ಜಮ್ಮುವಿನಲ್ಲಿ ಅವಳಿ ಬಾಂಬ್ ಸ್ಪೋಟ, 7 ಮಂದಿಗೆ ಗಂಭೀರ ಗಾಯ…! (ವೀಡಿಯೊಗಳನ್ನು ಒಳಗೊಂಡಿರುತ್ತದೆ)
ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಐಇಡಿ ಬಾಂಬ್ ಬ್ಲಾಸ್ಟ್ ಆಗಿರಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು, ಸ್ಥಳಕ್ಕೆ ಭಾರತೀಯ ಸೇನೆ, ಜಮ್ಮು ವಲಯದ ಎಡಿಜಿಪಿ ಸಹ ಭೇಟಿ ಕೊಟ್ಟಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳ್ಳಂಬೆಳಗ್ಗೆ ಸ್ಫೋಟವುಂಟಾಗಿರುವ ಹಿನ್ನೆಲೆ ಸ್ಥಳೀಯ ಜನರು ಆತಂಕಕ್ಕೊಳಗಾಗಿದ್ದಾರೆ.
ಜಮ್ಮು (ಜನವರಿ 21 ) :
ಜಮ್ಮುವಿನಲ್ಲಿ ಇಂದು 2 ಕಡೆ ಬಾಂಬ್ ಸ್ಫೋಟವಾಗಿರುವ ಘಟನೆ ವರದಿಯಾಗಿದೆ. ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಈ ಸ್ಫೋಟಗಳಾಗಿವೆ ಎಂದು ಜಮ್ಮು ವಲಯದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಮುಖೇಶ್ ಸಿಂಗ್ ಹೇಳಿದ್ದಾರೆ. ಸ್ಫೋಟಗಳಲ್ಲಿ 7 ಜನರಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶದಲ್ಲಿ 30 ನಿಮಿಷಗಳಲ್ಲಿ ಎರಡು ತೀವ್ರತೆಯ ಸ್ಫೋಟಗಳು ಸಂಭವಿಸಿವೆ ಎಂದು ಇಂಟೆಲ್ ಮೂಲಗಳು ತಿಳಿಸಿವೆ.ಬೆಳಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದ ಮೊದಲ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದಾರೆ .ಸುಮಾರು ಅರ್ಧ ಗಂಟೆಯ ನಂತರ ಸಂಭವಿಸಿದ ಎರಡನೇ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮೊದಲ ಸ್ಫೋಟದಲ್ಲಿ ಮಹೇಂದ್ರ ಬೊಲೆರೊ ಬಳಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಸುಹೇಲ್ ಇಕ್ಬಾಲ್ (35), ಸುಶೀಲ್ ಕುಮಾರ್ (26), ವಿಶ್ವ ಪ್ರತಾಪ್ (25), ವಿನೋದ್ ಕುಮಾರ್ (52), ಅರುಣ್ ಕುಮಾರ್, ಅಮಿತ್ ಕುಮಾರ್ (40) ಮತ್ತು ರಾಜೇಶ್ ಕುಮಾರ್ (35) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, IED ಸ್ಫೋಟಗಳು ಉಧಮ್ಪುರ ಸ್ಫೋಟದಂತೆಯೇ ಇದ್ದವು ಮತ್ತು ಕಾರ್ಯಾಚರಣಾ ಕಾರ್ಯವು ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದಂತೆಯೇ ತೋರುತ್ತದೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ತಪ್ಪಿತಸ್ಥರನ್ನು ಗುರುತಿಸಲು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಲು ತುರ್ತು ಕ್ರಮಗಳನ್ನು ಕೋರಿದ್ದಾರೆ.
“ಇಂತಹ ಹತಾಶ ಕೃತ್ಯಗಳು ಹೊಣೆಗಾರರ ಹತಾಶೆ ಮತ್ತು ಹೇಡಿತನವನ್ನು ಎತ್ತಿ ತೋರಿಸುತ್ತವೆ. ತಕ್ಷಣ ಮತ್ತು ದೃಢವಾದ ಕ್ರಮ ತೆಗೆದುಕೊಳ್ಳಿ. ಅಪರಾಧಿಗಳನ್ನು ನ್ಯಾಯಕ್ಕೆ ತರಲು ಯಾವುದೇ ಪ್ರಯತ್ನಗಳನ್ನು ಬಿಡಬಾರದು” ಎಂದು ಲೆಫ್ಟಿನೆಂಟ್ ಗವರ್ನರ್ ಭದ್ರತಾ ಅಧಿಕಾರಿಗಳಿಗೆ ಹೇಳಿದರು.
ಘಟನೆಯಲ್ಲಿ ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರವನ್ನು ಲೆಫ್ಟಿನೆಂಟ್ ಗವರ್ನರ್ ಘೋಷಿಸಿದ್ದಾರೆ.
ಬಾಂಬ್ ಸ್ಕ್ವಾಡ್ ಹಾಗೂ ಫೋರೆನ್ಸಿಟ್ ತಂಡಗಳು ಸಹ ನರ್ವಾಲ್ ಪ್ರದೇಶಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು, 2 ಸ್ಫೋಟಗಳು ನಡೆದಿರುವ ಬೆನ್ನಲ್ಲೇ ಸಂಪೂರ್ಣ ಪ್ರದೇಶವನ್ನು ರಕ್ಷಣಾ ಪಡೆಗಳಿಂದ ಸುತ್ತುವರಿಯಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ IED ಬಾಂಬ್ ಬ್ಲಾಸ್ಟ್ ಆಗಿರಬಹುದು ಎಂದು ಬಲ್ಲ ಮೂಲಗಳಿಂದ ಸದ್ಯ ಮಾಹಿತಿ ದೊರೆತಿದೆ. ಇನ್ನು, ಸ್ಥಳಕ್ಕೆ ಭಾರತೀಯ ಸೇನೆ, ಜಮ್ಮು ವಲಯದ ADGP ಸಹ ಭೇಟಿ ಕೊಟ್ಟಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಬೆನ್ನಲ್ಲೇ ಈ ಸ್ಫೋಟಗಳು ಉಂಟಾಗಿರುವುದು ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಬಗ್ಗೆ ಆತಂಕ ಉಂಟಾಗುತ್ತದೆ. ಇಂದು ಬೆಳಗ್ಗೆ 2 ಸ್ಫೋಟಗಳು ಉಂಟಾಗಿರುವ ಬೆನ್ನಲ್ಲೇ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ, ಹಾಗೂ ಜಮ್ಮು ಕಾಶ್ಮೀರಕ್ಕೆ ಬರುವ ಎಲ್ಲಾ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.
ಬೆಳ್ಳಂಬೆಳಗ್ಗೆ ಸ್ಫೋಟವುಂಟಾಗಿರುವ ಹಿನ್ನೆಲೆ ಸ್ಥಳೀಯ ಜನರು ಆತಂಕಕ್ಕೊಳಗಾಗಿದ್ದಾರೆ.
ಪೂಂಚ್ನಲ್ಲಿ ಮಾಜಿ ಶಾಸಕರ ಮನೆಯಲ್ಲಿ ಬಾಂಬ್ ಸ್ಪೋಟ :
ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ಮಾಜಿ ಶಾಸಕರೊಬ್ಬರ ಮನೆಯಲ್ಲಿಯೂ ಸಹ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಲಸ್ಸಾನ ಗ್ರಾಮದಲ್ಲಿರುವ ಅವರ ಮನೆಯ ಹಲವು ಕೊಠಡಿಗಳ ಸೀಲಿಂಗ್ ಛಿದ್ರ ಛಿದ್ರಗೊಂಡಿದ್ದು, ಆದರೂ ಅವರ ಕುಟುಂಬ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ಸುರನ್ಕೋಟೆ ಮಾಜಿ ಶಾಸಕ ಮತ್ತು ಪ್ರಮುಖ ಗುಜ್ಜರ್ ನಾಯಕ ಚೌಧರಿ ಮೊಹಮ್ಮದ್ ಅಕ್ರಮ್ ಮಾಧ್ಯಮದ ಮುಂದೆ ಹೇಳಿದ್ದಾರೆ.
‘ಘಟನೆ ನಡೆದ ಸಂದರ್ಭದಲ್ಲಿ ನಾನು ಮನೆಯಲ್ಲಿ ಇರಲಿಲ್ಲ. ಆದರೆ, ಶಕ್ತಿಯುತವಾದ ಸ್ಫೋಟ ಸಂಭವಿಸಿದ್ದು, ನಂತರ ಕೆಲವು ಗುಂಡುಗಳು ಹಾರಿದವು ಎಂದು ನನಗೆ ತಿಳಿಯಿತು. ಘಟನೆ ನಡೆದ ತಕ್ಷಣ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ನನ್ನ ಮನೆಗೆ ಭೇಟಿ ನೀಡಿದ್ದು, ಅವರು ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ‘ ಎಂದು ನೊಂದ ಶಾಸಕರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
“ಮಾಜಿ ಶಾಸಕರ ಮನೆಯ ಬಳಿ ಸ್ಫೋಟ ಸಂಭವಿಸಿದ ಬಗ್ಗೆ ನಮಗೆ ತಿಳಿದುಬಂದಿತು ಮತ್ತು ತಕ್ಷಣ ಸ್ಥಳಕ್ಕೆ ಧಾವಿಸಿದ್ದೇವೆ. ಹ್ಯಾಲೊಜೆನ್ ಲೈಟ್ ಹಾಳಾಗಿರುವುದು ಕಂಡುಬಂದಿದೆ ಮತ್ತು 12 ಬೋರ್ ಗನ್ನ ಖಾಲಿ ಕಾಟ್ರಿಡ್ಜ್ಗಳು ಸ್ಥಳದಲ್ಲಿ ಕಂಡುಬಂದಿವೆ”, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದರು.