ಮಂಜುನಾಥ್ ಅವರಿಗೆ ಗೌರವ ಡಾಕ್ಟರೇಟ್ ಗೆ – ಊರ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಸಿಂದಗಿ ಅ.22

ಪುದುಚೆರಿ (ಪಾಂಡಿಚೇರಿ) ಯ ಗ್ಲೋಬಲ್ ಹ್ಯೂಮನ್ ಪಿಸ್ ಯುನಿವರ್ಸಿಟಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ನೀಡಿರುವ. ಗೌರವ ಡಾಕ್ಟ್ರೇರೇಟ್ ಪದವಿಗೆ ಆಯ್ಕೆ ಆಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಬಲೇಶ್ವರ ಗ್ರಾಮದ ಶ್ರೀ. ಮಂಜುನಾಥ.ಆರ್ ದೊಡಮನೆ ಅವರಿಗೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಿದ್ದಾರೆ. ಶ್ರೀಯುತರಿಗೆ ಹ್ಯೂಮನ್ ಪಿಸ್ ವಿಶ್ವವಿದ್ಯಾಲಯಯದ ಘಟಕೋತ್ಸವ ಕಾರ್ಯಕ್ರಮದಲ್ಲಿ, ಅಕ್ಟೋಬರ್ ೧೯ ರಂದು ಪದವಿ ನೀಡಿ ಗೌರವಿಸಿದರು, ಅತ್ಯಂತ ಹೆಮ್ಮೆಯ ವಿಷಯ ಮಂಜುನಾಥ ದೊಡ್ಮನೆ ಅವರು ಎಲೆಮರಿ ಕಾಯಿಯಂತೆ ತಮ್ಮಅಳಿಲು ಸೇವೆಯನ್ನು ಗೈಯುವುದು ಮತ್ತು ಶಿಕ್ಷಣ ಸಮಾಜ ಸೇವೆ ಮಾಡುವುದು ಅವರ ಉದಾರ ಮನಸ್ಸು ಹೀಗೆ ಅವರಿಗೆ ಇನ್ನಷ್ಟು ಸಮಾಜ ಸೇವೆ ಮಾಡಲು ಹೆಚ್ಚಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇವರಿಗೆ ಈ ಹಿಂದೆ ಹಲವಾರು ಪ್ರಶಸ್ತಿಗಳು ಹರಸಿ ಬಂದಿವೆ, ಇವರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲ್ಲಿ ಜೊತೆಗೆ ಇವರಿಗೆ ಗೌರವ ಡಾಕ್ಟ್ರೇರೇಟ್ ಪದವಿ ನೀಡಿದ ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಹಾಗೂ ಆಡಳಿತ ಮಂಡಳಿಗೂ ಅವರ ಆಪ್ತ ಬಳಗ ಸಮಾಜದ ಬಾಂದವರು ಹಾಗೂ ಗುಬ್ಬೇವಾಡ ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿ ನಿಧಿಯಾದ,ನಿತ್ಯಾನಂದ, ಕಟ್ಟಿಮನಿ ಹಾಗೂ ಹಿತೈಷಿಗಳು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button