ಸ್ವಾಮಿ ಅಖಂಡಾನಂದರ ಸೇವೆಯ ಆದರ್ಶ ಯುವ ಜನಾಂಗಕ್ಕೆ – ಮಾದರಿಯಾಗಲಿ ಡಾ, ಭೂಮಿಕ.
ಚಳ್ಳಕೆರೆ ನ.03

ಶ್ರೀರಾಮಕೃಷ್ಣರ ನೇರ ಸಂನ್ಯಾಸಿ ಶಿಷ್ಯರಾದ ಸ್ವಾಮಿ ಅಖಂಡಾನಂದರ ಸೇವೆಯ ಆದರ್ಶ ಯುವಜನಾಂಗಕ್ಕೆ ಮಾದರಿಯಾಗಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ, ಭೂಮಿಕ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು “ಸೇವೆಯಿಂದ ಸಾರ್ಥಕತೆ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀವೆಂಕಟಲಕ್ಷ್ಮಮ್ಮ ಅವರಿಂದ ಪ್ರಾರ್ಥನೆ, ಯತೀಶ್ ಎಂ ಸಿದ್ದಾಪುರ ಅವರಿಂದ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ ಮತ್ತು ಸಂನ್ಯಾಸಿ ಗೀತೆಯ ಗಾಯನ ನಡೆಯಿತು.
ತರಗತಿಯಲ್ಲಿ ಕವಿತಾ ಗುರುಮೂರ್ತಿ, ಮಂಜುಳ ಉಮೇಶ್, ಜಿ.ಯಶೋಧಾ ಪ್ರಕಾಶ್, ಚೇತನ್,ಋತಿಕ್, ಚಾರ್ಮಿಶ್ರೀ ಲಲಿತಾ, ಸೃಷ್ಟಿ ಕುರುಬರ್, ಜ್ಞಾನೇಶ್ವರಿ,ಮಾನಸ, ಪುಷ್ಪಲತಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

