“ಬದಲಾವಣೆಯ ಪರ್ವ”…..

ಮದುವೆ ಮತ್ತು ಇತರೆ ಸಮಾರಂಭಗಳಲ್ಲಿ ಫಲ ತಾಂಬೂಲ ಬ್ಲೌಸ್ ಪೀಸ್ ಗಳು. ಪ್ಲಾಸ್ಟಿಕ್ ಅಥವಾ ಸ್ಟೀಲ್ ಬಾಕ್ಸ್ ಗಳು. ತೆಂಗಿನಕಾಯಿ ಕೊಡುವ ಪದ್ದತಿಗಳಿವೆ ಮೊದಲು ಮದುವೆಯನ್ನು ಮನೆಯಂಗಳದಲ್ಲಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಕಲ್ಯಾಣ ಮಂಟಪಗಳಲ್ಲಿ ಮಾಡುತ್ತಿದ್ದರು. ನಂತರದಲ್ಲಿ ರೆಸಾರ್ಟ್ ಗಳಲ್ಲಿ ಮಾಡುತ್ತಿದ್ದರು. ಹೀಗೆ ಬದಲಾವಣೆ ಆಗುತ್ತಲೇ ಇರುತ್ತದೆ. ಆದ್ದರಿಂದ ಈ ರೀತಿಯಲ್ಲಿಯೂ ಒಂದು ಬದಲಾವಣೆ ಯಾಕಾಗ ಬಾರದು. ಅದೇನೆಂದರೆ ಸಾಹಿತಿಗಳು ಬರೆದ ಪುಸ್ತಕಗಳನ್ನು ಕೊಂಡು ಸಮಾರಂಭಗಳಲ್ಲಿ ಬಂದ ಅತಿಥಿಗಳಿಗೆ ನೀಡಿದರೆ ಸಾಹಿತಿಗಳನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಬರೆಯುವ ಹುಮ್ಮಸ್ಸು ಹೆಚ್ಚುತ್ತದೆ. ಹಾಗೂ ಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸಿ ದಂತಾಗುತ್ತದೆ. ಇನ್ನೂ ಮುಂದೆಯಾದರೂ ಮದುವೆ ಸಮಾರಂಭಗಳನ್ನು ನಡೆಸುವವರು ಈ ಒಂದು ಬದಲಾವಣೆಯ ಅನಿಸಿಕೆಯನ್ನು ಗಮನಿಸಿ ಕಾರ್ಯೋನ್ಮುಖರಾದರೆ ಅದೊಂದು ಬದಲಾವಣೆಯ ಪರ್ವ ಎನ್ನಬಹುದಲ್ಲವೆ ?
ಈ ರವೀಶ ಅಕ್ಕರ ಸಂಸ್ಥಾಪಕ ಅಧ್ಯಕ್ಷರು ವಿಶ್ವ ಕನ್ನಡ ಕಲಾ ಸಂಸ್ಥೆ,
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕೆ. ಹೊಸಹಳ್ಳಿ.