ಸ್ಪರ್ಧಾರ್ಥಿಗಳೇ ಆತಂಕ ಪಡುವ ಅಗತ್ಯವಿಲ್ಲ ಸಮುದಾಯದ ಎರಡು ಹಂತದಲ್ಲಿ (ಪಾದಯಾತ್ರೆ ಹಾಗೂ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟ ಧರಣಿ) ಒಳ ಮೀಸಲಾತಿ ಹೋರಾಟಕ್ಕೆ ಇಳಿದ್ದಿದ್ದಾಗಿದೆ ಶೀಘ್ರದಲ್ಲಿ ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಯಾಗಲಿದೆ.

ಚಿತ್ರದುರ್ಗ ಮಾ.03

ಒಳ ಮೀಸಲಾತಿ ಜಾರಿ ಗೊಳಿಸುವಲ್ಲಿ ರಾಜ್ಯ ಕಾಂಗ್ರೆಸ ಸರ್ಕಾರ ಅನಗತ್ಯವಾಗಿ ವಿಳಂಭ ಮಾಡುತ್ತಿರುವುದನ್ನು ವಿರೋಧಿಸಿ ಮಾ. 5 ರಂದು ಬಿ.ಕೃಷ್ಣಪ್ಪ ಸಮಾಧಿ ಯಿಂದ ಪಾದಯಾತ್ರೆ ಹೊರಟು 22 ರಂದು ಬೆಂಗಳೂರು ತಲುಪಲಿದೆ ಎಂದು ಒಳ ಮೀಸಲಾತಿ ಹೋರಾಟಗಾರ ಬಿ.ಆ‌ರ್ ಭಾಸ್ಕರ್ ಪ್ರಸಾದ್ ತಿಳಿಸಿದರು.ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರಿಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಇಷ್ಟೊತ್ತಿಗಾಗಲೇ ಒಳ ಮೀಸಲಾತಿಯನ್ನು ಜಾರಿ ಗೊಳಿಸ ಬೇಕಿತ್ತು. ದಲಿತರನ್ನು ಯಾಮಾರಿಸುವ ನಯ ವಂಚಕತನ ಪ್ರದರ್ಶಿಸುತ್ತಿದೆ. ಪಾದ ಯಾತ್ರೆಯಲ್ಲಿ ಅರೆಬೆತ್ತಲೆ, ಉರುಳುಸೇವೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್‌.ಸಿ ಮಹದೇವಪ್ಪನ ಅಣಕು ಶವ ಯಾತ್ರೆ ಇರುತ್ತದೆ. ಕಾರ್ಯಕರ್ತರು ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಅಂತಿಮ ಎಚ್ಚರಿಕೆ ನೀಡಲಿದ್ದಾ ರೆಂದರು.ನಮ್ಮ ನೋವು ಅರ್ಥ ಮಾಡಿಕೊಂಡು ಶೀಘ್ರವೇ ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಪಾದಯಾತ್ರೆ ಆರಂಭಿಸಿದ್ದು, ದಿನಕ್ಕೆ ಹದಿನೈದರಿಂದ ಇಪ್ಪತ್ತು ಕಿ.ಮೀ. ನಡೆದು ಯಾತ್ರೆ ಬೆಂಗಳೂರು ತಲುಪಲಿದೆ. ಮಾದಿಗ ಸಮುದಾಯದ ಸಚಿವರುಗಳ ಅಣಕು ಬೊಂಬೆಗಳನ್ನು ಮಾಡಿ ರಕ್ತದ ಅಭಿಷೇಕ ಮಾಡುತ್ತೇವೆ. ಒಟ್ಟಾರೆ ಈ ಪಾದಯಾತ್ರೆ ಉಗ್ರವಾಗಿರುತ್ತದೆ. ಜಸ್ಟಿಸ್ ನಾಗಮೋಹನ್‌ ದಾಸ್ ಸರ್ಕಾರಕ್ಕೆ ನೀಡಿರುವ ಗಡುವು ಮುಗಿದಿರುವು ದರಿಂದ ಯಾವುದೇ ಕಾರಣಕ್ಕೂ ತಡ ಮಾಡದೆ ಒಳ ಮೀಸಲಾತಿಯನ್ನು ಜಾರಿ ಗೊಳಿಸ ಬೇಕೆಂಬುದು ನಮ್ಮ ಉದ್ದೇಶ. ಒಳ ಮೀಸಲಾತಿ ಬಗ್ಗೆ ಚಿಂತಿಸುವ ಎಲ್ಲಾ ಸಂಘಟನೆಗಳು ಪಾದ ಯಾತ್ರೆಯಲ್ಲಿ ಪಾಲ್ಗೊಳ್ಳ ಬಹುದೆಂದು ಬಿ.ಆ‌ರ್ ಭಾಸ್ಕರ ಪ್ರಸಾದ್ ಮನವಿ ಮಾಡಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button