ಓದುವ ವಿದ್ಯಾರ್ಥಿನಿಯರಿಗೆ ಸ್ಪೂರ್ತಿಯಾದ – ಎನ್.ನವ್ಯ
ಮೋಕ್ಷಗುಂಡಮ್ ಮೇ.05

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮೋಕ್ಷ ಗೊಂಡಮ್ ವಿಶ್ವೇಶ್ವರಯ್ಯ ವಿದ್ಯಾ ಮಂದಿರದ ವಿದ್ಯಾರ್ಥಿನಿ ನವ್ಯ.ಎನ್ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 588 ಅಂಕಗಳನ್ನು ಪಡೆದು ಶೇ. 94 ರಷ್ಟು ಫಲಿತಾಂಶ ಪಡೆದಿದ್ದಾಳೆ. ಕನ್ನಡ 123, ಇಂಗ್ಲಿಷ್ 99, ಹಿಂದಿ 98, ಗಣಿತ 82, ವಿಜ್ಞಾನ 92, ಸಮಾಜ ವಿಜ್ಞಾನದಲ್ಲಿ 94 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ. ನವ್ಯ.ಎನ್ ಇಲ್ಲಿನ ತೇರುಮಲ್ಲೇಶ್ವರ ದೇವ ಸ್ಥಾನ ಹತ್ತಿರದ ನಿವಾಸಿಗಳಾದ ಬಿ.ನಾಗರಾಜ್ ಮತ್ತು ಕೆ.ಸರಸ್ವತಿ ಇವರ ಪುತ್ರಿ, ಮೋಕ್ಷಗುಂಡಮ್ ವಿದ್ಯಾ ಮಂದಿರದ ಟಾಪ್ 3 ನಲ್ಲಿ ನವ್ಯ ಒಬ್ಬಳಾಗಿದ್ದಾಳೆ. ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಪೋಷಕರು ಸ್ನೇಹಿತರು, ಹಿತೈಷಿಗಳು ಅಭಿನಂದಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದೇ ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ದ ಅಭಿಲಾಷೆ ಆಗಿದೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್ ಶಿವಮೂರ್ತಿ. ಕೋಡಿಹಳ್ಳಿ.ಚಿತ್ರದುರ್ಗ