ಶ್ರೀಶಾರದಾಶ್ರಮದಲ್ಲಿ ವಿನೋದ ದಿಂದ – ವಿವೇಕ ವಿದ್ಯಾರ್ಥಿ ಶಿಬಿರ.
ಚಳ್ಳಕೆರೆ ಮೇ.08

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ “ವಿನೋದದಿಂದ ವಿವೇಕ” ಎಂಬ ವಿಶಿಷ್ಟ ವಿದ್ಯಾರ್ಥಿ ಶಿಬಿರ ನಡೆಯಿತು. ಈ ಶಿಬಿರದ ಭಾಗವಾಗಿ ಶ್ರೀಶಾರದಾಶ್ರಮದ ಸ್ವಯಂ ಸೇವಕರಾದ ಸಂತೋಷ ಕುಮಾರ್ ಮತ್ತು ಯತೀಶ್.ಎಂ ಸಿದ್ದಾಪುರ ಅವರು ಮಕ್ಕಳಿಗೆ ಭಜನೆ, ಮಂತ್ರಗಳ ಪಠಣ, ಪ್ರಯೋಗ ಮತ್ತು ಸೃಜನ ಶೀಲತೆಯನ್ನು ಬೆಳೆಸುವ ವಿವಿಧ ಆಟಗಳನ್ನು ಆಡಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಮತ್ತು ಮಾತಾಜೀ ಜ್ಯೋತ್ಸ್ನಾಮಯೀ ವಹಿಸಿದ್ದರು.

ಈ ಸಂದರ್ಭದಲ್ಲಿ ಬಸವರಾಜ್, ಹೂವಿನ ಲಕ್ಷ್ಮೀದೇವಮ್ಮ, ಮಾಣಿಕ್ಯ ಸತ್ಯನಾರಾಯಣ, ಸತ್ಯಪ್ರಿಯ ಅಶೋಕ್, ಡಾ, ಭೂಮಿಕ, ದೈವಿಕ್, ಹರ್ಷಿತಾ, ಪ್ರತೀಕ್ಷಾ, ಧ್ರುವ ನಾರಾಯಣ, ನಿಖಿಲೇಶ್ ಯಾದವ್, ಯುಕ್ತ, ದವನ್, ವಿವಿಕ್ತ, ವರ್ಷ ಉಪಸ್ಥಿತರಿದ್ದರು.
ವರದಿ:ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.