ಮಾಡಿ.8 ರಂದು ನೂತನ ಬಸವ ಮಹಾಂತ ಪತ್ತಿನ ಸಂಘದ ಉದ್ಘಾಟನೆ.

ಹುನಗುಂದ ಮಾರ್ಚ್.7

ಬಸವ ಮಹಾಂತ ಪತ್ತಿನ ಸಹಕಾರಿ ಸಂಘ ನಿಯಮಿತ ನೂತನ ಸಹಕಾರಿ ಬ್ಯಾಂಕ್ ಮಾ.8 ರ ಶುಕ್ರವಾರ ಬೆಳಗ್ಗೆ 1೦.3೦ ಗಂಟೆಗೆ ಪಟ್ಟಣದ ವಿಜಯ ಮಹಾಂತೇಶ ಹೈಸ್ಕೊಲ್ ಮಳಗಿಯಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಬಸವ ಮಹಾಂತ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹೂಗಾರ ಹೇಳಿದರು.ಪಟ್ಟಣದ ವಿ.ಮ ಪ್ರೌಢ ಶಾಲೆಯ ಮಳಗಿಯಲ್ಲಿ ಬಸವ ಮಹಾಂತ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಹಾಗೂ ಗಚ್ಚಿನಮಠದ ವೇ.ಮೂ.ಮಹಾಂತಯ್ಯ ಗಚ್ಚಿನಮಠ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಕೊಳ್ಳಲಿದ್ದಾರೆ.ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ನೂತನ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹೂಗಾರ ಅಧ್ಯಕ್ಷತೆಯನ್ನು ವಹಿಸಿ ಕೊಳ್ಳಲಿದ್ದಾರೆ ಎಂದು ತಿಳಿಸಿದರು.ನಿರ್ದೇಶಕ ಜೈನಸಾಬ ಹಗೇದಾಳ ಮಾತನಾಡಿ ನೂತನ ಸಹಕಾರಿ ಸಂಘ 511 ಸದಸ್ಯರನ್ನು ಹೊಂದಿದ್ದು. 11.7 ಲಕ್ಷ ಮೂಲ ಬಂಡವಾಳದೊAದಿಗೆ ಬ್ಯಾಂಕ್ ಕಾರ್ಯಾ ರಂಭವಾಗಲಿದೆ ಎಂದರು.ಈ ಸಂದರ್ಭದಲ್ಲಿ ಬಸವ ಮಹಾಂತ ಪತ್ತಿನ ಸಹಕಾರಿ ಸಂಘ ನಿಯಮಿತದ ಉಪಾಧ್ಯಕ್ಷ ಮೌನೇಶ ಕಮ್ಮಾರ,ನಿರ್ದೇಶಕರಾದ ಮಹಾಂತೇಶ ಪರೂತಿ, ಮಹಾಂತೇಶ ನಾಡಗೌಡ್ರ, ಯಲ್ಲಪ್ಪ ನಡುವಿನಮನಿ, ಗೌಡಪ್ಪ ಗೌಡರ, ಸತೀಶ ಶೆಟ್ಟಿ,ಪೂಜಾ ಹುದ್ದಾರ, ಶಿವಕುಮಾರ ತೋಟಗೇರ,ಸಾವಿತ್ರಮ್ಮ ಗಗ್ಗರಿ,ಮಧು ಪಾಟೀಲ,ಸರಸ್ವತಿ ಕೆಲೂರ, ಲಕ್ಷ್ಮಿ ನಾಡಗೌಡ್ರ ಹಾಗೂ ಸಂಘದ ವ್ಯವಸ್ಥಾಪಕ ಮಣಿಕಂಠ ಕಾಜಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button