಡಿದು ಜಯಘೋಷ್ ಹಾಕಿದರು.ಈ ಸಮಯದಲ್ಲಿ ರೋಣ ತಾಲೂಕಿನ ಎಲ್ಲಾ ಗ್ರಾಮದ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು ಹಾಗೂ ಎಲ್ಲರೂ ವೀರಭದ್ರೇಶ್ವರ ಭಕ್ತಿಗೆ ಪಾತ್ರರಾದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button