ಸಮವಸ್ತ್ರ ಶಿಸ್ತು.ಸ್ವಚ್ಛತೆಯ ಅರಿವು – ಯಶವಂತರಾಯಗೌಡ ಪಾಟೀಲ.
ಇಂಡಿ ಜೂನ್.2

ಸಮವಸ್ತ್ರ ವಿತರಣೆ ಮೂಲಕ ಬಿಸಿಯೂಟ ಸಿಬ್ಬಂದಿಯಲ್ಲಿ ಶಿಸ್ತು ಮತ್ತು ಸ್ವಚ್ಛತೆಯ ಅರಿವು ಮೂಡಿಸುವದು ಒಂದೆಡೆಯಾದರೆ ಸ್ವ ಸಹಾಯ ಗುಂಪುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಎನ್ಆರ್ಎಲ್ಎಂ ಸಹಯೋಗದಲ್ಲಿ ಬಿಸಿಯೂಟ ಸಿಬ್ಬಂದಿಗೆ ಸಮವಸ್ತ್ರವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಲೂಕಿನ 750 ಬಿಸಿಯೂಟ ಸಿಬ್ಬಂದಿಗೆ 2 ಏಫ್ರಾನ್, 2 ಶರ್ಟ ಹಾಗೂ 2 ಟೋಪಿ ನೀಡಲಾಗುವದು.ಕಳೆದ ಹತ್ತು ವರ್ಷಗಳಿಂದ ಈ ರೀತಿ ವ್ಯವಸ್ಥೆ ಇರಲಿಲ್ಲ. ಇದೇ ಮೊದಲ ಬಾರಿಗೆ ನೀಡಲಾಗುತ್ತಿದೆ ಎಂದರು. ಈ ಸಮವಸ್ರ್ತಊಟ ಬಡಿಸುವಾಗ ಧರಿಸುವದು ಕಡ್ಡಾಯವಾಗಿದೆ ಎಂದರು. ಸಮವಸ್ತ್ರ ತಯಾರಿಕೆ ಜವಾಬ್ದಾರಿಯನ್ನು ಸ್ವ ಸಹಾಯ ಗುಂಪುಗಳಿಗೆ ನೀಡಿರುವದು ವಿಶೇಷ ಎಂದರು.ತಾ.ಪಂ ಇಒ ಸುನೀಲ ಮದ್ದೀನ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಎನ್ಆರ್ಎಲ್ಎಂ ಅಧಿಕಾರಿ ಸಿ.ಬಿ.ದೇವರಮನಿ,ಬಿಸಿಯೂಟ ಅಧಿಕಾರಿ ಎಂ.ಎಚ್,ಯರಗುದ್ರಿ , ಬಸವರಾಜ ಗೋರನಾಳ ಮತ್ತಿತರಿದ್ದರು.