ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು 5 ದಿನ ಕಳೆದರು ಕೂಡ ಬಂಧಿಸಿದ ಕಾರಣ – ತಾಲೂಕ ಡಿ.ಎಸ್.ಎಸ್ ಸಮಿತಿಯಿಂದ ಪೊಲೀಸ್ ಇಲಾಖೆ ಮುಂದೆ ಸತ್ಯಾಗ್ರಹ.

ರೋಣ ಮೇ.19

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ದಲಿತ ವಿವಾಹತಿ ಅಕ್ಷತಾ ಹುನಸಿಮರದ 4. ವರ್ಷದ ಇಂದೇ ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಮಂಜುನಾಥ್ ಈರಪ್ಪ ಕಟಗಿ ಎಂಬ ಯುವಕನ ಜೊತೆ ಇವರಿಬ್ಬರು ಮನ:ಸತ್ಪೂರ್ವಕವಾಗಿ ಪ್ರೀತಿಸಿ ಅಂತರ್ ಜಾತಿ ವಿವಾಹ ಆಗಿರುತ್ತಾರೆ ಪ್ರೀತಿಸಿ ಮದುವೆ ಆದ ದಲಿತ ಸಮುದಾಯದ ಅಕ್ಷತಾ ಮತ್ತು ಮೇಲ್ಜಾತಿಯ ಸಮುದಾಯದ ಮಂಜುನಾಥ ಇವರು 2 ಹೆಣ್ಣು ಮಕ್ಕಳೊಂದಿಗೆ ಅನ್ನೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ ಅಕ್ಷತಾಳ ಗಂಡ ಟ್ರ್ಯಾಕ್ಟರ್ ಡ್ರೈವರ್ ನಾಗಿ ಜೀವನ ಸಾಗಿಸುತ್ತಿರುತ್ತಾನೆ.ಅಂತರ್ ಜಾತಿ ವಿವಾಹ ಆಗಿದ್ದಕ್ಕೆ ಗಾಣಿಗ ಸಮುದಾಯದ ಮಂಜುನಾಥನ ಸಮುದಾಯದವರು ದಿನಾಂಕ 14/05/2025 ಬುಧವಾರ ರಂದು ಚಿಕ್ಕಮನ್ನೂರು ಗ್ರಾಮದಲ್ಲಿ ಇರುವ ರಾಜುಗೌಡ ಪಾಟೀಲ್ ಪೆಟ್ರೋಲ್ ಪಂಪ್ ಗೆ ಮಧ್ಯಾಹ್ನ 12.30 ಸುಮಾರಿಗೆ ರಾಜುಗೌಡ ಪಾಟೀಲ್.ತಿಪ್ಪನಗೌಡ ಹುಲ್ಲೂರು.ವೀರನಗೌಡ ಬಂಗ್ಲಿ. ಪುಲಿಕೇಶಗೌಡ ಬಂಗ್ಲಿ. ಗೌಡಪ್ಪಗೌಡ ಪಾಟೀಲ. ಕೃಷ್ಣಾನಗೌಡ.ರಾಮನಗೌಡ ಪಾಟೀಲ್. ಮಲ್ಲಪ್ಪ ಟಕೆದ ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಇವರೆಲ್ಲರೂ ಕೂಡಿ ಕೊಂಡು ದಲಿತ ಸಮುದಾಯಕ್ಕೆ ಸೇರಿದ ಅಕ್ಷತಾಳನ್ನು ಮದುವೆ ಆದಕಾರಣ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದಣೆ ಮಾಡುವುದರೊಂದಿಗೆ ಅಕ್ಷತಾಳ ಗಂಡನಾಡ ಮಂಜುನಾಥ. ಕಟಗಿ ಮತ್ತು ಅಕ್ಷತನ ಅಣ್ಣನಾದ ಮಂಜುನಾಥ ಹುನಸಿಮರದ ಹಾಗೂ ಅನ್ವರಸಾಬ ಈ ನಾಲ್ಕು ಜನರನ್ನು ಪೆಟ್ರೋಲ್ ಪಂಪಿನಲ್ಲಿ ಮನ ಬಂದಂತೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.ಅಂತರ್ ಜಾತಿ ಮದುವೆ ಆಗಿದ್ದಕ್ಕೆ ದ್ವೇಷದಿಂದ ದಲಿತ ಕುಟುಂಬದ ಮೇಲೆ ಮಾರಣಾಂತಿಕಾ ಹಲ್ಲೆ ಮಾಡಿರುವ ಎಂಟು ಜನ ವಿರುದ್ಧ ದಿನಾಂಕ್ 14/05/2025 ಬುಧವಾರ ರಂದು ರೋಣ ಪೊಲೀಸ್ ಠಾಣಾದಲ್ಲಿ ಎಸ್ಸಿ/ಎಸ್ಟಿ ಪ್ರಕರಣ ದಾಖಲಾಗಿದ್ದು. ಸುಮಾರು 5. ದಿನ ಗತಿಸುತ್ತಾ ಬಂದರು. ಕೂಡ 8. ಜನ ಆರೋಪಿ ಪೈಕಿ 4. ಜನ ಮಾತ್ರ ಬಂಧಿಸಲು ಮಾತ್ರ ರೋಣ ಪೊಲೀಸ್ ಇಲಾಖೆಯವರು ಯಶಶ್ವಿ ಯಾಗಿದ್ದಾರೆ. ಇನ್ನೂಳಿದ ಆರೋಪಿಗಳನ್ನು ಬಂಧಿಸಿದೆ ಇರುವ ಕಾರಣ ದಿನಾಂಕ್ 18/05/2025 ಭಾನುವಾರ ರಂದು ಇನ್ನೂಳಿದ ಆರೋಪಿಗಳನ್ನು ಬಂಧಿಸಿದೆ ಇರುವದರಿಂದ ರೋಣ ದಲಿತ ಮುಖಂಡರು ಪೊಲೀಸ್ ಇಲಾಖೆ ಮುಂಭಾಗ ಧರಣಿ ಸತ್ಯಾಗ್ರಹ ಮಾಡಲು ಮುಂದಾದ ವಿವಿಧ ದಲಿತ ಸಂಘಟನೆಯ ಮುಖಂಡರು ಮತ್ತು ಯುವಕರು.ಪ್ರತಿಭಟನೆ ವೇಳೆ ನಿಂಗಪ್ಪ ಮಾದರ ಮಾತನಾಡಿ ಅಂತರ್ ಜಾತಿ ಮದುವೆಯಾದ ಅಮಾಯಕ ಬಡ ದಲಿತ ಮಹಿಳೆ ಮತ್ತು ಅವಳ ಕುಟುಂಬದ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಇನ್ನುಳಿದ 4. ಜನ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕೆಂದು ಆಗ್ರಹಿಸಿದರು. ಬಳಿಕ ಮಾತನಾಡಿದ ರೋಣ ಠಾಣಾ ಸಿಪಿಐ ಎಸ್.ಎಸ್ ಬೀಳಗಿ ಮಾತನಾಡಿ ನಮ್ಮ ಇಲಾಖೆ ಸಿಬ್ಬಂದಿ 5. ದಿನಗಳ ಕಾಲ ಆರೋಪಿತರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಾಯಿದೆ 8. ಜನ ಆರೋಪಿ ಪೈಕಿ 4. ಜನ ಆರೋಪಿಗಳನ್ನ ಬಂಧಿಸಲಾಗಿದೆ ಇನ್ನೂಳಿದ ಆರೋಪಿಗಳನ್ನು ಬಂಧಿಸಲು ಮಂಗಳವಾರದ ವರೆಗೆ ಸಮಯ ಕಲ್ಪಿಸಿ ಕೊಡಿ ಎಂದು ಧರಣಿ ಸತ್ಯಾಗ್ರಹವನ್ನು ಇಲ್ಲಿಗೆ ನಿಲ್ಲಿಸಿ ಎಂದು ಹೇಳಿದರು. ನಂತರ ಮಾತನಾಡಿದ ಮುಖಂಡರು ಅಂತರ್ ಜಾತಿ ಮದುವೆಯಾದ ಮಹಿಳೆ ಕುಟುಂಬದ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ಮಾಡಿದ ಆರೋಪಿಗಳನ್ನು ಮಂಗಳವಾರದ ಒಳಗಡೆ ಬಂಧಿಸಬೇಕು ಒಂದು ವೇಳೆ ಮಂಗಳವಾರದ ಒಳಗಡೆ ಬಂಧಿಸಿದೆ ಇದ್ದಲ್ಲಿ ಮುಂಬರುವ ದಿನದಲ್ಲಿ ಪೊಲೀಸ್ ಇಲಾಖೆ ವಿರುದ್ಧ ವಿವಿಧ ದಲಿತ ಪರ ಸಂಘಟನೆ ವತಿಯಿಂದ ತಾಲೂಕಿನಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳಲಾಗುವದು ಎಂದು ಎಚ್ಚರಿಕೆ ಕೊಡುವುದರ ಮೂಲಕ ಹಾಕ್ಕೋತ್ತಾಯ ಪತ್ರ ಸಲ್ಲಿಸಿದರು. ಎಸ್ ಪ್ರಿಯ ವೀಕ್ಷಕರೇ ದಲಿತ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಇನ್ನೂಳಿದ ಆರೋಪಿಗಳನ್ನು ಬಂಧಿಸಲು ಮಂಗಳವಾರದ ವರೆಗೆ ಸಮಯ ತೆಗೆದು ಕೊಂಡ ರೋಣ ಪೊಲೀಸ್ ಇಲಾಖೆ ಅಧಿಕಾರಿಗಳು ಇನ್ನೂಳಿದ ಆರೋಪಿಗಳನ್ನು ಮಂಗಳವಾರದ ಒಳಗೆ ಬಂಧಿಸಿ ರೋಣ ದಲಿತ ಮುಖಂಡರಿಗೆ ಕೊಟ್ಟ ಮಾತಿನಂತೆ ನಡೆದು ಕೊಳ್ಳುವವರೋ ಇಲ್ಲವೋ ಎಂದು ಕಾಯ್ದು ನೋಡೋಣ. ಇದೇ ಸಂದರ್ಭದಲ್ಲಿ ಪ್ರಕಾಶ ಹೊಸಳ್ಳಿ.ಸುರೇಶ ನಡುವಿನಮನಿ. ಸೋಮು ನಾಗರಾಜ್. ಯಲ್ಲಪ್ಪ ಹಿರೇಮನಿ. ಶರಣಪ್ಪ ದೊಡ್ಡಮನಿ ವಾಸುದೇವ ಹರುಣಸಿ. ಪ್ರಕಾಶ ಮಾದರ. ದುರುಗಪ್ಪ ಮಾದರ. ಚಂದ್ರು ಹಂಚಿನಾಳ. ಮಾದೇವ ತಗ್ಗಿನಮನಿ.ಅಭಿಷೇಕ ಕೊಪ್ಪದ. ಹುಚ್ಚಿರಪ್ಪ ಬಾವಿಮಣಿ.ಸುರೇಶ ಹಲಗಿ. ಮಂಜು ಹಲಗಿ.ಸೇರಿದಂತೆ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ವರದಿ. ಅಂದಪ್ಪ ಮಾದರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button