ಹಲವು ಬೇಡಿಕೆಗಳು ಈಡೇರಿಸುವಂತೆ ಗ್ರಾಮ ಆಡಳಿತಾ ಅಧಿಕಾರಿಗಳಿಂದ 2 ನೇ. ಹಂತದ – ಹೋರಾಟದ ಮುಷ್ಕರ.

ಕೂಡ್ಲಿಗಿ ಫೆ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಡಳಿತ ಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ ಕೇಂದ್ರ ಕಚೇರಿ ಕಂದಾಯ ಭವನ ಬೆಂಗಳೂರು, ತಾಲೂಕು ಘಟಕ ಕೂಡ್ಲಿಗಿ ಇವರ ವತಿಯಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಕರ್ಯಗಳು ಹಾಗೂ ಸೇವಾ ಸೌಲಭ್ಯಗಳನ್ನು ಒದಗಿಸಲು ಹಾಗೂ ಹಲವು ಬೇಡಿಕೆ ಗಳೊಂದಿಗಳ ಸರ್ಕಾರ ಈಡೇರಿಸುವಂತೆ ಸೋಮವಾರ ರಂದು ಗ್ರಾಮ ಆಡಳಿತ ಅಧಿಕಾರಿಗಳ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ವೆಂಕಟೇಶ್ ಇವರು ಸರ್ಕಾರಿ ನೌಕರಾದ ಗ್ರಾಮ ಆಡಳಿತ ಅಧಿಕಾರಿಗಳ ಪರವಾಗಿ ಸರ್ಕಾರಕ್ಕೆ ಸಾರ್ವಜನಿಕರ ಕೆಲಸಗಳನ್ನು ಮಾಡುತ್ತಿರುವಂತಹ ಅಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಈ ಮುಷ್ಕರದಲ್ಲಿ ಭಾಗವಹಿಸಿ ತಮ್ಮ ಹೋರಾಟದ ಪ್ರಮುಖ ಬೇಡಿಕೆಗಳನ್ನು ಮಾನ್ಯ ತಹಶೀಲ್ದಾರ್ರಾದ ರೇಣುಕಾ ಇವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ನೀಡುವುದ ರೊಂದಿಗೆ ಮನವಿ ಪತ್ರದಲ್ಲಿ ಮನವಿ ಮಾಡಿ ಕೊಂಡಂತಹ ಬೇಡಿಕೆಗಳನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಘನ ಸರ್ಕಾರಕ್ಕೆ ರಾಜ್ಯ ವ್ಯಾಪಿಯ ಅನಿರ್ದಿಷ್ಟವಾಗಿ ಎಲ್ಲಾ ಕೆಲಸಗಳನ್ನು ಸ್ಥಗಿತ ಗೊಳಿಸಿ 2 ನೇ. ಹಂತದ ಮುಷ್ಕರಕ್ಕೆ ರಾಜ್ಯದ ಗ್ರಾಮ ಅಧಿಕಾರಿಗಳು ಮುಂದಾಗಿದ್ದಾರೆ ಆದ್ದರಿಂದ ಸರ್ಕಾರ ಬೇಗನೆ ಎಚ್ಚೆತ್ತು ಕೊಂಡು ಶೀಘ್ರದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೋರಾಟದ ಮೂಲಕ ವ್ಯಕ್ತಪಡಿಸಿದ್ದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳ ಸಂಘದ ತಾಲೂಕ ಅಧ್ಯಕ್ಷರು ಮರುಳಸಿದ್ದಪ್ಪ, ಇಮ್ರಾನ್, ದೇವೇಂದ್ರನಾಯ್ಕ, ಶೋಭಾ, ಶ್ರೀನಿವಾಸ್ ಕೊಡಿ, ಹಾಗೂ ಇನ್ನೂ ಮುಂತಾದವರು ಭಾಗವಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button