ಅಕ್ರಮ ಮರಳು ದಂಧೆ ಅಮಾಯಕ ವ್ಯಕ್ತಿಯ ಬಲಿ.
ಮಲ್ಲನಾಯಕನಹಳ್ಳಿ ನವೆಂಬರ್.10

ಕೊಟ್ಟೂರು ತಾಲೂಕಿನ ಅಕ್ರಮ ಮರಳು ಗಣಿಗಾರಿಕೆಗೆ ಮಲ್ಲನಾಯಕಹಳ್ಳಿ ಗ್ರಾಮದ ಹೊಸದುರ್ಗದ ತಿಮ್ಮಣ್ಣ (೪೨) ಎಂಬ ವ್ಯಕ್ತಿ ಬಲಿ ಇತ್ತೀಚೆಗೆ ಈ ತಾಲ್ಲೂಕು ಅಕ್ರಮ ಮರಳು ಗಣಿಗಾರಿಕೆಯ ತಾಣವಾಗಿದೆ. ಮರಳು ದಂಧೆಗೆ ವ್ಯಕ್ತಿಯನ್ನು ಆಹುತಿ ಪಡೆದ ಘಟನೆ ನಡೆದಿದೆ.! ದಿನ ಗೂಲಿಗಾಗಿ ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವ ಅಮಾಯಕ ಜನರು ತಮ್ಮ ಪ್ರಾಣವನ್ನು ಲೆಕ್ಕಿಸದೇ ರಾತ್ರೋ ರಾತ್ರಿ ಹೋಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವರಿಂದ.ಜನರ ಪ್ರಾಣಗಳನ್ನು ಆಹುತಿ ಪಡೆಯುತ್ತಿದ್ದಾರೆ.! ಈ ಭಾಗದಲ್ಲಿ ದಿನವೂ ಈ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಸರ್ಕಾರ ಕಟ್ಟು ನಿಟ್ಟಾದ ಕ್ರಮಗಳನ್ನು ಕೈ ಗೊಂಡಿದ್ದರೂ ಸಹ ಅದು ಕೊಟ್ಟೂರಿಗೆ ಅನ್ವಯ ವಾಗಿಲ್ಲವೆನಿಸುತ್ತಿದೆ.! ಅಲ್ಲೊಂದು ಇಲ್ಲೊಂದು ಸಾರ್ವಜನಿಕವಾಗಿ ಕಂಡರೆ ಮಾತ್ರ ಅವುಗಳನ್ನು ಹಿಡಿದು ನೆಪ ಮಾತ್ರಕ್ಕೆ ದಂಡ ಕಟ್ಟಿಸಿ ಕೊಳ್ಳುವ ಅಧಿಕಾರಿಗಳಿ ರುವುದರಿಂದ ಅಕ್ರಮ ಮರಳು ಗಣಿಗಾರಿಕೆ ನಡೆಸುವವರು ರಾಜಾ ರೋಷವಾಗಿ ನಡೆಸುತ್ತಿದ್ದಾರೆ.! ದುಂಡಾ ವರ್ತನೆಗಳ.ಇಂತಹವರ ವಿರುದ್ಧ ಸರ್ಕಾರ, ಕ್ಷೇತ್ರದ ಶಾಸಕರು, ಮೇಲಾಧಿಕಾರಿಗಳು ಗಮನ ಹರಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಜನರ ಮರಣಯಾತ್ರೆ ಮುಂದುವರೆಯುತ್ತಲೇ ಇರಬಹುದು? ಕೊಟ್ಟೂರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮೃತ ಕುಟುಂಬಸ್ಥರು ಆಕ್ರಂದನ.! ಮಧು ರಾಮು , ಚಂದ್ರು, ಶ್ರೀನಿವಾಸ್, ಸಾರ್ವಜನಿಕರಲ್ಲಿ ಚರ್ಚೆ….!
ಕೋಟ್-೧ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ನಮ್ಮ ಇಲಾಖೆಯವರು ಭಾಗಿಯಾಗಿದ್ದರೆ ಅವರ ಮೇಲೂ ಸಹ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವೆ.ಹರಿಬಾಬು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಜಯನಗರ ಜಿಲ್ಲಾ (ಹೊಸಪೇಟೆ)
ಕೋಟ್-೨ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಮಾಹಿತಿ ನೀಡಲು ಗಣಿ ಭೂ ವಿಜ್ಞಾನ ಅಧಿಕಾರಿಗಳನ್ನು ಸಂಪರ್ಕಿಸಿದರೆ,ಅವರು ಸಂಪರ್ಕಕ್ಕೇ ಸಿಗುತ್ತಿಲ್ಲ. ಗಣಿಭೂವಿಜ್ಞಾನ ಇಲಾಖೆಯವರು ಯಾವ ಕೆಲಸ ಮಾಡುತ್ತಿದ್ದಾರೆ. ಒಂದು ರೀತಿಯಲ್ಲಿ ಈ ಇಲಾಖೆ ಇದ್ದೂ ಇಲ್ಲದಂತಾಗಿದೆ.ಚಂದ್ರಶೇಖರ್ ಡಿ.ಎಸ್.ಎಸ್. ತಾಲ್ಲೂಕು ಅಧ್ಯಕ್ಷ.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ. ಕೊಟ್ಟೂರು