ಬಿ. ಟಿ.ಗುದ್ದಿ: ರೈತ ಬೆಳೆದ ಈರುಳ್ಳಿಗೆ ಬೆಲೆ ಕೊಡದ ಸರ್ಕಾರ-ರೈತರ ಆಕ್ರೋಶ

ವಿಜಯನಗರ ಮಾರ್ಚ್:26
ವಿಜಯನಗರ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಹೋಬಳಿಯ, ಬಯಲು ತುಂಬ್ರಗುದ್ದಿ ಗ್ರಾಮದಲ್ಲಿ. ಕೆ.ಹಾಲೇಶ ಎಂಬ ಯುವ ರೈತನು ತನ್ನ 2 ಎಕರೆ ಹೊಲದಲ್ಲಿ, ಬೆಳೆದು ನಿಂತ ಈರುಳ್ಳಿ ಬೆಳೆಯನ್ನು.

ತಾನೇ ತನ್ನ ಟ್ರಾಕ್ಟರ್ ಮೂಲಕ ಹಾಗೇನೆ ನಾಶ ಮಾಡೋ ಮೂಲಕ, ಸರ್ಕಾರದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ. ರೈತ ಹಾಲೇಶ ಮಾತನಾಡಿ, 2ಎಕರೆ ಹೊಲಕ್ಕೆ ಕನಿಷ್ಠ 2ಲಕ್ಷ ರೂ ಕರ್ಚು ಮಾಡಿದ್ದು. ಕೂಲಿ ಆಳಿನ ಹಣ ಬಾರದ್ದಾಗಿದೆ ಎಲ್ಲ‍ಾ ಲುಕ್ಷಾನಾಗಿದ್ದು, ಇದು ಕೇವಲ ನನ್ನ ಗೋಳೊಂದೇ ಅಲ್ಲ.

ನಾಡಿನ ಬಹುತೇಕ ಕಡೆಗಳಲ್ಲಿನ ಈರುಳ್ಳಿ ಬೆಳೆದ ರೈತರ ಗೋಳಾಗಿದ್ದು, ರೈತರು ಈರುಳ್ಳಿ ಬೆಳೆದು ಸಾಲದ ಶೂಲಕ್ಕೆ ತುತ್ತಾಗುತ್ತಿದ್ದಾರೆ. ರೈತರ ಕುಟುಂಗಳು ಸಾಲಗಾರರ ಉಪಟಳಕ್ಕೆ ನೊಂದು ನಲುಗುತ್ತಿವೆ. ರೈತರ ಕಟುಂಬಗಳು ಬೀದಿಗೆ ಬರುವ ದುಸ್ಥಿತಿ ಉಂಟಾಗಿದೆ.

ಆದ್ರೂ ರೈತರ ಗೋಳು ಯಾರೂ ಕೇಳುತ್ತಿಲ್ಲ, ಶಾಸಕರು ಸಚಿವರು ರೈತರ ಅಳಲು ಆಲಿಸುತ್ತಿಲ್ಲ. ರೈತರು ಎಷ್ಟು ಬೊಬ್ಬೆ ಹೊಡೆದರೂ, ಸರ್ಕಾರಗಳು ಮಾತ್ರ ಕಣ್ಣು ಮಚ್ಚಿಕೊಂಡಿವೆ ಎಂದು ಹಾಲೇಶ ದೂರಿದರು. ಇದು ಕೇವಲ ಈರುಳ್ಳಿ ಬೆಳೆಗಾರರ ಕೂಗಲ್ಲ, ನಾಡಿನ ಸಮಸ್ಥ ರೈತರ ಕೂಗಾಗಿದೆ ಎಂದು ಅವರು ತಿಳಿಸಿದರು. ನಾಡಿನ ರೈತರು ಬೆಳೆದ ಯಾವ ಬೆಳೆಗಳಿಗೂ, ರಾಜ್ಯ ಹ‍‍ಾಗೂ ಕೇಂದ್ರ ಸರ್ಕಾರಗಳು, ಯಾವತ್ತೂ ಯೋಗ್ಯ ಬೆಂಬಲ ಬೆಲೆ ನೀಡಿಲ್ಲ.

ಇದರಿಂದಾಗಿ ರೈತರು ಸಾಲಭಾಧೆಗೆ ತುತ್ತಾಗುತ್ತಿದ್ದಾರೆ ಎಂಬ ಕಾರಣಕ್ಕೆ. ತನ್ನ ಹೊಲದಲ್ಲಿ ಬೆಳೆದು ನಿಂತ ಈರುಳ್ಳಿ ಬೆಳೆಯನ್ನು, ತಾನು ಹಾಗೇನೆ ನಾಶ ಮಾಡೋ ಮೂಲಕ ಸರ್ಕಾರದ ವಿರುದ್ಧ ತನ್ನ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಹಾಲೇಶ ತಿಳಿಸಿದರು. ರೈತ ಮುಖಂಡ ಕಕ್ಕುಪ್ಪಿ ಬಸಚರಾಜ ಹಾಗೂ ದಲಿತ ಮುಖಂಡರಾದ ಚಂದ್ರು ಸೇರಿದಂತೆ ಗ್ರಾಮದ ರೈತರು,ಮತ್ತಿತರರು ಇದ್ದರು

ಜಿಲ್ಲಾ ವರದಿಗಾರರು: ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button