ಕಮತಗಿಯಲ್ಲಿ ಹೃದಯ ವಿದ್ರಾವಕ ಘಟನೆ ; ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಕಮತಗಿ ಸೇತುವೆಗೆ ಹಾರಿ ಆತ್ಮಹತ್ಯೆ….

ಗಂಡನ ಕುಡಿತಕ್ಕೆ ಬೇಸತ್ತು ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಕಮತಗಿ (ರಾಮತಾಳ) :

ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹುನಗುಂದ ತಾಲೂಕಿನ ಕಮತಗಿ(ರಾಮತಾಳ)ದಲ್ಲಿ ಹರಿಯುವ ಮಲಪ್ರಭಾ  ಸೇತುವೆಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ,ಗಂಡನ ಕುಡಿತದಿಂದ ಬೇಸತ್ತ ಹೆಂಡತಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಯು ಸಾಯಂಕಾಲ ತಡರಾತ್ರಿ ನಡೆದಿದ್ದು , ಈ ಘಟನೆಯನ್ನು  ಕಂಡ ಸ್ಥಳೀಯರು ತಾಯಿ ಮಕ್ಕಳನ್ನು ಉಳಿಸಲು ಪ್ರಯತ್ನ ಪಟ್ಟರಾದರು ಪ್ರಯತ್ನ ಫಲಿಸಲಿಲ್ಲ,ಅಷ್ಟೊತ್ತಿಗಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ತಾಯಿಯ ಹೆಸರು ಉಮಾ( 42), ಮೊದಲನೇ ಮಗಳ ಹೆಸರು ಐಶ್ವರ್ಯ(20 ) ಮತ್ತು  ಕೊನೆಯ ಮಗಳ ಹೆಸರು ಸೌಂದರ್ಯ(18) ಆಗಿದೆ. ಮೊದಲನೇ ಮಗಳು B.E ವಿಧ್ಯಾಭ್ಯಾಸ ಮಾಡುತ್ತಿದ್ದು ,ಎರಡನೇ ಮಗಳು PUC ಓದುತ್ತಿದ್ದರು ಎಂದು ತಿಳಿದು ಬಂದಿದೆ.

 

ತಂದೆ ಸುರೇಶ್ ಮಾಸರೆಡ್ಡಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಚಿತ್ತರಗಿ ಅಲ್ಲಿ ಕೆಲವು ತಿಂಗಳುಗಳಿಂದ ಗೈರು ಹಾಜರಾಗಿದ್ದರು , ಸದ್ಯ ಕಮತಗಿ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲ  ನಿರ್ವಹಿಸುತ್ತಿದ್ದರು  . ಸುರೇಶ್ ಮಾಸರೆಡ್ಡಿ ಇವನಿಗೆ ಎರಡು ಮದುವೆ ಆಗಿದ್ದು ಮೊದಲನೆ ಹೆಂಡತಿ ಇವನ ಕುಡಿತಕ್ಕೆ ಬೇಸತ್ತು ಬರ್ನಿಂಗ್ ಕೇಸ್ ಗೆ ಒಳಪಟ್ಟಿದ್ದರು, ನಂತರ ಎರಡನೇ ಹೆಂಡತಿಯು ಈಗ  ಇವನ ಕುಡಿತದ ಹವ್ಯಾಸದಿಂದ ಬೇಸತ್ತು ಉಮಾ ಮತ್ತು  ತಮ್ಮ  ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಇನ್ನು ಈ ಪ್ರಕರಣ ಅಮೀನಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು , ಬಾಡಿಗಳನ್ನು ಅಮೀನಗಡ ಸರ್ಕಾರಿ ಆಸ್ಪತ್ರೆಗೆ ಪೋಸ್ಟ್ ಮಾರ್ಟಂ ಗಾಗಿ ಕಳುಹಿಸಿಕೊಡಲಾಗಿದೆ.

 

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button