ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ – ಭಕ್ತರಿಂದ ಬಾಕಿ ಬುತ್ತಿ ಮೆರವಣಿಗೆ.

ಇಳಕಲ್ಲ ಮಾ.17

ಉತ್ತರ ಕರ್ನಾಟಕದ ಬರಗಾಲ ಬಂಟ ಶ್ರೀ ಶರಣ ಬಸವೇಶ್ವರ ಅಜ್ಜನ ಜಾತ್ರಾ ಮಹೋತ್ಸವ ಮಾ.19 ರಂದು ರಥೋತ್ಸವ. ಇಳಕಲ್ ನಗರದ ಜೆ.ಸಿ ಶಾಲೆಯ ಹತ್ತಿರ ಇರುವ ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ರಾಚಯ್ಯ ಶಾಸ್ತ್ರಿ ಗುರುಮಠಕಲ್ ಅವರಿಂದ 11 ದಿನಗಳ ಕಾಲ ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ. ಮಾ. 17 ರಂದು ಭಕ್ತಾದಿಗಳು ಮನೆ ಯಿಂದ ವಿವಿಧ ತರಹದ ಖಾದ್ಯಗಳ ಬಾಕಿ ಬುತ್ತಿ ಮಾಡಿ ಕೊಂಡು ಇಳಕಲ್ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ಬಾಕಿ ಬುತ್ತಿ ಸಮರ್ಪಸಿದರು. ವಿಶೇಷವಾಗಿ ಮಹಿಳೆಯರುಇತಿಹಾಸ ಪ್ರಸಿದ್ಧ ಇಳಕಲ್ ಸೀರೆ ಧರಿಸಿ ತಲೆಯ ಮೇಲೆ ಬುತ್ತಿ ಹೊತ್ತು ಕೊಂಡ ದೃಶ್ಯ ನೋಡುಗರ ಕಣ್ಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಶ್ರೀ ಶರಣ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರು,ಉಪಾಧ್ಯಕ್ಷ ರು ಸರ್ವ ಸದಸ್ಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button