ಒಳ ಮೀಸಲಾತಿ ಸಮೀಕ್ಷೆಯಲ್ಲಿ – ಮೇಲಾಧಿಕಾರಿಗಳ ನಿರ್ಲಕ್ಷ್ಯ.
ಕೊಟ್ಟೂರು ಮೇ .10

ತಾಲೂಕಿನಲ್ಲಿ ಹಳ್ಳಿಗಳಲ್ಲಿ ಒಳ ಮೀಸಲಾತಿ ಸಮೀಕ್ಷೆಯಲ್ಲಿ ಸರ್ವರ್ ಸ್ಲೋ ಇದ್ದು, ಇಡೀ ದಿನಕ್ಕೆ ಎರಡು ಕುಟುಂಬಗಳು ಮಾತ್ರ ಸರ್ವೇ ಮಾಡಿರುತ್ತಾರೆ. BLO ಗಳು ತೊಂದರೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಲು ಫೋನ್ ಮಾಡಿದರೆ ಅವರು ಸ್ಪಂದಿಸುತ್ತಿಲ್ಲ. ಈ ರೀತಿ ಆದರೆ ಸಮೀಕ್ಷೆಯಿಂದ ಅನೇಕ ಕುಟುಂಬಗಳು ಬಿಟ್ಟು ಹೋಗುವ ಸಾಧ್ಯತೆ ಇರುವುದರಿಂದ ಕೂಡಲೇ ಉನ್ನತ ಅಧಿಕಾರಿಗಳಾದ ಜಿ.ಕೆ ಅಮರೇಶ್ ತಹಶೀಲ್ದಾರರು ಪದ್ಮನಾಮಕರಣಂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸ ಬೇಕು ಮತ್ತು ಪರಿಶಿಷ್ಟ ಜಾತಿ ಕುಟುಂಬಗಳ ಸರ್ವೇಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿದ್ದಲಿಂಗಪ್ಪ.ಎ ಕೆ ಮಾದಿಗ ಸಮಾಜದ ಮುಖಂಡರು ಸಾರ್ವಜನಿಕರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು