ವಿಷಜಂತುಗಳ ನಡುವೆ ಅಪಾಯಕಾರಿ ಜೀವನ ನಡೆಸುತ್ತಿರುವ ದಲಿತ ಕುಟುಂಬಗಳು :- ಲೋಕೇಶ್ ತಾಳಿಕಟ್ಟಿ…!
ಚಿಕ್ಕಮಗಳೂರು (ಫೆ.12) :
ತರೀಕೆರೆ ಪಟ್ಟಣದ ಡಾ ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ದಲಿತ ಕುಟುಂಬಗಳು ನಗರದ ಕೊಳಚೆ ನೀರು ಸಂಗ್ರಹ ಆಗುವ ದೊಡ್ಡಕೆರೆ ಬಳಿ ಇದೆ. ಅತ್ತಿರದ ನೀರಿನಿಂದ ವಿಷಜಂತುಗಳ ಜೊತೆಗೆ ಕೆಟ್ಟ ವಾಸನೆ ಹಾಗೂ ಅಪಾಯಕಾರಿ ರೋಗಗಳ ಬೆಳವಣಿಗೆಯ ಕೂಪದಲ್ಲಿ ವಾಸವಾಗಿದ್ದು ಮಳೆಗಾಲದಲ್ಲಿ ಕಳೆದ ಬಾರಿ ಅತಿವೃಷ್ಟಿಯಾದ ಸಂದರ್ಭದಲ್ಲಿ. ದಲಿತರ ವೇದನೆಯನ್ನು ಕೇಳುವವರಿಲ್ಲ.
ಇಲ್ಲಿ ವಾಸವಾಗಿರುವ ಜಾಗದಲ್ಲಿ ನೆಪಕ್ಕೆ ಶಾಲೆ ಇದ್ದು 2 ಕೊಠಡಿಗಳಿವೆ ಆದರೆ ಯಾವುದೇ ಕಲಿಕಾ ಸಾಮಗ್ರಿಗಳಿಲ್ಲ,1 ರಿಂದ 5ನೇ ತರಗತಿಗಳಿದ್ದು ಇಬ್ಬರೆ ಶಿಕ್ಷಕರಿದ್ದಾರೆ. ಇಲ್ಲಿ ಚರಂಡಿಗಳಿಲ್ಲ.ರಸ್ತೆಗಳಿಲ್ಲ, ಕೆರೆ ಯಿಂದ ರಕ್ಷಣಾ ಗೋಡೆಯಿಲ್ಲ, ಸಾರ್ವಜನಿಕ ಶೌಚಾಲಯಗಳಿದ್ದು ಅವುಗಳು ಉಪಯೋಗಿಸುವ ಸ್ಥಿತಿಯಲಿಲ್ಲ. ಅಲ್ಲಿ ವಾಸವಾಗಿರುವ ನಾಗರೀಕರಿಗೆ ಸಂಧ್ಯಾ ಸುರಕ್ಷ, ವಿಧವೆಯರ ವೇತನ, ಇನ್ನಿತರ ಸರ್ಕಾರಿ ಸೌಲಭ್ಯಗಳಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ.
ದಲಿತರಿಗೆ ಇಲ್ಲಿ ನಿವೇಶನ,ಹಾಗೂ ಹಕ್ಕು ಪತ್ರಗಳನ್ನು ಇನ್ನು ವಿತರಿಸಿಲ್ಲ. ಒಂದು ಚಿಕ್ಕ ಕೊಠಡಿನಲ್ಲಿ ಮೂರರಿಂದ ಐದು ಕುಟುಂಬಗಳು ಒಟ್ಟಿಗೆ ವಾಸವಾಗಿರುವಂತಹ ನೋವಿನ ಪರಿಸ್ಥಿತಿನಲ್ಲಿ ಜನರಿದ್ದಾರೆ. ಈ ನಾಗರೀಕರ ಗೋಳನ್ನು ಕೇಳುವಂತಹ ತರೀಕೆರೆ ನಗರದ ಪುರಸಭೆ ಆಗಲಿ ಅಥವಾ ಶಾಸಕರಾಗಲೀ ಹಾಗೂ ತಾಲ್ಲೂಕು ಆಡಳಿತ ಪ್ರಯತ್ನಿಸದೆ ಇರುವುದು, ಇವರನ್ನು ಅನಾಥರನ್ನಾಗಿಸಿದೆ. ತಕ್ಷಣಕ್ಕೆ ಈ ಕುರಿತು ಕ್ರಮ ಜರುಗಿಸದೆ ಇದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.