ಮಕ್ಕಳಿಗೆ ಮನ ಮುಟ್ಟುವಂತೆ ಉಪನ್ಯಾಸ ನೀಡಿ – ರಾಜಶೇಖರ್ ನರಗೋದಿ.

ಸಿಂದಗಿ ಸ.21

ವಿದ್ಯಾ ಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಕಾರ್ಯಕ್ರಮದ ಅಡಿಯಲ್ಲಿ ಪೌಷ್ಟಿಕತೆ, ಆರೋಗ್ಯ ಮತ್ತು ಶುಚಿತ್ವ ” ವಿಷಯದ ಕುರಿತು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು ಸದರಿ ವಿಷಯದ ಕುರಿತು ಸಾರ್ವಜನಿಕ ಆಸ್ಪತ್ರೆ ಸಿಂದಗಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಗಳಾದ ಶ್ರೀ ರಾಜಶೇಖರ್ ನರಗೋದಿ ಇವರು ಮಕ್ಕಳನ್ನು ಉದ್ದೇಶಿಸಿ ಪೌಷ್ಟಿಕತೆ ಆರೋಗ್ಯ ಶುಚಿತ್ವದ ಕುರಿತು ಮಕ್ಕಳಿಗೆ ಮನ ಮುಟ್ಟುವಂತೆ ಉಪನ್ಯಾಸ ನೀಡಿದರು. ಮತ್ತು ಸೊಳ್ಳೆಗಳಿಂದ ಹರಡುವ ಮಲೇರಿಯಾ ಡೆಂಗ್ಯೂ, ಚಿಕನ್ ಗುನ್ನಾ, ರೋಗದ ಬಗ್ಗೆ ವಿವರಣೆ ನೀಡಿದರು. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊಳ್ಳಲು ಪೌಷ್ಠಿಕ ಆಹಾರ ದ್ವಿದಳ ಧಾನ್ಯ ಸಿರಿಧಾನ್ಯ ಹಾಗೂ ಹಸಿರು ತರಕಾರಿಗಳು ಸೇವಿಸ ಬೇಕೆಂದು ಹೇಳಿದರು. ಮತ್ತು ಕುರುಕುರೆ ಪಿಜ್ಜಾ ಬರ್ಗರ್ ಇವೆಲ್ಲ ಜಂಗ್ ಫುಡ್ ಇದರಿಂದ ದೇಹಕ್ಕೆ ಹಾನಿಕರವಾಗುವು ದೆಂದು ವಿವರಣೆ ಕೊಟ್ಟರು ಇದೇ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕುಸುಮ ಆಳಗಿ ಇವರು ಆರೋಗ್ಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲಾಗಿತ್ತು ಅಭಿನಯ ಭಾಷಣ ಆಹಾರ ಮತ್ತು ಪೌಷ್ಟಿಕತೆಯ ಕುರಿತು ಮಕ್ಕಳು ಪ್ರದರ್ಶನ ನೀಡಿದರು. ಕಾರ್ಯಕ್ರಮದ ಸ್ವಾಗತವನ್ನು ಶ್ರೀಮತಿ ಸಕ್ಕುಬಾಯಿ ಡಾಂಗಿ ಇವರು, ಕಾರ್ಯಕ್ರಮ ಮತ್ತು ನಿರೂಪಣೆಯನ್ನು ಶ್ರೀ ವಿಕಾಸ್ ವಂದನಾರ್ಪಣೆಯನ್ನು ಶ್ರೀಮತಿ ದೀಕ್ಷಾ ಶ್ರೀಮತಿ ರೂಪಾ ಪ್ರತಿಜ್ಞಾ ವಿಧಿ ಭೋಧಿಸಿದರು. ಮಕ್ಕಳಾದ ಕು ಈಶ್ವರಿ ಸೃಷ್ಟಿ, ಭುವನ್ ಭೂತಿ ಕಾರ್ತಿಕ್ ಭಾಷಣ ಮಾಡಿದರು. ಅರ್ಪಿತ ಪೂರ್ಣಿಮಾ ಸಂಗಮೇಶ್ ಶಂಕರ್ ಈಶ್ವರ್ ಹರೀಶ್ ಪೌಷ್ಟಿಕಾಂಶಗಳಿಗೆ ಸಂಬಂಧಿಸಿದ ಕಥೆಗಳನ್ನು ವಾಚಿಸಿದರು. ರವಿಕುಮಾರ್, ಮಲ್ಲಿಕಾರ್ಜುನ್ ಭಗವಂತ, ಮಲ್ಕಪ್ಪ, ಪೌಷ್ಟಿಕಾಂಶದ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪ್ರಗತಿ, ಲಕ್ಷ್ಮೀ ಗುರು ಮಾತೆಯರು ಭಾಗವಹಿಸಿದ್ದರು. ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಕಾಲ ಕಳೆದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button