ಮಾನ್ವಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಪಿ.ಯು.ಸಿ ಬಾಲಕರ – ವಸತಿ ನಿಲಯದ ದುಸ್ಥಿತಿ ಇದು.

ಮಾನ್ವಿ ಮಾ.04

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ಬಾಳಿಗೆ ಬೆಳಗಾಗ ಬೇಕಾದ ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ ಹಾಗೂ ವಾರ್ಡನ್ ಹುಸೇನ್ ಬಾಡ್ಗೆಗೇರ್ ಸೌಲಭ್ಯ ನೀಡದೆ ಇರುವುದರಿಂದ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಬೀದಿಗೆ ಬಂದಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರ ಪಿ.ಯು.ಸಿ ಬಾಲಕರ ವಸತಿ ನಿಲಯದಲ್ಲಿ ಕಡಿಮೆ ಸಂಖ್ಯೆ ಇದ್ದರು ಸಹ ತಾಲೂಕ ಅಧಿಕಾರಿ ನಟರಾಜ ವಾರ್ಡನ್ ಹುಸೇನ್ ಬಡಿಗೇರ್ ಶಾಮೀಲಾಗಿ ಬಯೋಮೆಟ್ರಿಕ್ ಇಲ್ಲದೆ ಸರಕಾರಕ್ಕೆ ಜಾಸ್ತಿ ಸಂಖ್ಯೆ ತೋರಿಸಿ ಕೋಟಿ ಗಟ್ಟಲೆ ಹಣ ಲೂಟಿ ಮಾಡುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ ಸಾಹೇಬ್ರೆ ಬಡಪಾಯಿ ಶೋಷಿತ ವಿದ್ಯಾರ್ಥಿಗಳು ಸೌಲಭ್ಯಗಳಿಲ್ಲದೆ ಜೀವನ ಕಳೆಯುತ್ತಿದ್ದಾರೆ ಅಂದ ಮೇಲೆ ಮಾನ್ವಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜನನ್ನು ವಿಧಾನ ಸಭೆಯ ಮೂರನೆ ಮಹಡಿಯಲ್ಲಿ ಸನ್ಮಾನಿಸುವಿರಾ ಅಥವಾ ಮನೆಯಲ್ಲಿ ಕೂರುವಂತೆ ಮಾಡುವಿರಾ….?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ಹೆಸರಲ್ಲಿ ನಟರಾಜ ಲೂಟಿ ಮಾಡುತ್ತಿದ್ದಾರೆ ಅಂದ ವಿದ್ಯಾರ್ಥಿಗಳು ಹೆಸರಲ್ಲಿ ಎಷ್ಟು ಕೋಟಿ ಲೂಟಿ ಮಾಡಿದ್ದಾರೆಂದು ಉನ್ನತ ಮಟ್ಟದ ತನಿಖೆಯಿಂದ ಬಯಲಾಗೋದು ಸತ್ಯ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button